ಹತ್ತು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜು. 27: ರಾಜ್ಯ ಸರಕಾರ ಹತ್ತು ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಸಂದೀಪ್ ದವೆ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,
ಅಂಜುಂ ಫರ್ವೆಝ್- ಸರಕಾರದ ಕಾರ್ಯದರ್ಶಿ(ಪೌರಾಡಳಿತ) ನಗರಾಭಿವೃದ್ದಿ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಗ್ಯ ಜಲ,
ನವೀನ್ ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕ ಮೈಸೂರು ಮಿನರಲ್ಸ್ ಲಿ.,
ಪಂಕಜ್ ಕುಮಾರ್ ಪಾಂಡೆ- ಸರಕಾರದ ಕಾರ್ಯದರ್ಶಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ,
ಬಿ.ಪೊನ್ನುರಾಜ್- ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ,
ಎಂ. ಜಯರಾಂ- ಸಿಇಓ ಹಾಗೂ ಕಾರ್ಯಕಾರಿ ಸದಸ್ಯ ಕೆಐಎಡಿಬಿ,
ವಿ.ಚೈತ್ರಾ- ಆಯುಕ್ತರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.
ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ-ಜಿಲ್ಲಾಧಿಕಾರಿ ಚಿತ್ರದುರ್ಗ,
ವಿನೋತ್ ಪ್ರಿಯಾ- ಕಾರ್ಯದರ್ಶಿ ವಸತಿ ಇಲಾಖೆ (ರೇರಾ) ಹಾಗೂ ಕೆಎಎಸ್ ಅಧಿಕಾರಿ ಪಿ.ಎಂ. ರವೀಂದ್ರ- ಸಿಇಓ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.