ಚಿಕ್ಕಬಳ್ಳಾಪುರ: ಪೊಲೀಸ್ ಗಸ್ತು ಸಮಿತಿ ಸದಸ್ಯರ ಸಭೆ

ಚಿಕ್ಕಬಳ್ಳಾಪುರ, ಜು.31: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕರಿಸುವ ಜೊತೆಗೆ ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಗಸ್ತು ಸಮಿತಿ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧ ಕೃತ್ಯಗಳು ಹತೋಟಿಯಲ್ಲಿರುವ ಸಮಾಜದಲ್ಲಿ ಶಾಂತಿ, ನೆಮ್ಮದಿ ಜೀವನ ನೆಲೆಸುವುದು. ಜೊತೆಗೆ ಅಂತಹ ಸಮಾಜವು ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಎಂದರು.
ಪೊಲೀಸರಂತೆ ಕಾರ್ಯನಿರ್ವಹಸಿ ಈ ನಿಟ್ಟಿನಲ್ಲಿ ಅಪರಾಧ ಪ್ರಕರಣಗಳ ಮಾಹಿತಿ ಕಲೆಹಾಕುವ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದೊಂದಿಗೆ ಗಸ್ತು ಸಮಿತಿಯನ್ನು ಇಲಾಖೆಯಿಂದ ರಚಿಸಲಾಗಿದ್ದು, ಜಿಲ್ಲೆಯ 45 ಗಸ್ತು ಸಮಿತಿಯಲ್ಲಿನ 2250 ಮಂದಿ ಸದಸ್ಯರು ಸಮಾಜಘಾತುಕ ಕೃತ್ಯಗಳ ತಡೆಯಲು ಪೊಲೀಸರಂತೆ ಕಾರ್ಯ ನಿರ್ವಹಸಬೇಕೆಂದು ಕರೆ ನೀಡಿದ ಅವರು, ಜಿಲ್ಲೆಯಲ್ಲಿ 250 ಸಿಬ್ಬಂದಿ ಕೊರತೆಯಿದ್ದು, ಒಂದು ವರ್ಷದಲ್ಲಿ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ನೀಗಲಿದೆ ಎಂದರು.
ಸಕಾಲದಲ್ಲಿ ಮಾಹಿತಿ ನೀಡ
ಪ್ರಸ್ತುತದ ದಿನಗಳಲ್ಲಿ ಭೂ ವಿವಾದ ಹಾಗೂ ಹಣಕಾಸಿನ ವಿಚಾರವಾಗಿ ವ್ಯಾಜ್ಯಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಗಸ್ತು ಸಮಿತಿ ಸದಸ್ಯರು ಇಂತಹ ವ್ಯಾಜ್ಯಗಳನ್ನು ಆರಂಭಿಕ ಹಂತದಲ್ಲೇ ಪತ್ತೇ ಹಚ್ಚುವ ಜೊತೆಗೆ ಮಾಹಿತಿ ನೀಡಿದಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಯಬಹುದು. ಅಲ್ಲದೆ ಸಮಾಜ ಘಾತುಕ ಕೃತ್ಯಗಳ ಕುರಿತು ಸಕಾಲದಲ್ಲಿ ಮಾಹಿತಿ ರವಾನಿಸಬೇಕಿದೆ ಎಂದ ಅವರು, ಗಸ್ತು ಸಮಿತಿ ಪೊಲೀಸ್ ಸಿಬ್ಬಂದಿಗೆ ನೀಡುವ ಮಾಹಿತಿ ನೀಡಿದರೂ, ನಿರ್ಲಕ್ಷಿದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವೃತ್ತ ನಿರೀಕ್ಷಕ ಶಿವಸ್ವಾಮಿ ಮಾತನಾಡಿ, 2010ರಲ್ಲಿ ಜಾರಿ ಬಂದಿರುವ ಗಸ್ತು ಸಮಿತಿಯನ್ನು ಪ್ರಸ್ತುತದ ದಿನಗಳಿಗೆ ತಕ್ಕಂತೆ ಮಾರ್ಪಾಟು ಮಾಡುವ ಮೂಲಕ ಪುನರ್ ರಚನೆ ಮಾಡಲಾಗಿದ್ದು, ನಗರದ 31 ವಾರ್ಡ್ಗಲ ಪೈಕಿ 26 ಹಾಗೂ ತಾಲೂಕಿ 144 ಗ್ರಾಮಗಳ ಪೈಕಿ 19 ಗಸ್ತು ಸಮಿತಿಗಳನ್ನು ರಚಿಸಲಾಗಿದೆ. ಎಂದರು ಮಾಹಿತಿ ನೀಡಿದರು.
ಪ್ರಸ್ತುತ ವಿದ್ಯಮಾನಗಳ ಕುರಿತ ಮಾಹಿತಿ ಸಂಗ್ರಹ, ಸಮಸ್ಯೆಗಳ ಪರಿಹಾರ, ಸಮಾಜ ಘಾತುಕ ಕೃತ್ಯಗಳ ಹತೋಟಿಗೆ ತರಲು ಗಸ್ತು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಸದಸ್ಯರು ಅಪರಾಧ ಪ್ರಕರಣ ಕುರಿತು ಸಕಾಲದಲ್ಲಿ ಮಾಹಿತಿ ರವಾನಿಸುವ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಮುಂದಾಗಬೇಕೆಂದು ಸದಸ್ಯರಲ್ಲಿ ಕೋರಿದರು.
ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಾದ ರಾಮ್ಪ್ರಸಾದ್, ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.
ಸಮಸ್ಯೆಗಳ ಸುರಿಮಳೆ
ತಾಲೂಕು ವ್ಯಾಪ್ತಿಯಲ್ಲಿ ಎಗ್ಗಿಲ್ಲದಂತೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಯುವ ಜನತೆಗೆ ಬಲಿಯಾಗುವುದರೊಂದಿಗೆ ಗ್ರಾಮೀಣರು ಹಲವು ಸಮಸ್ಯೆಗಳಿಗೆ ಗುರಿಯಾಗುವಂತಾಗಿದೆ ಎಂಬ ಸಮಸ್ಯೆಯ ಜೊತೆಗೆ, ಜೂಜು, ಕಳ್ಳತನ, ಪುಂಡರ ಪುಂಡಾಟಿಕೆ, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ, ಪೊಲೀಸ್ ಇಲಾಖೆಯ ಸಿಬ್ಬಂದಿ ದರ್ಪ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಎಸ್ಪಿ ಕಾರ್ತಿಕ್ರೆಡ್ಡಿ ಅವರಲ್ಲಿ ನಿವೇದನೆ ಮಾಡಿದರು.







