ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ
ಕಾಸರಗೋಡು, ಆ. 4: ಕಯ್ಯಾರು ಮಂಡೆಕಾಪಿನ ವ್ಯಾಪಾರಿ ರಾಮಕೃಷ್ಣ ಮೂಲ್ಯ (47) ಎಂಬವರನ್ನು ಅಂಗಡಿ ನುಗ್ಗಿ ಕೊಲೆಗೈದ ಪ್ರಕರಣದ ಬಗ್ಗೆ ತನಿಖಾ ತಂಡ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ ಎಡನೀರು ಚೂರಿಮೂಲೆಯ ಬಿ.ಎಂ. ಉಮರ್ ಫಾರೂಕ್ (36), ಪೊವ್ವಲ್ ನ ನೌಶಾದ್ ಶೇಖ್ ( 33), ಬೋವಿಕ್ಕಾನ ಎಂಟನೇ ಮೈಲ್ ನ ಅಬ್ದುಲ್ ಆರಿಫ್ (33) ಮತ್ತು ಚೆಂಗಳ ರಹಮತ್ ನಗರದ ಕೆ .ಅಶ್ರಫ್ (23) ಆರೋಪಿಗಳು ಎಂದು ಗುರುತಿಸಲಾಗಿದೆ. ಮೇ 4ರಂದು ಮಧ್ಯಾಹ್ನ ರಾಮಕೃಷ್ಣ ರನ್ನು ಅಂಗಡಿಗೆ ನುಗ್ಗಿದ ತಂಡವು ಕೊಚ್ಚಿ ಕೊಲೆ ಮಾಡಿತ್ತು. 800 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
Next Story





