Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಶೋಷಿತರ ಪರವಾಗಿ ಮಿಡಿವ ಕತೆಗಳು

ಶೋಷಿತರ ಪರವಾಗಿ ಮಿಡಿವ ಕತೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ15 July 2017 12:05 AM IST
share
ಶೋಷಿತರ ಪರವಾಗಿ ಮಿಡಿವ ಕತೆಗಳು

2012ರ ಸಾಲಿನ ಕೇಂದ್ರ ಸಾಹಿತ್ಯ ಯುವ ಪುರಸ್ಕಾರ ಪಡೆದ ತೆಲುಗು ಯುವ ಲೇಖಕ ವೇಂಪಲ್ಲಿ ಶರೀಫ್ ಅವರ ಕಥಾ ಸಂಕಲನ ‘ಜುಮ್ಮಾ’. ಸೃಜನ್ ಅವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಶೋಷಿತ ಸಮುದಾಯದ ಪರವಾಗಿ ಮಿಡಿಯುವ ಇಲ್ಲಿರುವ ಕತೆಗಳು, ಸಮುದಾಯದೊಳಗಿನ ಶೋಷಣೆ ನೋವನ್ನು ಆರ್ದ್ರವಾಗಿ ಕಟ್ಟಿಕೊಡುವ ಕೆಲಸವನ್ನು ಮಾಡುತ್ತದೆ. ಇಲ್ಲಿ ಒಟ್ಟು 13 ಕತೆಗಳಿವೆ. ಯಾವುದೂ ಸುದೀರ್ಘವಾಗಿಲ್ಲ. ಆದರೆ ನಮ್ಮ ಆಳವನ್ನು ಕಲಕುವ ಶಕ್ತಿಯನ್ನು ಹೊಂದಿವೆ. ರಾಯಲ ಸೀಮ ಎಂಬ ವಿಕ್ಷಿಪ್ತ ನೆಲದ ಮುಸ್ಲಿಂ ಸಂವೇದನೆಯ ಕತೆಗಳಿವೆ. ಸಾಧಾರಣವಾಗಿ ಮುಸ್ಲಿಮರು ಎನ್ನುವಾಗ ಅವರ ಸಂವೇದನೆಗಳೆಲ್ಲ ಒಂದೇ ಧಾಟಿಯವುಗಳು ಎನ್ನುವ ತಪ್ಪು ಕಲ್ಪನೆಯಿದೆ. ಪ್ರದೇಶದಿಂದ ಪ್ರದೇಶಕ್ಕೆ ಮುಸ್ಲಿಮ್ ಸಂವೇದನೆಗಳು ವೈವಿಧ್ಯಮಯವಾಗಿದೆ. ಅವರ ಭಾಷೆ, ಬದುಕು, ಶೈಲಿ ವಿಭಿನ್ನವಾಗಿವೆ. ನೋವುಗಳು, ಶೋಷಣೆಗಳೂ ಅಷ್ಟೇ. ಆದುದರಿಂದ ಆಂಧ್ರ ಭಾಗದ ಮುಸ್ಲಿಮರ ಬದುಕನ್ನು ಇಲ್ಲಿರುವ ಕತೆಗಳು ಭಿನ್ನವಾಗಿ ಕಟ್ಟಿಕೊಡುತ್ತವೆ. ಶ್ರೀಸಾಮಾನ್ಯರ ದೈನಂದಿನ ಕಷ್ಟ ಸುಖಗಳನ್ನೇ ಜೀವದ್ರವ್ಯವನ್ನಾಗಿ ಹೊಂದಿರುವ ಈ ಕತೆಗಳು, ಸಾಮಾನ್ಯರ ಬದುಕಿನ ಮೂಲಕವೇ ಅಸಾಧಾರಣ ಜೀವನ ಕಾಣ್ಕೆಗಳನ್ನು ಹೊರ ಹಾಕುವ ವಿವೇಕ ಹಾಗೂ ಗ್ರಹಿಕೆಯ ಗುಣವನ್ನು ಹೊಂದಿವೆ. ಪರದೆ ಕತೆಯ ಅಜ್ಜಿ, ಜುಮ್ಮಾ ಕತೆಯ ಅಮ್ಮ, ಪಚ್ಚೆ ರಂಗೋಲಿಯ ಅಕ್ಕ, ದೇವರು ಕತೆಯ ಗೌಸಿಯಾ ಪಾತ್ರಗಳು ಇದಕ್ಕೆ ಸಾಕ್ಷಿ. ಜುಮ್ಮಾ ಕತೆಯಲ್ಲಿ ಬಗಲಲ್ಲಿ ಬಾಂಬ್ ಬಿದ್ದರೂ ಅಲ್ಲಾಹ್‌ನನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು ಎಂದು ಹೇಳುವ ಅಮ್ಮನೇ, ಮಸೀದಿಯಲ್ಲಿ ನಿಜವಾಗಿಯೂ ಬಾಂಬ್ ಸ್ಫೋಟಗೊಂಡಾಗ ‘ಇನ್ನು ಮುಂದೆ ಆ ಮಸೀದಿಗೆ ಹೋಗಬೇಡ ಮಗನೇ’ ಎಂದು ಕೇಳಿಕೊಳ್ಳುವ ದೀನ ಧ್ವನಿ ಲೇಖಕನಿಗೆ ಬೆರಗು ತರಿಸುತ್ತವೆ. ಇಂತಹ ಬೆರಗುಗೊಳಿಸುವ ಆರ್ದ್ರ ಭಾವಗಳು ಅಲ್ಲಲ್ಲಿ ಜೀವ ವೀಣೆಯಾಗಿ ಮಿಡಿಯುತ್ತವೆ. ಧರ್ಮ, ಜಾತಿಗಳ ಮಿತಿಗಳನ್ನು ಹೇಳುತ್ತಾ ಆ ಗೋಡೆಯಾಚೆಯ ಮಾನವೀಯ ಕಳಕಳಿಗಾಗಿ ಇಲ್ಲಿರುವ ಪ್ರತಿ ಕತೆಗಳೂ ಗೋಗರೆ ಯುತ್ತವೆ. ಹೆಚ್ಚಿನ ಕತೆಗಳು ಒಂದು ರೀತಿಯ ಅಸಹಾಯಕತೆಯಲ್ಲಿ ತೆರೆದುಕೊಂಡವುಗಳಂತೆ ನಮಗೆ ಭಾಸವಾಗುತ್ತವೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 75 ರೂಪಾಯಿ. 

share
-ಕಾರುಣ್ಯಾ
-ಕಾರುಣ್ಯಾ
Next Story
X