ಬಾವಿಗೆ ಬಿದ್ದು ಯುವಕ ಮೃತ್ಯು
ಬೆಳ್ತಂಗಡಿ, ಜು. 17: ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಣಂದೂರು ಗ್ರಾಮದ ಕೃಷ್ಣಾನಗರ ಎಂಬಲ್ಲಿ ನಡೆದಿದೆ.
ಮೃತ ಯುವಕ ದೂಜ ಎಂಬುವರ ಪುತ್ರ ಯೊಗೀಶ್ (23) ಎಂದು ಗುರುತಿಸಲಾಗಿದೆ.
ಅವರು ರವಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಮನೆ ಸನಿಹದ ಪಾಳುಬಾವಿಯಲ್ಲಿ ಚಪ್ಪಲಿ ಸಿಕ್ಕಿತ್ತು. ಇದರ ಸಂಶಯಗೊಂಡ ಮನೆಯವರು ಅಗ್ನಿಶಾಮಕ ದಳದವರನ್ನು ಕರೆಯಿಸಿದ್ದರು. ಅಗ್ನಿಶಾಮಕ ದಳದವರು ಶವವನ್ನು ಮೇಲಕ್ಕೆತ್ತಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story