Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಲಿಂಕನ್‌ನ ಮೂರು ಕವಿತೆಗಳು

ಲಿಂಕನ್‌ನ ಮೂರು ಕವಿತೆಗಳು

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಕಾರುಣ್ಯ17 July 2017 12:13 AM IST
share
ಲಿಂಕನ್‌ನ ಮೂರು ಕವಿತೆಗಳು

ಅಮೆರಿಕದ 16ನೆಯ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್ ವಿಶ್ವದ ಮಹಾ ಮುತ್ಸದ್ದಿಗಳ, ಸರ್ವಸಮತಾವಾದಿ ನಾಯಕರ ಹಾಗೂ ಅತ್ಯಂತ ಪ್ರಭಾವೀ ವಾಕ್ಪಟುಗಳ ಸಾಲಿನಲ್ಲಿ ನಿಂತ ನಾಯಕ. ವಿಶ್ವ ಇಂದಿಗೂ ಅವರನ್ನು ಬೇರೆ ಬೇರೆ ಕಾರಣಗಳಿಗಾಗಿ ನೆನೆಯುತ್ತಲೇ ಇದೆ. ಸಾಮಾಜಿಕ ಬದಲಾವಣೆಯ ಹರಿಕಾರ ಅವರು. ಒಬ್ಬ ಸಹೃದಯವನ್ನು ಹೊಂದಿದ ನಾಯಕ, ಶೋಷಿತರ ಕಣ್ಮಣಿ. ಹಾಗೆಯೇ ಅವರು ತನ್ನ ಮಕ್ಕಳಿಗೆ ಒಳ್ಳೆಯ ತಂದೆಯೂ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಒಳ್ಳೆಯ ಕವಿಯೂ ಆಗಿದ್ದರು. ಅವರ ಮಾತುಗಾರಿಕೆಯಲ್ಲೇ ಕಾವ್ಯದ ಲಯವಿದೆ. ಹಾಗೆಯೇ ಅವರು ತನ್ನ ಮಕ್ಕಳಿಗೆ ಬರೆದ ಪತ್ರಗಳು ಆ ಕಾವ್ಯ ಗುಣವನ್ನು ನಾವು ಕಾಣಬಹುದು. ರಾಜಕೀಯ ನಾಯಕನ ಮರೆಯೊಳಗೆ ಬಚ್ಚ್ಟಿಟ್ಟುಕೊಂಡ ಆ ಅಜ್ಞಾತ ಕವಿಯ ಮೂರು ದೀರ್ಘ ಕವನಗಳನ್ನು ಕನ್ನಡದ ಮಾನವ್ಯ ಕವಿ ಬಿ. ಎ. ಸನದಿಯವರು ಕನ್ನಡಕ್ಕಿಳಿಸಿದ್ದಾರೆ. ಇವುಗಳು ಕವಿಯ ಜೀವನ ದರ್ಶನದ ಗಾಢತೆಯನ್ನು ಸೂಚಿಸುತ್ತದೆ. ಒಬ್ಬ ರಾಜಕೀಯ ನಾಯಕನ ಆಳದಲ್ಲಿ ಇಂತಹದೊಂದು ಜೀವನ ದರ್ಶನದ ತೊರೆ ಹರಿಯುತ್ತಿತ್ತೇ ಎಂದು ಅಚ್ಚರಿ ಪಡುವಂತಹ ಸಾಲುಗಳು ಇಲ್ಲಿವೆ. ಒಂದು ವಿಷಾದದ ಛಾಯೆ ಪ್ರತಿ ಸಾಲುಗಳಲ್ಲಿ ಕೆನೆ ಕಟ್ಟಿದೆ.

 ಮೊದಲನೆಯ ಕವಿತೆಯ ಹೆಸರು ‘ನನ್ನ ಎಳೆತನದ ಮನೆ’. ‘ಭವ್ಯ ತಡಸಲು ಕಂಡು ಕಿವಿದುಂಬಿದಬ್ಬರವು/ಹಿಂದೆ ಉಳಿದರು ಮತ್ತೆ ಕೇಳುವಾಸೆ/ ನಮಗಿಂತು ತಿಳಿದುದನು ತಿಳಿಯದೆಯೇ ಉಳಿದುದನು/ ಜೀವಂತಗೊಳಿಸುವುದು ಸ್ಮತಿಯ ಭಾಷೆ’ ಎಂದು ಅಪ್ಪಟ ನವೋದಯದ ಲಯದಲ್ಲಿ ಲಿಂಕನ್ ಕವಿತೆಯನ್ನು ಸನದಿ ಕನ್ನಡಕ್ಕಿಳಿಸುತ್ತಾರೆ. ಎಳೆತನದ ಮನೆಯ ಕುರಿತಂತೆ ಬರೆಯುತ್ತಲೇ ಸಾಗುವ ಲಿಂಕನ್, ಕೊನೆಯಲ್ಲಿ ಮಸಣದ ಮನೆಯ ಮುಂದೆ ಬಂದು ನಿಲ್ಲುತ್ತಾರೆ. ‘ವಸ್ತುವೊಂದಿಹುದಿಲ್ಲಿ’ ಮತ್ತು ‘ಕರಡಿಯ ಬೇಟೆ’ ಕೂಡ ಇಂತಹದೊಂದು ಮೃತ್ಯು ಛಾಯೆಯನ್ನು ಹೊತ್ತುಕೊಂಡೇ ಬರೆದಂಥವುಗಳು. ಈ ಪುಟ್ಟ ಕೃತಿಯಲ್ಲಿ ಲಿಂಕನ್ ಅವರ ಮೂಲ ಕವಿತೆಗಳನ್ನೂ ನೀಡಲಾಗಿದೆ. ಸಮತಾ ಪ್ರಕಾಶನ ಕುಮಟಾ ಅವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. 1999ರಲ್ಲಿ ಪ್ರಕಟವಾದ ಈ ಕೃತಿಯ ಮರು ಮುದ್ರಣ ಇದಾಗಿದೆ. ಕೃತಿಯ ಮುಖಬೆಲೆ 50 ರೂ.

share
ಕಾರುಣ್ಯ
ಕಾರುಣ್ಯ
Next Story
X