Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉತ್ತರಾಖಂಡದಲ್ಲೂ ಗಡಿ ಉಲ್ಲಂಘಿಸಿದ ಚೀನಾ...

ಉತ್ತರಾಖಂಡದಲ್ಲೂ ಗಡಿ ಉಲ್ಲಂಘಿಸಿದ ಚೀನಾ ಸೇನೆ

ಭಾರತದ ಭೂಭಾಗ ಪ್ರವೇಶಿಸಿ ಕುರಿಗಾಹಿಗಳನ್ನು ಬೆದರಿಸಿದ ‘ಕೆಂಪು ಪಡೆ’

ವಾರ್ತಾಭಾರತಿವಾರ್ತಾಭಾರತಿ31 July 2017 7:53 PM IST
share
ಉತ್ತರಾಖಂಡದಲ್ಲೂ ಗಡಿ ಉಲ್ಲಂಘಿಸಿದ ಚೀನಾ ಸೇನೆ

ಹೊಸದಿಲ್ಲಿ, ಜು.31: ಸಿಕ್ಕಿಂ ಗಡಿಭಾಗದ ಡೋ ಕಾ ಲಾಮ್‌ನಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಚೀನಾದ ಸೇನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಹೋತಿ ಪ್ರದೇಶದಲ್ಲಿ ಭಾರತದ ಗಡಿದಾಟಿ ಸುಮಾರು 1 ಕಿ.ಮೀ. ದೂರ ಸಾಗಿಬಂದು ಅಲ್ಲಿ ಕುರಿ ಮೇಯಿಸುತ್ತಿದ್ದವರನ್ನು ಬೆದರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 25ರಂದು ಬೆಳಿಗ್ಗೆ ಈ ಗಡಿ ಅತಿಕ್ರಮಣ ಘಟನೆ ನಡೆದಿದೆ. ಕುರಿಗಾಹಿಗಳ ಗುಂಪೊಂದು ಪಶುಗಳನ್ನು ಮೇಯಿಸುತ್ತಿದ್ದಾಗ ಏಕಾಏಕಿ ಅಲ್ಲಿಗೆ ಬಂದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ- ಚೀನಾದ ಸೇನಾಪಡೆ)ಯ ಸೈನಿಕರು ತಕ್ಷಣ ಸ್ಥಳ ಬಿಟ್ಟು ತೆರಳುವಂತೆ ಬೆದರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ 140 ಕಿ.ಮೀ ದೂರದಲ್ಲಿರುವ ಬಾರಹೋತಿ ಸುಮಾರು 80 ಚದರ ಕಿ.ಮೀ. ವ್ಯಾಪ್ತಿಯ ಹುಲ್ಲುಗಾವಲಿನ ಪ್ರದೇಶವಾಗಿದೆ. ಉ.ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಿಗೆ ಸೇರಿದ, ‘ಮಧ್ಯ ವಲಯ’ ಎಂದೇ ಕರೆಯಲಾಗುವ ಮೂರು ಗಡಿ ಠಾಣೆಗಳಲ್ಲಿ ಇದೂ ಒಂದಾಗಿದೆ. ಇದೊಂದು ‘ಸೇನಾನಿಯೋಜನೆ ರಹಿತ’ ಪ್ರದೇಶವಾಗಿದ್ದು ಇಲ್ಲಿ ಇಂಡೊ-ಟಿಬೆಟನ್ ಬೋರ್ಡರ್ ಪೊಲೀಸ್(ಐಟಿಬಿಪಿ) ಯೋಧರು ತಮ್ಮ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಾಲು ಅವಕಾಶವಿಲ್ಲ.

 ಭಾರತ ಮತ್ತು ಚೀನಾ 1958ರಲ್ಲಿ ಬಾರಹೋತಿಯನ್ನು ‘ವಿವಾದಾಸ್ಪದ ಸ್ಥಳ’ದ ಪಟ್ಟಿಗೆ ಸೇರಿಸಿದ್ದು ಈ ಪ್ರದೇಶಕ್ಕೆ ಉಭಯ ರಾಷ್ಟ್ರಗಳೂ ಸೇನೆಯನ್ನು ಕಳಿಸಬಾರದು ಎಂದು ಒಪ್ಪಿಕೊಂಡಿದ್ದವು. 1962ರ ಯುದ್ದದ ಸಂದರ್ಭ ಚೀನಾದ ಸೇನೆ ‘ಮಧ್ಯ ವಲಯ’ವನ್ನು ಪ್ರವೇಶಿಸಿರಲಿಲ್ಲ. ಪಶ್ಚಿಮ (ಲಡಾಕ್) ಮತ್ತು ಪೂರ್ವ(ಅರುಣಾಚಲ ಪ್ರದೇಶ)ವನ್ನು ಕೇಂದ್ರೀಕರಿಸಿ ಅಂದು ಯುದ್ದ ನಡೆಸಿತ್ತು. ಯುದ್ದ ಮುಗಿದ ಬಳಿಕ, ಐಟಿಬಿಪಿ ಯೋಧರು ‘ಕಾಳಗ ಮಾಡದಿರುವ’ ರೀತಿಯಲ್ಲಿ, ಅಂದರೆ ತಮ್ಮ ಬಂದೂಕುಗಳನ್ನು ಕೆಳಮುಖವಾಗಿ ಹಿಡಿದುಕೊಂಡು ಈ ಪ್ರದೇಶದಲ್ಲಿ ಗಸ್ತು ತಿರುಗಲು ಅವಕಾಶ ನೀಡಲಾಯಿತು. ಗಡಿ ವಿವಾದವನ್ನು ಬಗೆಹರಿಸುವ ಉದ್ದೇಶದಿಂದ 2000ನೇ ಇಸವಿಯ ಜೂನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಬಾರಹೋತಿ, ಕೌರಿಲ್ ಮತ್ತು ಹಿಮಾಚಲಪ್ರದೇಶದ ಶಿಪ್ಕಿ- ಈ ಮೂರು ಪ್ರದೇಶಗಳಲ್ಲಿ ಐಟಿಬಿಪಿ ಪಡೆಗಳು ಶಸ್ತ್ರಾಸ್ತ್ರ ಹೊಂದಿರುವುದಿಲ್ಲ ಎಂದು ಭಾರತ ಏಕಪಕ್ಷೀಯವಾಗಿ ಒಪ್ಪಿಕೊಂಡಿತ್ತು.

ಬಾರಹೋತಿ ಹುಲ್ಲುಗಾವಲು ಪ್ರದೇಶದಲ್ಲಿ ಐಟಿಬಿಪಿ ಯೋಧರು ಸೇನೆಯ ಸಮವಸ್ತ್ರ ಧರಿಸದೆ ಗಸ್ತು ತಿರುಗುತ್ತಾರೆ. ಈ ಹಚ್ಚ ಹಸಿರು ಹುಲ್ಲುಗಾವಲಿನಲ್ಲಿ ಭಾರತದ ಕುರಿಗಾಹಿಗಳ ಜೊತೆಗೆ ಟಿಬೆಟ್‌ನ ನಾಗರಿಕರೂ ಸೇರಿಕೊಂಡು ತಮ್ಮ ‘ಯಾಕ್’ಗಳನ್ನು ಮೇಯಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X