Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪರಸ್ಪರ ಸೆಗಣಿ ಎರಚಿಕೊಳ್ಳುವುದೇ ಈ ಹಬ್ಬದ...

ಪರಸ್ಪರ ಸೆಗಣಿ ಎರಚಿಕೊಳ್ಳುವುದೇ ಈ ಹಬ್ಬದ ವೈಶಿಷ್ಟ!

ಗದಗದಲ್ಲಿ ನಾಗರಪಂಚಮಿಯಂಗವಾಗಿ ನಡೆಯುತ್ತಿದೆ ವಿಶಿಷ್ಟ ಆಚರಣೆ..!

ಫಾರೂಕ್ ಮಕಾನದಾರಫಾರೂಕ್ ಮಕಾನದಾರ31 July 2017 11:26 AM IST
share
ಪರಸ್ಪರ ಸೆಗಣಿ ಎರಚಿಕೊಳ್ಳುವುದೇ ಈ ಹಬ್ಬದ ವೈಶಿಷ್ಟ!

ಗದಗ, ಜು.31: ಸಾಧಾರಣವಾಗಿ ಸೆಗಣಿ ಎಂದರೆ ಮೂಗು ಮುಚ್ಚಿಕೊಳ್ಳುವುದು ತೀರಾ ಸಹಜ. ಆದರೆ ಗದಗದಲ್ಲಿ ‘ಸೆಗಣಿ ಹಬ್ಬ’ ಎಂಬ ವಿಚಿತ್ರ ಆಚರಣೆ ಜಾರಿಯಲ್ಲಿದೆ. ಸೆಗಣಿಯನ್ನು ಪರಸ್ಪರ ಎರಚಿಕೊಳ್ಳುವ ಈ ‘ಹಬ್ಬ’ ನಾಗರ ಪಂಚಮಿಯ ಮರುದಿನ ಇಲ್ಲಿ ನಡೆಯುತ್ತದೆ. ಗದಗ ನಗರದ ಒಂದು ವರ್ಗದ ಜನ ಸೆಗಣಿಗೆ ವಿಶೇಷ ಮಹತ್ವ ಕಲ್ಪಿಸುತ್ತಾರೆ.

ಕೃಷಿಯ ಜೀವಾಳವಾಗಿರುವ ಸೆಗಣಿಗೆ ಇಲ್ಲಿ ಚಿನ್ನದ ಸ್ಥಾನಮಾನ. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿಯ ಮರುದಿನ ಸೆಗಣಿ ಹಬ್ಬವನ್ನೇ ಇಲ್ಲಿ ಆಚರಿಸಲಾಗುತ್ತದೆ. ಸೆಗಣಿಯನ್ನು ಗುಡ್ಡೆ ಹಾಕಿ ಅದನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ರೈತನ ಬಂಗಾರದ ಬೆಳೆಗೆ ಕಾರಣವಾಗುವ ಸೆಗಣಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ನಾಗರ ಪಂಚಮಿ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬ. ಅಂದು ಬೆಳಗ್ಗೆ ಹುತ್ತಕ್ಕೆ ಹಾಲೆರೆಯಲಾಗುತ್ತದೆ. ಅದರ ಮಾರನೆ ದಿನ ಸಗಣಿ ಆಟದ ವಿಶಿಷ್ಟ ಆಚರಣೆ ಇಲ್ಲಿನ ಗಂಗಾಪುರ ಪೇಟೆಯಲ್ಲಿ ನಡೆಯುತ್ತದೆ. ಈ ಹಬ್ಬಕ್ಕಾಗಿ ಒಂದು ತಿಂಗಳ ಮುಂಚೆಯಿಂದಲೇ ಯುವಕರ ಗುಂಪೊಂದು ನಿತ್ಯವು ನಗರದಲ್ಲಿ ಸೆಗಣಿ ಸಂಗ್ರಹ ಮಾಡುತ್ತಾರೆ. ಯುವಕರು ತಂಡ-ತಂಡವಾಗಿ ಮನೆಗೆ ತೆರಳಿ ಸೆಗಣಿಯನ್ನು ಸಂಗ್ರಹಿಸಿ ತರುತ್ತಾರೆ.

ನಾಗರ ಪಂಚಮಿಯ ಹುತ್ತ ಮುರಿಯುವ ದಿನ ಗಂಗಾಪೂರ ಪೇಟೆಯ ಯುವಕರು ಎರಡು ತಂಡ ರಚಿಸಿಕೊಂಡು ದೈವದರ ಅವರ ತೋಟದಲ್ಲಿ ಸೇರುತ್ತಾರೆ. ಅಲ್ಲಿ ಕೊರಳಲ್ಲಿ ಬದನೆಕಾಯಿ, ಸೌತೆಕಾಯಿ, ಈರುಳ್ಳಿ, ಟೊಮಾಟೋ ಸೇರಿದಂತೆ ವಿವಿಧ ತರಕಾರಿಗಳ ಮಾಲೆ ಮಾಡಿ ಧರಿಸಿ, ಮೈ ತುಂಬಾ ಸಿಂಗಾರ ಮಾಡಿಕೊಳ್ಳುತ್ತಾರೆ. ಬಳಿಕ ಆರು ಜನ ಗಂಡು ಹಾಗೂ ಆರು ಜನ ಹೆಣ್ಣು ವೇಷಧಾರಿಗಳಾಗಿ ನಗರದಲ್ಲಿರುವ ಹನಮಂತದೇವರ, ದುರ್ಗಾದೇವಿ ಗುಡಿಯಲ್ಲಿ ಪೂಜೆ ನೆರವೆರಿಸುತ್ತಾರೆ.

ನಾಗರ ಪಂಚಮಿ ಮೂರನೆ ದಿನವಾದ ‘ಕೆರೆಕಟ್ಟಂಬಲಿ’ಯಂದು ಈ ಹಬ್ಬ ಆಚರಿಸುವುದು ಇಲ್ಲಿನ ಸಂಪ್ರದಾಯ. ಅಂದು ಮೈ ತುಂಬಾ ಸೆಗಣಿ ಎರಚಿದರೂ ಬೇಸರದ ಬದಲು ಯುವಕರಲ್ಲಿ ಸಂಭ್ರಮವೇ ಕಂಡುಬರುತ್ತದೆ. ಈ ವಿಶಿಷ್ಟ ಸೆಗಣಿಯಾಟದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುವುದು ನೋಡುಗರಿಗೆ ಖುಷಿ ನೀಡುತ್ತದೆ. ಈ ವಿಶಿಷ್ಟ ಆಚರಣೆಗಾಗಿ ಗಂಗಾಪುರ ಪೇಟೆಯ ಉದ್ದದ ರಸ್ತೆಯಲ್ಲಿ ಅಲ್ಲಲ್ಲಿ ಸೆಗಣಿಯನ್ನು ಗುಡ್ಡೆ ಹಾಕಿರುತ್ತಾರೆ. ಬಳಿಕ ಯುವಕರು ತಮ್ಮ ಬೀದಿ ತುಂಬೆಲ್ಲ ಓಡಾಡಿ ಸೆಗಣಿ ಎರಚುತ್ತಾರೆ. ಇದರಿಂದ ಬಟ್ಟೆ, ಮುಖವೆಲ್ಲ ಸೆಗಣಿಮಯವಾಗುತ್ತದೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಯುವಕರು, ಸಂಗ್ರಹಿಸಿದ ಸಗಣಿ ಮುಗಿಯುವವರೆಗೂ ಎರಚಾಡಿ ಸಂಭ್ರಮಿಸ್ತಾರೆ.

ನಗರದಲ್ಲಿನ ಈ ಓಣಿಯಲ್ಲಿ ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಈ ಮೋಜಿನ ಆಟ ನಡೆದುಕೊಂಡು ಬರುತ್ತಿರುವ ಪ್ರತೀತಿ ಇದಕ್ಕಿದೆ. ಪ್ರತೀವರ್ಷ ತಪ್ಪದೇ ವರ್ಷದಿಂದ ವರ್ಷಕ್ಕೆ ಈ ಆಚರಣೆ ವಿಜೃಂಭಣೆ ಪಡೆಯುತ್ತಲೆ ಇದೆ. ಕೇವಲ ಯುವಕರು, ಮಕ್ಕಳು ಮಾತ್ರವಲ್ಲದೇ ಹಿರಿಯರು ಸಹ ಈ ಮೋಜಿನಾಟದಲ್ಲಿ ತೊಡಗಿ ಸಂಭ್ರಮಿಸುತ್ತಾರೆ.

ಈ ವಿಶಿಷ್ಟ ಆಚರಣೆಗೆ ಇಲ್ಲಿನ ಜನರು ಈ ಆಟಕ್ಕೆ ತಮ್ಮದೇ ಅರ್ಥವಿವರಣೆ ನೀಡುತ್ತಾರೆ. ರೈತನ ಪಾಲಿಗೆ ಸಗಣಿಗೆ ಬಂಗಾರ. ಹಾಗಾಗಿ ಸೆಗಣಿಯನ್ನು ಪಾವಿತ್ರತೆ ಭಾವದಿಂದ ಕಾಣಬೇಕೆಂಬ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆಯಂತೆ. ಮುಖ್ಯವಾಗಿ ಇಲ್ಲಿ ಸಂಗ್ರಹಿಸುವ ಸೆಗಣಿ ಆಕಳು ಮತ್ತು ಎತ್ತುಗಳದ್ದು ಮಾತ್ರ. ಅದರಿಂದ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯನ್ನು ಇಲ್ಲಿನ ಜನರು ಹೊಂದದಿದ್ದು, ಆಕಳು ಮತ್ತು ಎತ್ತುಗಳ ಸೆಗಣಿಯನ್ನು ಅರಸಿ ಯುವಕರು ಮನೆ-ಮನೆ ಅಲೆಯುತ್ತಾರೆ.


ಇಲ್ಲಿನ ಸಗಣೆಯಾಟ ನೋಡಿದವರಿಗೆಲ್ಲ ಹೋಳಿ ಹುಣ್ಣಿಮೆ ನೆನಪಾಗುತ್ತದೆ. ಹೋಳಿ ಹುಣ್ಣಿಮೆಯ ಕಾಮದಹನದ ನಂತರ ರಂಗಿನಾಟವಾಡಿದಂತೆ ಇಲ್ಲಿನ ನಿವಾಸಿಗಳು ಸೆಗಣಿಯನ್ನು ಬಣ್ಣದಂತೆ ಪರಸ್ಪರ ಎರಚಾಡಿಕೊಳ್ಳುವುದು ಪದ್ಧತಿ.

-ಮಲ್ಲೇಶ್ ಬಿಂಗಿ, ಸ್ಥಳೀಯ ಮುಖಂಡ

share
ಫಾರೂಕ್ ಮಕಾನದಾರ
ಫಾರೂಕ್ ಮಕಾನದಾರ
Next Story
X