Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬೋರಾಗದ ಹಾಡುಗಳೊಂದಿಗೆ 'ಡೇಸ್ ಆಫ್...

ಬೋರಾಗದ ಹಾಡುಗಳೊಂದಿಗೆ 'ಡೇಸ್ ಆಫ್ ಬೋರಾಪುರ'

ವಾರ್ತಾಭಾರತಿವಾರ್ತಾಭಾರತಿ31 July 2017 2:57 PM IST
share
ಬೋರಾಗದ ಹಾಡುಗಳೊಂದಿಗೆ ಡೇಸ್ ಆಫ್ ಬೋರಾಪುರ

ಬೆಂಗಳೂರು, ಜು.31: ಲೇಟಾದರೂ ಲೇಟೆಸ್ಟಾಗಿ ಸುದ್ದಿ ಮಾಡುತ್ತಿರುವ 'ಡೇಸ್ ಆಫ್ ಬೋರಾಪುರ' ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

"ಇತ್ತೀಚೆಗೆ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಯಶಸ್ವಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ‌. ಚಿತ್ರದ ಶೀರ್ಷಿಕೆಯನ್ನು ಆಕರ್ಷಕವಾಗಿದೆ. ನನಗೆ ಸಣ್ಣ ವಯಸ್ಸಿನವನಾಗಿದ್ದಾಗಲೇ ಚಿತ್ರದ ನಾಯಕರಲ್ಲೊಬ್ಬರಾಗಿರುವ ಸಿದ್ಧಾರ್ಥ್  ಬಗ್ಗೆ ನನಗೆ ಗೊತ್ತು. ಹಾಡುಗಳು ಆಕರ್ಷಕವಾಗಿವೆ. ಚಿತ್ರವೂ ಗೆಲುವಿನತ್ತ ಸಾಗಲಿ" ಎನ್ನುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದರು.

ಚಿತ್ರದಲ್ಲೊಂದು ವಿಶೇಷ ಪಾತ್ರ ನಿರ್ವಹಿಸಿರುವ ತೆಲುಗು ನಟ ಶಫಿ ಮಾತನಾಡಿ, "ಕನ್ನಡದಲ್ಲಿ ಇದು ಪ್ರಥಮ ಚಿತ್ರ. ಸ್ನೇಹಿತೆ ಅನಿತಾ ಭಟ್ ಕಾರಣದಿಂದಲೇ ನಾನು ಈ ಚಿತ್ರದಲ್ಲಿ ನಟಿಸಿದೆ. ಅವರಿಗೆ ತುಂಬಾ ವಂದನೆಗಳು" ಎಂದರು. ಜೊತೆಗೆ ಆಗಮಿಸಿದ್ದ ಅನಿತಾ ಭಟ್ ಚಿತ್ರ ಮತ್ತು ಪಾತ್ರದ ಬಗ್ಗೆ ಸಂತಸದ ಮಾತುಗಳನ್ನಾಡಿದರು. ಯುವ ನಟಿ ಅಮಿತಾ ರಂಗನಾಥ್ ಮಾತನಾಡಿ, "ಭಾಗ್ಯ ಎಂಬ ಹುಡುಗಿಯ ಪಾತ್ರ ನನ್ನದು. ಸಂಗೀತ ನಿರ್ದೇಶಕ ವಿವೇಕ್ ನನ್ನ ಸ್ಕೂಲ್ಮೇಟ್. ಆದರೆ ಆತ ಇಷ್ಟು ಪ್ರತಿಭಾವಂತ ಎಂದು ತಿಳಿದಿರಲಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದರು.

ಅತಿಥಿಯಾಗಿ ಆಗಮಿಸಿದ್ದ ಚಿತ್ರ ಲೋಕ.ಕಾಮ್ ನ ವೀರೇಶ್ ಮಾತನಾಡಿ, "ಸಂಗೀತ ನಿರ್ದೇಶಕರು ತುಂಬಾ ಆಕರ್ಷಕವಾದ ಹಾಡುಗಳನ್ನು ನೀಡಿದ್ದಾರೆ. ಆರಂಭ ಮಾತ್ರವಲ್ಲ, ಹೆಸರು ಬಂದ ಮೇಲೆಯೂ ಇದೇ ತರಹ ಸಂಗೀತ ನೀಡುತ್ತಿರಲಿ" ಎಂದು ಹಾರೈಸುತ್ತಾ, "ಚಿತ್ರದ
ಶೀರ್ಷಿಕೆ ಹೊರತು ಪಡಿಸಿ ಎಲ್ಲ ಮಾಹಿತಿಗಳನ್ನು ಇಂಗ್ಲಿಷ್ ನಲ್ಲಿ ಹಾಕಲಾಗಿದೆ. ಆದರೆ ಇನ್ನುಮುಂದೆ ಕನ್ನಡವನ್ನೇ ಬಳಸುವಂತೆ" ಸಲಹೆ ನೀಡಿದರು.‌

ಚಿತ್ರದ ನಾಯಕರಲ್ಲೊಬ್ಬರಾದ ಪ್ರಶಾಂತ್ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಬಳಸಿದ್ದ ಬಿಳಿಮುಂಡು ಕೆಂಪು ಅಂಗಿಯ ಕಾಸ್ಟ್ಯೂಮಲ್ಲೇ ಬಂದಿದ್ದರು! ನಾಯಕಿ ಪ್ರಕೃತಿ ಮಾತನಾಡಿ, ತಮ್ಮ ಪಾತ್ರದ ಹೆಸರು ಲಕ್ಷ್ಮೀ. ಸೈಲೆಂಟ್, ಮುಗ್ದೆಯ ಪಾತ್ರ ಎಂದರು. ಸಂಗೀತ ನಿರ್ದೇಶಕ
ವಿವೇಕ್ ಚಕ್ರವರ್ತಿ ತಮಗಿದು ಪ್ರಥಮ ಅವಕಾಶ ಎಂದರು.

ನಿರ್ಮಾಪಕ ಮಧು ಬಸವರಾಜ್ ಮಾತನಾಡಿ ಐಟಿ ಬ್ಯಾಕ್ ಗ್ರೌಂಡ್ ನಿಂದ  ಬಂದಿರುವ ತಾನು ಪ್ಯಾಷನ್ ಗಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದರು. ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿರುವ ದಿನೇಶ್ ಮಂಗಳೂರು ಮತ್ತು ಅವರ ಪುತ್ರ, ಚಿತ್ರದ ಮತ್ತೋರ್ವ ನಾಯಕ‌ನಾಗಿ ನಟಿಸಿರುವ ಜ್ಯೂನಿಯರ್ ರಕ್ಷಿತ್ ಶೆಟ್ಟಿಯಂತೆ ಗಮನ ಸೆಳೆದ ಸೂರ್ಯ ಸಿದ್ಧಾರ್ಥನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಚಿತ್ರದ ಸಂಕಲನ ಮತ್ತು ನಿರ್ದೇಶನವನ್ನು ಎನ್ ಆದಿತ್ಯ ಕುಣಿಗಲ್ ನಿರ್ವಹಿಸಿದ್ದಾರೆ. ಯುವಗಾಯಕಿ ಪಾವನಿಯ ಪ್ರಾರ್ಥನೆ ಮತ್ತು ನಿರ್ಮಾಪಕರಾದ ಅಜಿತ್ ಕುಮಾರ್ ಗದ್ದಿ ಮತ್ತು ರಕ್ಷಾ ಗದ್ದಿ ಹಾಗೂ ಶಾಂತಲಾ ಮಧು ಕುಟುಂಬ ದೀಪ ಬೆಳಗುವ ಮೂಲಕ  ಕಾರ್ಯಕ್ರಮದ  ಶುಭಾರಂಭವಾಗಿತ್ತು. ಚಿತ್ರದಲ್ಲೊಂದು ಪಾತ್ರವಹಿಸಿರುವ ಟಿ ವಿ ನಿರೂಪಕ ಚಂದನ್ ಕಾರ್ಯಕ್ರಮ ನಿರೂಪಿಸಿದರ‍ು. ಪ್ರದರ್ಶಿಸಲಾದ ಟ್ರೇಲರ್ ಮತ್ತು ಹಾಡುಗಳಲ್ಲಿ ಸಂಗೀತದೊಂದಿಗೆ ಜಿಎನ್ ಶರವಣನ್ ರ ಛಾಯಾಗ್ರಹಣ ಮತ್ತು ಕಲಾ ನಿರ್ದೇಶನದ ಗುಣಮಟ್ಟ ಮನಮೋಹಕವಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X