Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ17 July 2017 12:07 AM IST
share
ಓ ಮೆಣಸೇ...


  ಕರಾವಳಿ ಗಲಭೆ ಜವಾಬ್ದಾರಿಯನ್ನು ಕೇಂದ್ರಕ್ಕೆ ವಹಿಸಿದರೆ 24 ಗಂಟೆಗಳಲ್ಲಿ ಶಾಂತಿ ಸ್ಥಾಪಿಸಲಾಗುವುದು

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಕಾಶ್ಮೀರ, ಉತ್ತರ ಪ್ರದೇಶದಲ್ಲಿ ಸ್ಥಾಪಿಸಿರುವ ಶಾಂತಿಯನ್ನೇ?
---------------------

ಕರಾವಳಿ ಗಲಭೆಯ ಹಿಂದೆ ಐಎಸ್‌ಐ ಕೈವಾಡ ಇದೆ

-ಸಿ.ಟಿ.ರವಿ, ಶಾಸಕ
 
ನನಗೂ ಐಎಸ್‌ಐಗೂ ಸಂಬಂಧವಿಲ್ಲ ಎಂದರಂತೆ ಪ್ರಭಾಕರ ಭಟ್ಟರು.

---------------------
  ಬಲು ಕಷ್ಟದ ಗಂಗಾನದಿ ಶುದ್ಧೀಕರಣದ ಹೊಣೆಗಾರಿಕೆ ನನ್ನ ಮೇಲಿದೆ

-ಉಮಾಭಾರತಿ, ಕೇಂದ್ರ ಸಚಿವೆ

ಹಣಗಾರಿಕೆಯಲ್ಲಂತೂ ಯಶಸ್ವಿಯಾಗಬಹುದು ಬಿಡಿ.

---------------------
ದೇಶದ ಸಂಸ್ಕೃತಿ ಮತ್ತು ಪರಂಪರೆಯ ಆಧಾರದ ಮೇಲೆ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ

-ವಿ.ರಾಮ್‌ಮಾಧವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಮನುಷ್ಯರನ್ನು ಕೊಲ್ಲುವುದು ದೇಶದ ಸಂಸ್ಕೃತಿ ಮತ್ತು ಪರಂಪರೆಯೇ?
---------------------

ಗೋವಿನ ರಕ್ಷಣೆ ಮಾಡಿದರೆ ನಾಡಿನ ಸಂಸ್ಕೃತಿ ,ಪರಂಪರೆ ಉಳಿಯಲಿದೆ

-ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹೆಣ್ಣಿನ ಮಾನ ರಕ್ಷಣೆಗೂ ಸಂಸ್ಕೃತಿಗೂ ಸಂಬಂಧವಿಲ್ಲವೇ?
---------------------

ಅರಣ್ಯದಲ್ಲಿ ಪ್ರಾಣಿಗಳಿಗೆ ಆಹಾರ, ನೀರು ಸಿಗುವಂತಾಗಬೇಕು

-ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾಡಿನಲ್ಲಿ ಮನುಷ್ಯರಿಗೆ ಅದನ್ನು ಯಾವಾಗ ಒದಗಿಸುತ್ತೀರಿ?
---------------------

ಜಿಎಸ್‌ಟಿ ತುಂಬ ಸರಳ ತೆರಿಗೆ ವ್ಯವಸ್ಥೆಯಾಗಿದ್ದು, ಜನ ಸಂಭ್ರಮ ಪಡುತ್ತಿದ್ದಾರೆ

-ವೆಂಕಯ್ಯನಾಯ್ಡು, ಕೇಂದ್ರ ಸಚಿವ

ತೆರಿಗೆ ವಿಧಿಸಿದ್ದಕ್ಕಾಗಿ ಸಂಭ್ರಮ ಪಡುತ್ತಿರುವ ದೇಶವನ್ನು ವಿಶ್ವ ಅಚ್ಚರಿಯಿಂದ ನೋಡುತ್ತಿದೆ.

---------------------

ಚಿಕ್ಕಪ್ಪ (ಎಚ್.ಡಿ.ಕುಮಾರಸ್ವಾಮಿ)ನ ವಿರುದ್ಧವಾಗಿ ಹೋಗುವುದಿಲ್ಲ ಎಂದು ಪ್ರಜ್ವಲ್ ಹೇಳಿದ್ದಾನೆ

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ನೀವು ಆತನ ಪತ್ರಿಕಾ ವಕ್ತಾರರೇ?
---------------------

ಏನೇ ನಡೆದರೂ ನೋಡಿಕೊಂಡು ಸುಮ್ಮನಿರಲು ದ.ಕ.ದವರೇನು ಷಂಡರಾ?

-ಶೋಭಾ ಕರಂದ್ಲಾಜೆ, ಸಂಸದೆ

ಅವರು ನೋಡಿಕೊಂಡು ಖಂಡಿತಾ ಸುಮ್ಮನಿರುವುದಿಲ್ಲ. ನಿಮಗೊಂದು ಪಾಠವನ್ನು ಚುನಾವಣೆಯಲ್ಲಿ ಕಲಿಸುತ್ತಾರೆ. ---------------------

ಸೂಟ್‌ಕೇಸ್ ಪಡೆದವರು ಪಕ್ಷ ಬಿಟ್ಟಿದ್ದಾರೆ

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
 
ನಾನಿನ್ನೂ ಪಕ್ಷದಲ್ಲೇ ಇದ್ದೇನೆ ಎಂದರಂತೆ ದೇವೇಗೌಡರು.

---------------------

ಮಂಗಳೂರಿನಲ್ಲಿ ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳೇ ಹೈಲೆಟ್ ಆಗುತ್ತಿದೆ

-ಯು.ಟಿ.ಖಾದರ್, ಸಚಿವ

ಮಾಡಿದ ಒಂದು ಒಳ್ಳೆಯ ಕೆಲಸವನ್ನಾದರೂ ಬಹಿರಂಗಪಡಿಸಬಾರದೇ?
---------------------

ನನ್ನ ಬಳಿ ಪೂರ್ವಿಕರು ಬಿಟ್ಟು ಹೋದ ಆಸ್ತಿ ಬಿಟ್ಟು, ಬಿಡಿಗಾಸೂ ಇಲ್ಲ

-ನರೇಂದ್ರ ಮೋದಿ, ಪ್ರಧಾನಿ
ಚಹಾದ ಅಂಗಡಿ ಜೊತೆಗೆ ಆಸ್ತಿಯೂ ಇದೆ ಎಂದಾಯಿತು.

---------------------

ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ

-ರಮೇಶ್‌ಕುಮಾರ್, ಸಚಿವ

ನೀವು ಮಾತ್ರ ಅದನ್ನು ಒಪ್ಪಿಕೊಂಡಿದ್ದೀರಿ ಅಲ್ಲವೇ?
---------------------

ಮುಗ್ಧರನ್ನು ಬಲಿ ಪಡೆಯುವ ಭಯೋತ್ಪಾದಕ ಕೃತ್ಯಗಳು ಹೇಡಿತನದ ಸಂಕೇತ

-ಪ್ರಣವ್ ಮುಖರ್ಜಿ, ರಾಷ್ಟ್ರಪತಿ

ದೇಶದೊಳಗಿರುವ ಹೇಡಿಗಳನ್ನೂ ಒಂದಿಷ್ಟು ಖಂಡಿಸಿ.

---------------------

ರಾಹುಲ್ ಗಾಂಧಿ ಬಚ್ಚಾ ಅಲ್ಲ, ಭಾವಿ ಪ್ರಧಾನಿ

- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಮೊದಲು ಬಾವಿಯೊಳಗಿರುವ ಕಾಂಗ್ರೆಸ್‌ನ್ನು ಮೇಲೆತ್ತಿ.

---------------------

ಪ್ರಧಾನಿ ಮೋದಿ ಆರೆಸ್ಸೆಸ್‌ನಲ್ಲೇ ಇರುತ್ತಿದ್ದರೆ ಗುಜರಾತ್‌ನ ಸಿಎಂ, ದೇಶದ ಪ್ರಧಾನಿ ಆಗುತ್ತಿರಲಿಲ್ಲ  

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಬದಲಿಗೆ ನೀವು ಆ ಸ್ಥಾನ ತುಂಬುತ್ತಿದ್ದಿರಿ ಎಂದಾಯಿತು.

---------------------
ಅಮಾನ್ಯ ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ

-ಡಾ.ಉರ್ಜಿತ್ ಪಟೇಲ್, ಆರ್‌ಬಿಐ ಗವರ್ನರ್

ಇನ್ನೊಂದು ಚುನಾವಣೆ ಬರುವವರೆಗೂ ಎಣಿಸುತ್ತಲೇ ಇರಿ ಎಂದು ಮೋದಿಯಿಂದ ಆದೇಶ ಬಂದಿದೆಯೇ?
---------------------

2004ರಲ್ಲಿ ನನಗೆ ಮೀಸೆಯೇ ಬಂದಿರಲಿಲ್ಲ, ಬೇನಾಮಿ ಆಸ್ತಿ ಹೇಗೆ ಗಳಿಸಲಿ?

-ತೇಜಸ್ವಿ ಯಾದವ್, ಬಿಹಾರ ಉಪಮುಖ್ಯಮಂತ್ರಿ

ಲಾಲು ಪ್ರಸಾದ್ ಅದಕ್ಕೇ ಇರಬೇಕು ಮೀಸೆ ಇಡದೇ ಇರುವುದು.

---------------------
ಸಂಸದೆ ಶೋಭಾ ಕರಂದ್ಲಾಜೆ ದಲಿತರನ್ನು ಮದುವೆಯಾಗಲಿ

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಮದುವೆ ಬ್ರೋಕರ್ ಕೆಲಸ ಬಿಟ್ಟು ರಾಜಕಾರಣಿಗಳಂತೆ ಮಾತನಾಡಿ.

---------------------

ಪ್ರಧಾನಿ ನರೇಂದ್ರ ಮೋದಿ ಮತ್ತೊಬ್ಬ ಮಹಾತ್ಮಾ ಗಾಂಧಿ

-ಮಹೇಶ್ ಶರ್ಮಾ, ಕೇಂದ್ರ ಸಚಿವ

ಮತ್ತೊಬ್ಬ ಗೋಡ್ಸೆ ಯಾರು ಎನ್ನುವುದನ್ನೂ ಹೇಳಿ ಬಿಡಿ.

---------------------

ಹಿಂದೂಗಳ ರಕ್ಷಣೆಗೆ ಮುಂದಿನ ಆಯುಧ ಪೂಜೆಯಂದು ಮನೆಮನೆಗಳಲ್ಲಿ ಆಯುಧಗಳನ್ನು ಪೂಜಿಸಬೇಕು

-ಸುನೀಲ್ ಕುಮಾರ್ ಶಾಸಕ

ಸಂಘಪರಿವಾರದಿಂದ ಹಿಂದೂಗಳನ್ನು ರಕ್ಷಿಸುವ ದಾರಿಯನ್ನು ಹುಡುಕಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X