Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೊದಿಕೆಗಳ ಅನೈರ್ಮಲ್ಯ: ಮತ್ತೆ ಸಿಎಜಿ...

ಹೊದಿಕೆಗಳ ಅನೈರ್ಮಲ್ಯ: ಮತ್ತೆ ಸಿಎಜಿ ತರಾಟೆಗೆ ಗುರಿಯಾದ ಭಾರತೀಯ ರೈಲ್ವೆ

ವಾರ್ತಾಭಾರತಿವಾರ್ತಾಭಾರತಿ23 July 2017 8:44 PM IST
share
ಹೊದಿಕೆಗಳ ಅನೈರ್ಮಲ್ಯ: ಮತ್ತೆ ಸಿಎಜಿ ತರಾಟೆಗೆ ಗುರಿಯಾದ ಭಾರತೀಯ ರೈಲ್ವೆ

ಹೊಸದಿಲ್ಲಿ,ಜು.23: ರೈಲುಗಳಲ್ಲಿನ ಕಳಪೆ ಆಹಾರದ ಬಗ್ಗೆ ಇತ್ತೀಚಿಗಷ್ಟೇ ಭಾರತೀಯ ರೈಲ್ವೆಯನ್ನು ಕಟುವಾಗಿ ಟೀಕಿಸಿದ್ದ ಮಹಾ ಲೇಖಪಾಲ(ಸಿಎಜಿ)ರ ಕಚೇರಿಯು ಈಗ ಪ್ರಯಾಣಿಕರಿಗೆ ಒದಗಿಸಲಾಗುವ ಹಾಸಿಗೆ-ಹೊದಿಕೆಗಳ ಅನೈರ್ಮಲ್ಯದ ಬಗ್ಗೆ ಅದನ್ನು ಮತ್ತೊಮ್ಮೆ ತೀವ್ರ ತರಾಟೆಗೆತ್ತಿಕೊಂಡಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾ ಗಲು ಸೂಕ್ತ ವ್ಯವಸ್ಥೆಯನ್ನು ರೂಪಿಸುವಂತೆ ಅದು ರೈಲ್ವೆ ಇಲಾಖೆಗೆ ನಿರ್ದೇಶ ನೀಡಿದೆ.

ರೈಲ್ವೆಯಲ್ಲಿ ಸ್ಥಾಪಿತ ನಿಯಮಗಳಂತೆ ಹಾಸುಬಟ್ಟೆ ಮತ್ತು ಹೊದಿಕೆಗಳನ್ನು ಸ್ವಚ್ಛಗೊಳಿಸ ಲಾಗುತ್ತಿಲ್ಲ ಎಂದು ಸಿಎಜಿ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ತನ್ನ ವರದಿಯಲ್ಲಿ ಹೇಳಿದೆ.

ಹಾಸುಬಟ್ಟೆಗಳನ್ನು ಪ್ರತಿ ಬಾರಿ ಬಳಕೆಯ ಬಳಿಕ ಒಗೆಯಬೇಕು ಮತ್ತು ಹೊದಿಕೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಡ್ರೈ ಕ್ಲೀನ್ ಮಾಡಬೇಕು ಎಂದು ರೈಲ್ವೆ ಮಂಡಳಿಯು ಸೂಚಿಸಿದೆ.

 ವಿವಿಧ ರೈಲ್ವೆ ವಲಯಗಳಿಂದ ಸಿಎಜಿ ಸಂಗ್ರಹಿಸಿರುವ ದತ್ತಾಂಶಗಳು ಹಾಸುಬಟ್ಟೆಗಳನ್ನು 15 ದಿನಗಳು/ತಿಂಗಳಿಗೊಮ್ಮೆ ಒಗೆಯಲಾಗುತ್ತದೆ ಮತ್ತು ಬ್ಲಾಂಕೆಟ್‌ಗಳನ್ನು 2-3 ತಿಂಗಳ ಬಳಿಕವೇ ಡ್ರೈ ಕ್ಲೀನ್ ಮಾಡಲಾಗುತ್ತದೆ ಎನ್ನುವುದನ್ನು ಬೆಳಕಿಗೆ ತಂದಿವೆ ಎಂದು ವರದಿಯು ಹೇಳಿದೆ.

ಸಿಎಜಿ 33 ಆಯ್ದ ಡಿಪೋಗಳಿಂದ 2012-13ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಅವಧಿಯಲ್ಲಿ ಬಳಕೆಯಲ್ಲಿದ್ದ ಮತ್ತು ಒಗೆಯಲಾಗಿದ್ದ ಹೊದಿಕೆಗಳ ಸಂಖ್ಯೆಯ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿದೆ.

ಒಂಭತ್ತು ರೈಲ್ವೆ ವಲಯಗಳ 14 ಆಯ್ದ ಡಿಪೊಗಳಲ್ಲಿ ಈ ಅವಧಿಯಲ್ಲಿ ಒಂದು ಬಾರಿಯೂ ಹೊದಿಕೆಗಳನ್ನು ಡ್ರೈವಾಷ್ ಮಾಡಿಲ್ಲ. ಐದು ರೈಲ್ವೆ ವಲಯಗಳಡಿ ಏಳು ಡಿಪೋಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಒಮ್ಮೆಯೂ ಹೊದಿಕೆಗಳನ್ನು ಸ್ವಚ್ಛಗೊಳಿ ಸಲಾಗಿಲ್ಲ ಎನ್ನುವುದನ್ನು ಸಿಎಜಿ ಪತ್ತೆ ಹಚ್ಚಿದೆ.

2015-16ನೇ ಸಾಲಿನಲ್ಲಿ ಎಂಟು ರೈಲ್ವೆ ವಲಯಗಳಡಿಯ 12 ಡಿಪೊಗಳಲ್ಲಿ 6-26 ತಿಂಗಳ ವಿರಾಮದ ಬಳಿಕ ಹೊದಿಕೆಗಳನ್ನು ಸ್ವಚ್ಚಗೊಳಿಸಲಾಗಿದೆ ಎಂದೂ ವರದಿಯು ತಿಳಿಸಿದೆ.

ರೈಲ್ವೆಯ ಜನರಲ್ ಸ್ಟೋರ್‌ಗಳಲ್ಲಿ ಹೊಸ ಹೊದಿಕೆಗಳ ಜೊತೆಗೆ ಎಸೆಯಬೇಕಾಗಿದ್ದ ಹೊದಿಕೆಗಳನ್ನೂ ಪೇರಿಸಿಟ್ಟಿದ್ದು ಕಂಡು ಬಂದಿದೆ. ಚೆನ್ನೈನ ಬೇಸಿನ್ ಬ್ರಿಡ್ಜ್ ಡಿಪೋದಲ್ಲಿ ಕೊರತೆಯನ್ನು ನೀಗಿಸಲು ಬಳಸಿದ ಬೆಡ್‌ಶೀಟ್‌ಗಳಿಂದ ತಲೆದಿಂಬುಗಳ ಹೊದಿಕೆಗಳನ್ನು ಹೊಲಿಯಲಾಗುತ್ತಿದೆ. ಉತ್ತರ ರೆಲ್ವೆಯ ಕೆಲವು ಕಡೆಗಳಲ್ಲಿ ಪ್ರಯಾಣಿಕರಿಗೆ ಬಳಸಿದ ತಲೆದಿಂಬು ಹೊದಿಕೆಗಳನ್ನೇ ನೀಡಲಾಗುತ್ತಿದೆ ಎಂದು ವರದಿಯು ತಿಳಿಸಿದೆ.

ಹಲವಾರು ದಾಸ್ತಾನು ಡಿಪೋಗಳಲ್ಲಿ ಹೊಸ ಹೊದಿಕೆಗಳನ್ನು ಅಸ್ತವ್ಯಸ್ತವಾಗಿ, ಧೂಳಿನ ನಡುವೆಯೇ ಇಡಲಾಗಿದೆ ಎಂದೂ ಅದು ಹೇಳಿದೆ. ಕೆಲವು ಡಿಪೋಗಳಲ್ಲಿ ಇಂತಹ ಹೊದಿಕೆಗಳ ಜೀವಿತಾವಧಿ ಮುಗಿದರೂ ಅವುಗಳು ಬಳಕೆಯಾಗಿಲ್ಲ ಎಂದು ಅದು ಬೊಟ್ಟು ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X