ಸಮಾಜ ಸೇವೆ ನಿರಂತರವಾಗಿರಬೇಕು: ರಾಮಕೃಷ್ಣ ಆಳ್ವ
ವಿಟ್ಲ, ಜು. 26: ಸೇವೆಯೆಂಬುದು ಕೇವಲ ಒಂದು ದಿನದ ತೋರ್ಪಡಿಕೆ ಮಾತ್ರವಲ್ಲ. ಅದು ಸಮಾಜದ ಏಳಿಗೆಗಾಗಿ ನಿರಂತರ ಬೆಳಗುತ್ತಿರುವ ಜ್ಯೋತಿಯಾಗಿರಬೇಕು ಎಂದು ಬಂಟ್ವಾಳ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಹೇಳಿದರು.
ಅವರು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವವಿಮಾ ನಿಗಮದ ಯೋಜನೆಯ ಸದಸ್ಯ ಬಿ.ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಬ್ದುಲ್ ಕರೀಂ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ 31 ಸಾವಿರ ರೂ. ಯನ್ನು ಅವರ ಪತ್ನಿ ನಸೀಮಾ ಅವರಿಗೆ ಸೇವಾಂಜಲಿ ಸಭಾಭವನದಲ್ಲಿ ವಿತರಿಸಿ ಮಾತನಾಡಿದರು. ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ರಿತೇಶ್ ಬಾಳಿಗ ಮಾತನಾಡಿದರು.
ಈ ಸಂದರ್ಭ ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಟ್ರಸ್ಟಿ ಸುರೇಶ್ ರೈ ಪೆಲಪಾಡಿ, ನಾರಾಯಾಣ ಬೆಳ್ಚಾಡ, ಉಮಾ ಚಂದ್ರಶೇಖರ್, ದಿವ್ಯಾ ಧನಂಜಯ್, ಜಯರಾಮ ಕಾರಂತ ಉಪಸ್ಥಿತರಿದ್ದರು.
Next Story