Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಹಾಡುಗಳೊಂದಿಗೆ 'ಏಪ್ರಿಲ್ ನ ಹಿಮಬಿಂದು'

ಹಾಡುಗಳೊಂದಿಗೆ 'ಏಪ್ರಿಲ್ ನ ಹಿಮಬಿಂದು'

ಶಶಿಕರ ಪಾತೂರುಶಶಿಕರ ಪಾತೂರು4 Aug 2017 4:55 PM IST
share
ಹಾಡುಗಳೊಂದಿಗೆ ಏಪ್ರಿಲ್ ನ ಹಿಮಬಿಂದು

ಹೊಸ ನಿರ್ದೇಶಕರ ತಂಡವಾದರೂ ಸಾಕಷ್ಟು ನಿರೀಕ್ಷೆ ಮೂಡಿಸುವಂಥ ಸಮಾರಂಭ ಅದಾಗಿತ್ತು. ಕಾರಣ 'ಏಪ್ರಿಲ್ ನ ಹಿಮಬಿಂದು' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದ ಹಾಡುಗಳ ಧ್ವನಿಮುದ್ರಿಕೆಯ ಬಿಡುಗಡೆಯಲ್ಲಿ ಖ್ಯಾತನಾಮರ ದಂಡೇ ನೆರೆದಿತ್ತು.

ಶಿವರುದ್ರಪ್ಪ ಮತ್ತು ಜಗದೀಶ್ ಚಿತ್ರರಂಗಕ್ಕೆ ಹೊಸಬರಾದರೂ, ತಮ್ಮ ಸಿನಿಮಾ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯೊಂದಿಗೆ ಬಂದು 'ಶಿವ ಜಗನ್' ಹೆಸರಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ಇಂಥದೊಂದು ಚಿತ್ರ ಕಾರ್ಯರೂಪಕ್ಕೆ ಬರಲು, ಹಿರಿಯ ನಟ ದತ್ತಣ್ಣ ನೀಡಿದ ಸಲಹೆ, ಸಹಕಾರಗಳೇ ಪ್ರಮುಖ ಕಾರಣ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ದತ್ತಣ್ಣ ಚಿತ್ರಕ್ಕೆ ಇಂಥ ಶೀರ್ಷಿಕೆಯನ್ನು ತಾವು ಡಿಕ್ಷನರಿಯಲ್ಲಿ ಹುಡುಕಿ ಪತ್ತೆ ಹಚ್ಚಿದ್ದಾಗಿ ತಿಳಿಸಿದರು. ಭರತ್ ಬಿ ಜೆ ಸಂಗೀತ ನಿರ್ದೇಶನದಲ್ಲಿ ‌ಹಾಡುಗಳಿದ್ದು, ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ಗೀತೆಯೊಂದನ್ನು ಬಳಸಿರುವುದು ವಿಶೇಷ. ಈಗಾಗಲೇ ಜನಪ್ರಿಯವಾಗಿರುವ 'ಇಷ್ಟು ಕಾಲ ಒಟ್ಟಿಗಿದ್ದು..' ಹಾಡು ಹುಟ್ಟಿದ ಸಮಯದ ಬಗ್ಗೆ ತಿಳಿಸಿದ ಎಚ್ಚೆಸ್ವಿಯವರು, 'ಬೆಂಗಳೂರಿನಿಂದ ಹೊಳಲ್ಕೆರೆಗೆ ಹೊರಟ ಬಸ್ಸಿನಲ್ಲಿ ಕುಳಿತಿದ್ದಾಗ ಈ ಸಾಲುಗಳು ಹುಟ್ಟಿದ್ದು, ಆ ಕ್ಷಣಕ್ಕೆ ಬರೆಯಲು ಯಾವುದೇ ಕಾಗದಗಳು ಸಿಗದೇ, ಬಸ್ ಕಂಡಕ್ಟರ್ ನೀಡಿದ ಚೀಟಿಯಲ್ಲೇ ಕವನ ಪೂರ್ತಿಗೊಳಿಸಿದ್ದಾಗಿ ಹೇಳಿದರು.

ಚಿತ್ರಕ್ಕಾಗಿ ಈ ಹಾಡನ್ನು ಸಂಗೀತ ನಿರ್ದೇಶಕರೊಂದಿಗೆ ಸೇರಿ, ಸಂಗೀತಾ ಕಟ್ಟಿ ಕುಲಕರ್ಣಿ ಹಾಡಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯನ್ನು ರಘು ದೀಕ್ಷಿತ್ ಹಾಡಿದ್ದು, ಅವರು ಮಾತನಾಡುತ್ತಾ, ದೊಡ್ಡ ವಿಚಾರಗಳನ್ನು ಕೂಡ ಸರಳವಾಗಿ ಹೇಳುವ ಯೋಗರಾಜ ಭಟ್ಟರ ರಚನೆ  ಇಷ್ಟವಾಯಿತೆಂದರು. ಆದರೆ ಚಿತ್ರದಲ್ಲಿ ತನ್ನ ಮೆಚ್ಚಿನ ಹಾಡು ವಿಜಯ ಪ್ರಕಾಶ್ ಕಂಠದಲ್ಲಿರುವ 'ಅವಳಿಂದ ನಾವೆಲ್ಲ' ಎಂಬ ಗೀತೆ ಎಂದು ತಿಳಿಸಿದರು. ಖುದ್ದು ವಿಜಯಪ್ರಕಾಶ್ ಕೂಡ ಅದರ ರಾಗಸಂಯೋಜನೆ ಮೆಚ್ಚಿ ಕರೆ ಮಾಡಿದ್ದರೆಂಬುದನ್ನು ನೆನಪಿಸಿಕೊಂಡ ಭರತ್ ಬಿ.ಜೆ, ಹಾಡುಗಳನ್ನು ತಮ್ಮದೇ ಮಾಲೀಕತ್ವದ 'ರಿ ಕಾರ್ಡ್' ಎಂಬ ಸಂಸ್ಥೆಯ ಮೂಲಕ ಹೊರಗೆ ತಂದಿದ್ದಾರೆ. 

ಸ್ವತಃ ನಿರ್ಮಾಪಕರು ‌ಸಹ ಆಗಿರುವ ಶಿವ ಜಗನ್ ಜೊತೆಗೆ ಚಿತ್ರದ ಕಲಾವಿದರಾದ ಸಿದ್ಲಿಂಗು ಶ್ರೀಧರ್  ಚಂದನಾ, ಸ್ಪಂದನಾ, ಶ್ವೇತಾ, ಪುಷ್ಪ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X