Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಧೈರ್ಯಂ: ರಂಜಿಸದ ಸಾಹಸ

ಧೈರ್ಯಂ: ರಂಜಿಸದ ಸಾಹಸ

ವಾರ್ತಾಭಾರತಿವಾರ್ತಾಭಾರತಿ23 July 2017 12:08 AM IST
share
ಧೈರ್ಯಂ: ರಂಜಿಸದ ಸಾಹಸ

ಲವರ್ ಬಾಯ್ ಇಮೇಜಿನ ನಟ ಅಜಯ್ ರಾವ್ ಅವರಿಗೆ ಆ್ಯಕ್ಷನ್ ಹೀರೋ ಅಂಗಿ ತೊಡಿಸುವ ಪ್ರಯತ್ನ ‘ಧೈರ್ಯಂ’ ಸಿನೆಮಾದಲ್ಲಿ ಆಗಿದೆ. ಇದಕ್ಕೆ ಪೂರ್ವಸಿದ್ಧತೆ ಎನ್ನುವಂತೆ ಅಜಯ್ ಕೂಡ ಮೈ ಹುರಿಗೊಳಿಸಿ, ಹೇರ್ ಸ್ಟೈಲ್ ಬದಲಿಸಿಕೊಂಡು ಮೇಕ್ ಓವರ್ ಮಾಡಿಕೊಂಡಿದ್ದಾರೆ. ಆದರೆ ಅವರ ಸಿದ್ಧತೆಗಳಿಗೆ ಸರಿಯಾಗಿ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳೇನೂ ಇಲ್ಲ. ಆ್ಯಕ್ಷನ್ ಜೊತೆಗೆ ಲವ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆಸುವ ಭರದಲ್ಲಿ ನಿರ್ದೇಶಕರು ಚಿತ್ರಕಥೆಯ ದಿಕ್ಕು ತಪ್ಪಿಸಿದ್ದಾರೆ. ಅಂತಿಮವಾಗಿ ಯಾವ ವರ್ಗಕ್ಕೂ ಸಲ್ಲದ ಇದು ಸಾಧಾರಣ ಚಿತ್ರವಾಗಿ ಕಾಣಿಸುತ್ತದೆ.

ಕೆಳ ಮಧ್ಯಮವರ್ಗದ ಕುಟುಂಬದ ಯುವಕ ಕೃಷ್ಣ ಪ್ರತಿಭಾವಂತ ವಿದ್ಯಾರ್ಥಿ. ಮನೆಯಲ್ಲಿನ ಕಷ್ಟ, ತಂದೆಯ ಆಪರೇಷನ್‌ಗೆಂದು ಆತನಿಗೆ ಹಣದ ಅನಿವಾರ್ಯತೆ ಎದುರಾಗುತ್ತದೆ. ಈ ಒತ್ತಡದ ಮಧ್ಯೆಯೇ ತನಗೇ ಅರಿವಿಲ್ಲದಂತೆ ಆತ ಸಾಮಾಜಿಕ ಕಾರ್ಯಕರ್ತನೊಬ್ಬನ ಕೊಲೆಗೆ ಸಾಕ್ಷಿಯಾಗುತ್ತಾನೆ. ಈ ಕೊಲೆಯನ್ನು ದಾಳವಾಗಿ ಬಳಸಿಕೊಂಡು ಹಣದ ಆವಶ್ಯಕತೆ ನೀಗಿಸಿಕೊಳ್ಳುವ ಹಾದಿಯಲ್ಲಿನ ಸವಾಲು, ಜಾಣ್ಮೆ, ರೋಷಾವೇಷಗಳೇ ಚಿತ್ರದ ವಸ್ತು. ಆ್ಯಕ್ಷನ್‌ಗೆ ಬೇಕಾಗಿದ್ದ ವಸ್ತು ಏನೋ ಚಿತ್ರದಲ್ಲಿದೆ. ಅದನ್ನು ಸಮರ್ಪಕವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಇದರಿಂದಾಗಿ ಕಲಾವಿದರು ಮತ್ತು ಇತರ ತಂತ್ರಜ್ಞರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ.

ರಾಜ್ಯದ ಮಂತ್ರಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ನೇರವಾಗಿ ಸಾಮಾಜಿಕ ಕಾರ್ಯಕರ್ತನ ಫ್ಲಾಟ್‌ಗೆ ಬಂದು ಆತನನ್ನು ಕೊಲ್ಲುತ್ತಾರೆ! ಇಂತಹ ಮತ್ತೊಂದೆರಡು ಬಾಲಿಶ ಸನ್ನಿವೇಶಗಳೂ ಚಿತ್ರದಲ್ಲಿವೆ. ಹಾಸ್ಯಕ್ಕೆಂದು ಸಾದು ಕೋಕಿಲರನ್ನು ಕರೆತಂದು ಕಳಪೆ ಹಾಸ್ಯ ಸೃಷ್ಟಿಸಲಾಗಿದೆ. ತಮ್ಮ ಬಾಡಿ ಲಾಂಗ್ವೇಜ್ ಮತ್ತು ಕಾಮಿಡಿ ಟೈಮಿಂಗ್‌ನಿಂದಾಗಿ ಸಾದು ಜನರ ಮೆಚ್ಚುಗೆ ಗಳಿಸಿದ್ದಾರೆ. ಹಾಗೆಂದು ತಾವು ಏನು ಮಾಡಿದರೂ ಜನ ನೋಡುತ್ತಾರೆ ಎನ್ನುವ ಅವರ ಮನೋಭಾವ ಬದಲಾಗಬೇಕಿದೆ.

ಹೀರೋ ಅಜಯ್ ರಾವ್‌ಗೆ ಉದ್ದನೆಯ ತಲೆಗೂದಲು ಹೊಂದಿಕೆಯಾದಂತೆ ಕಾಣುವುದಿಲ್ಲ. ಆ್ಯಕ್ಷನ್ ಪಾತ್ರಕ್ಕೆ ಅವರು ತಮ್ಮನ್ನು ಒಗ್ಗಿಸಿಕೊಳ್ಳಲು ಪ್ರಯತ್ನಿಸಿದ್ದಾರಾದರೂ ಸಂಪೂರ್ಣ ಯಶಸ್ವಿಯಾಗಿಲ್ಲ. ನವನಾಯಕಿ ಅದಿತಿ ಪ್ರಭುದೇವ ಪಾತ್ರಗಳ ಆಯ್ಕೆಯಲ್ಲಿ ಎಚ್ಚರ ವಹಿಸಿದರೆ ಒಳ್ಳೆಯ ಕಲಾವಿದೆಯಾಗಿ ಬೆಳೆಯಬಹುದು. ಖಳನಟ ರವಿಶಂಕರ್, ಜೈಜಗದೀಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ‘ಬೇಡರ ಕಣ್ಣಪ್ಪ’ ಸಿನೆಮಾದ ಹಾಡಿನ ಟ್ಯೂನ್ ಬಳಕೆ ಮಾಡಿರೋದು ಉತ್ತಮ ಅಭಿರುಚಿಯೇನಲ್ಲ. ಒಟ್ಟಾರೆ ಹೊಸತನವಿಲ್ಲದ ಮತ್ತೊಂದು ಚಿತ್ರವಾಗಿ ಇದು ಕಾಣಿಸುತ್ತದೆ.

ನಿರ್ದೇಶನ: ಶಿವ ತೇಜಸ್, ನಿರ್ಮಾಣ: ಡಾ.ಕೆ.ರಾಜು, ಸಂಗೀತ: ಶೇಖರ್ ಚಂದ್ರ ಮತ್ತು ಎಮಿಲ್ ಮುಹಮ್ಮದ್, ತಾರಾಗಣ: ಅಜಯ್ ರಾವ್, ಅದಿತಿ ಪ್ರಭುದೇವ, ರವಿಶಂಕರ್, ಸಾಧು ಕೋಕಿಲ, ಶ್ರೀನಿವಾಸ ಪ್ರಭು, ಜೈಜಗದೀಶ್ ಮತ್ತಿತರರು.

ರೇಟಿಂಗ್ - *1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X