Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ದಲಿತರ ಭೂತ, ಭವಿಷ್ಯದ ಕುರಿತಂತೆ...

ದಲಿತರ ಭೂತ, ಭವಿಷ್ಯದ ಕುರಿತಂತೆ ತೇಲ್ತುಂಬ್ಡೆ

-ಕಾರುಣ್ಯ-ಕಾರುಣ್ಯ16 July 2017 12:18 AM IST
share
ದಲಿತರ ಭೂತ, ಭವಿಷ್ಯದ ಕುರಿತಂತೆ ತೇಲ್ತುಂಬ್ಡೆ

ಬಿಜೆಪಿ ಕೋಮುವಾದಿ ಮತ್ತು ಜಾತಿವಾದಿ ಎಂದು ದೇಶದ ಪ್ರಗತಿಪರ ಶಕ್ತಿಗಳು ಖಂಡಿಸಿದಾಗ ಕಾಂಗ್ರೆಸ್ ಪುಳಕಗೊಳ್ಳುತ್ತದೆ. ಆದರೆ ಆಳುವ ವರ್ಗಗಳ ಮುಂಚೂಣಿ ಪಡೆಯಾದ ಕಾಂಗ್ರೆಸ್ ಅದಕ್ಕಿಂತ ಭಿನ್ನವಾಗಿದೆಯೇ? ಕೋಮುವಾದ ಕುರಿತಂತೆ ಅದರ ದಾಖಲೆ ಬಹುತೇಕ ಮಟ್ಟಿಗೆ ಅನುಮಾನಾಸ್ಪದವಾಗಿದೆ.

ದಲಿತರ ಸಮಸ್ಯೆಗಳ ಕುರಿತಂತೆ ಅದರ ವ್ಯವಹಾರಗಳು ಅಸ್ಪಷ್ಟತೆಯಿಂದ ಕೂಡಿವೆ. ದಲಿತರನ್ನು ಅವರ ರಾಜಕೀಯ ಸ್ವಾಯತ್ತೆಯಿಂದ ವಂಚಿತರನ್ನಾಗಿಸಿದ ಪೂನಾ ಒಪ್ಪಂದದ ದಿನಗಳಿಂದ ಆರಂಭಿಸಿ ದಲಿತರ ರಾಜಕೀಯದ ತತ್ವರಹಿತ ಸೇರ್ಪಡೆಗಳ ಮೊದಲಿನ ತನಕ ಕಾಂಗ್ರೆಸ್ ವಹಿಸಿರುವ ಪಾತ್ರ ಅದರ ದಲಿತ ಸ್ನೇಹಿ ಎಂಬ ಸ್ವಕೀಯ ಚಿತ್ರಣಕ್ಕೆ ವಿರುದ್ಧವಾಗಿದೆ. ಪ್ರಾಯಶಃ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಏಕೈಕ ವ್ಯತ್ಯಾಸವಿರುವುದು ಅದರ ರಣನೀತಿಯ ಜಟಿಲತೆಯಲ್ಲಿ ಎಂದು ಅನುಮಾನ ವ್ಯಕ್ತಪಡಿಸುವ ಡಾ.ಆನಂದ್ ತೇಲ್ತುಂಬ್ಡೆ,‘ದಲಿತರು: ಭೂತ-ಭವಿಷ್ಯ’ಕೃತಿಯಲ್ಲಿ ದಲಿತರ ಸಮಕಾಲೀನ ಒಳಸುಳಿ, ಸಂದಿಗ್ಧಗಳನ್ನು ಸೂಕ್ಷ್ಮವಾಗಿ ಗುರುತಿಸಿ ಬರೆದಿದ್ದಾರೆ.

‘‘ಮೂರ್ತೀಕರಣದಿಂದ ಎಲ್ಲವೂ ಸ್ಥಾವರಗೊಳ್ಳುವ ಅಪಾಯವಿರುವ ಭಾರತದಲ್ಲಿ ಆನಂದರ ಜಾಗೃತ ವಿಮರ್ಶಾಪ್ರಜ್ಞೆ ಮಾರ್ಕ್ಸ್‌ವಾದ-ಅಂಬೇಡ್ಕರ್ ವಾದವನ್ನು ಮುನ್ನಡೆಸಬಲ್ಲದು. ಈ ಎರಡೂ ಧಾರೆಗಳು ಒಂದುಗೂಡಿ ನಡೆಯುವುದು ಶೋಷಿತ ಸಮುದಾಯಗಳ ಬಿಡುಗಡೆಯ ದಾರಿಗಷ್ಟು ಬಲ ತುಂಬಬಹುದು. ಪರಸ್ಪರ ಭಿನ್ನಾಭಿಪ್ರಾಯ ಮರೆತು ಅವು ಒಂದುಗೂಡಬೇಕೆಂದು ಪ್ರತಿಪಾದಿಸುವ ಆನಂದ್ ಮಾತುಗಳನ್ನು ವಾಸ್ತವದ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗಿದೆ’’ ಎಂದು ಕೃತಿಯನ್ನು ಸಂಪಾದಿಸಿಕನ್ನಡಕ್ಕಿಳಿಸಿರುವ ಅನುಪಮಾ ಅವರು ಅಭಿಪ್ರಾಯಪಡುತ್ತಾರೆ.

ಕೃತಿಯಲ್ಲಿ ಇತಿಹಾಸ, ವರ್ತಮಾನ, ಭವಿಷ್ಯದಲ್ಲಿ ದಲಿತರು ಎದುರಿಸಿದ, ಎದುರಿಸುತ್ತಿರುವ, ಎದುರಿಸಲಿರುವ ಸವಾಲುಗಳನ್ನು ತೇಲ್ತುಂಬ್ಡೆ ಚರ್ಚಿಸಿದ್ದಾರೆ. ಕೆಂಪು ವರ್ಸಸ್ ನೀಲಿ ಎನ್ನುವ ಮಾತುಗಳನ್ನು ನಿರಾಕರಿಸುವ ಲೇಖಕರು, ಸದ್ಯದಲ್ಲಿ ದಲಿತರು ಎದುರಿಸುತ್ತಿರುವ ಫ್ಯಾಶಿಸ್ಟ್ ಮತ್ತು ಕಾರ್ಪೊರೇಟ್ ಆಘಾತಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಖೈರ್ಲಾಂಜಿ ಪ್ರಕರಣದ ಹೈಕೋರ್ಟ್‌ತೀರ್ಪು ಹೇಗೆ ದಲಿತರ ಆತ್ಮವಿಶ್ವಾಸದ ಮೇಲೆ ದಾಳಿ ನಡೆಸಿತು ಎನ್ನುವುದನ್ನು ಹೇಳುವ ಅವರು, ದಲಿತರ ಮೇಲೆ ನಡೆಯುತ್ತಿರುವ ದಾಳಿಗಳ ಬೇರೆ ಬೇರೆ ಸ್ವರೂಪಗಳನ್ನು ಚರ್ಚಿಸಿದ್ದಾರೆ.

ದಲಿತ ಮೀಸಲಾತಿಯಿಂದ ಹುಟ್ಟಿಕೊಂಡ ದಲಿತ ಬೂರ್ಷ್ವಾ ಜನರ ಕಡೆಗೆ ಗಮನ ಸೆಳೆಯುವ ಅವರು, ದಲಿತ ಚಳವಳಿಗೆ ಹೇಗೆ ದಲಿತರೇ ಸಮಸ್ಯೆಯಾಗಿದ್ದಾರೆ ಎನ್ನುವ ಅಂಶದ ಕಡೆಗೂ ಬೆಟ್ಟು ಮಾಡುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ. 

share
-ಕಾರುಣ್ಯ
-ಕಾರುಣ್ಯ
Next Story
X