Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 50 ವರ್ಷಗಳಲ್ಲಿ 300 ಚಿತ್ರಗಳು

50 ವರ್ಷಗಳಲ್ಲಿ 300 ಚಿತ್ರಗಳು

ಶ್ರೀದೇವಿಯ ಅದ್ವಿತೀಯ ಸಾಧನೆ

ವಾರ್ತಾಭಾರತಿವಾರ್ತಾಭಾರತಿ15 July 2017 6:17 PM IST
share
50 ವರ್ಷಗಳಲ್ಲಿ 300 ಚಿತ್ರಗಳು

ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್‌ಆಫೀಸ್ ಗೆಲ್ಲುವ ಕುದುರೆಗಳೆಂದೇ ಖ್ಯಾತಿಪಡೆದ ಖಾನ್‌ತ್ರಯರಾದ ಸಲ್ಮಾನ್‌ಖಾನ್, ಆಮಿರ್‌ಖಾನ್ ಹಾಗೂ ಶಾರುಖ್ ಖಾನ್ ಈ ಮೂವರು ನಟಿಸಿದ ಚಿತ್ರಗಳನ್ನು ಒಟ್ಟು ಸೇರಿಸಿದರೂ ಅವು 250ರ ಗಡಿಯನ್ನು ದಾಟದು. ಆದರೆ ಎವರ್‌ಗ್ರೀನ್ ಹೀರೋಯಿನ್ ಎಂದೇ ಖ್ಯಾತಿಪಡೆದ ಶ್ರೀದೇವಿ ಈತನಕ 300 ಚಿತ್ರಗಳಲ್ಲಿ ನಟಿಸಿ ಹೊಸ ಸಾಧನೆ ಮಾಡಿದ್ದಾರೆ. ಶ್ರೀದೇವಿಯ ಚಿತ್ರ ಬದುಕಿಗೆ ಈಗ 50 ವರ್ಷ ತುಂಬಿದ್ದು, ಇತ್ತೀಚೆಗೆ ತೆರೆಕಂಡ ಅವರ ಅಭಿನಯದ ಮಾಮ್ ಕೂಡಾ ಯಶಸ್ಸು ಕಂಡಿದೆ. ಯಾವುದೇ ಪಾತ್ರ ದೊರೆಯಲಿ ಸಮರ್ಪಣಾ ಮನೋಭಾವದೊಂದಿಗೆ ಆ ಪಾತ್ರ ದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಶ್ರೀದೇವಿಯ ಗೆಲುವಿಗೆ ಒಂದು ಮುಖ್ಯ ಕಾರಣವಾಗಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ ನಟಿಸಿರುವ ಶ್ರೀದೇವಿಯ ಚಿತ್ರ ಬದುಕಿಗೆ ಈ ವರ್ಷ 50 ವಸಂತಗಳು ತುಂಬಿವೆ.

1963ರ ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿಯ ತಂದೆ ಅಯ್ಯಪ್ಪನ್ ಹಾಗೂ ತಾಯಿ ರಾಜೇಶ್ವರಿ. ಓರ್ವ ಸಹೋದರ ಹಾಗೂ ಇನ್ನಿಬ್ಬರು ಮಲಸಹೋದರರ ಜೊತೆ ಬೆಳೆದ ಶ್ರೀದೇವಿ, ತನ್ನ ಮೂರನೆ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1967ರಲ್ಲಿ ಕಂದನ್‌ಕರುಣೈ ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದರು. 1969ರಲ್ಲಿ ಕುಮಾರಸಂಭವ ಎಂಬ ಮಲಯಾಳಂ ಚಿತ್ರದಲ್ಲೂ ಆಕೆ ಬಾಲನಟಿಯಾಗಿ ಅಭಿನಯಿಸಿದ್ದರು.

 1974ರಲ್ಲಿ ತೆರೆಕಂಡ ಭಕ್ತ ಕುಂಬಾರ ಕನ್ನಡ ಚಿತ್ರದಲ್ಲೂ ಶ್ರೀದೇವಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. 1975ರಲ್ಲಿ ಬಿಡುಗಡೆ ಯಾದ ‘ಜೂಲಿ’, ಆಕೆ ಅಭಿನಯಿಸಿದ ಮೊದಲ ಹಿಂದಿ ಚಿತ್ರ. 1976ರಲ್ಲಿ ಬಾಲಚಂದರ್ ನಿರ್ದೇಶನದ ‘ಮೂನ್ರು ಮುಡಿಚ್ಚು’ ಚಿತ್ರದ ಮೂಲಕ ಶ್ರೀದೇವಿ ಮೊದಲ ಬಾರಿಗೆ ನಾಯಕಿಯ ಪಟ್ಟವನ್ನಲಂಕರಿಸಿದರು. ಕಮಲಹಾಸನ್ ಹಾಗೂ ರಜನಿಕಾಂತ್ ಈ ಚಿತ್ರದ ನಾಯಕರು. ಆನಂತರ ತೆರೆಕಂಡ ‘ಪದಿನಾರು ವಯದಿನಿಲೆ’ ಶ್ರೀದೇವಿಯನ್ನು ತಮಿಳಿನ ನಂ.1 ನಾಯಕಿಯ ಸ್ಥಾನಕ್ಕೇರಿಸಿತು. ಹೀಗೆ ಕಮಲ್-ಶ್ರೀದೇವಿ ಜೋಡಿ ಹಲವಾರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿತು.

‘ಕ್ಷಣಂಕ್ಷಣಂ’, ‘ಅಖಿರಿ ಪೋರಾಟಂ’, ‘ಬೊಬ್ಬಿಲಿಪುಲಿ’, ‘ಜಗದೇಕ ವೀರುಡು ಅತಿಲೋಕ ಸುಂದರಿ’ ಶ್ರೀದೇವಿ ನಟಿಸಿದ ಕೆಲವು ಸೂಪರ್‌ಹಿಟ್ ತೆಲುಗು ಚಿತ್ರಗಳಾಗಿವೆ. ಈ ನಡುವೆ ಶ್ರೀದೇವಿ ಮಲಯಾಳಂನಲ್ಲಿ ‘ದೇವರಾಗಂ’, ‘ಅಂಗೀಕಾರಂ’ ಸೇರಿದಂತೆ 12ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಹೀಗೆ ತಮಿಳು, ತೆಲುಗಿನಲ್ಲಿ ಅಸಂಖ್ಯ ಹಿಟ್ ಚಿತ್ರಗಳನ್ನು ನೀಡಿದ ಶ್ರೀದೇವಿ 1979ರಲ್ಲಿ ‘ಸೊಲ್ವಾ ಸಾವನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಮಾರನೆ ವರ್ಷ ಆಕೆ ಜಿತೇಂದ್ರ ಜೊತೆ ಅಭಿನಯಿಸಿದ ‘ಹಿಮ್ಮತ್‌ವಾಲ್’ ಸೂಪರ್‌ಹಿಟ್ ಎನಿಸಿತು. ಆನಂತರ ಬಿಡುಗಡೆಯಾದ ‘ಮಿ. ಇಂಡಿಯಾ’, ‘ಚಾಂದಿನಿ’ ಮತ್ತಿತರ ಚಿತ್ರಗಳು ಶ್ರೀದೇವಿಯನ್ನು ಬಾಲಿವುಡ್‌ನಲ್ಲಿಯೂ ನಂ.1 ಸ್ಥಾನಕ್ಕೇರಿಸಿತು. 1996ರಲ್ಲಿ ಅನಿಲ್ ಕಪೂರ್ ಸಹೋದರ ಬೋನಿಕಪೂರ್‌ರನ್ನು ವಿವಾಹದ ಬಳಿಕ ಶ್ರೀದೇವಿ ಸ್ವಲ್ಪ ವರ್ಷ ತೆರೆಯ ಮರೆಗೆ ಸರಿದರು. ವಿವಾಹವಾದ ಆನಂತರದ ಏಳು ವರ್ಷಗಳ ಬಿಡುವಿನ ಬಳಿಕ ಶ್ರೀದೇವಿ 2012ರಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ಅಭಿನಯಿಸಿ ಮತ್ತೆ ಪ್ರೇಕ್ಷಕರ ಮನಗೆದ್ದರು. ಇದೀಗ ರವಿ ಉದ್ಯಾವರ್ ನಿರ್ದೇಶನದ ‘ಮಾಮ್’ ಕೂಡಾ ಬಾಕ್ಸ್ ಆಫೀಸಿನಲ್ಲಿ ಗೆಲ್ಲುವ ಭರವಸೆ ಮೂಡಿಸಿದೆ. ತಾಯಿ, ಮಗಳ ಬಾಂಧವ್ಯದ ಕತೆ ಹೇಳುವ ‘ಮಾಮ್’ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಎರಡು ಹೆಣ್ಣು ಮಕ್ಕಳ ತಾಯಿಯಾದ ತನಗೆ ಈ ಚಿತ್ರದ ಪಾತ್ರವು ತನ್ನ ಮೇಲೆ ಗಾಢವಾದ ಪರಿಣಾಮ ಬೀರಿದೆಯೆಂದು ಶ್ರೀದೇವಿ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X