ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ, ಆ. 3: ತುಂಬೆ ಮುದಲ್ಮೆ ಸಂಪರ್ಕ ರಸ್ತೆಗೆ 5 ಲಕ್ಷ ರೂ. ವೆಚ್ಚದ ಕಾಂಕ್ರಿಟೀಕರಣದ ಕಾಮಗಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಬ್ಯಾಂಕ್ ನಾಮನಿರ್ದೆಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಿಸಾರ್ ಅಹ್ಮದ್, ತುಂಬೆ ವಲಯಾಧ್ಯಕ್ಷ ಮೋನಪ್ಪ ಮಜಿ, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಗುತ್ತಿಗೆದಾರ ದೇವದಾಸ್ ಪರ್ಲಕ್ಕೆ, ಪ್ರಮುಖರಾದ ಪ್ರವೀಣ್ ಕೊಟ್ಟಿಂಜ, ಜನಾರ್ಧನ್ ಮುದಲ್ಮೆ, ರಶೀದ್ ತುಂಬೆ, ಇಮ್ತಿಯಾಝ್ ತುಂಬೆ, ಇಬ್ರಾಹಿಂ ವಳವೂರು, ಗಣೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
Next Story





