Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್...

ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್ ನಿಷಿದ್ಧ ವಸ್ತು: ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಅಂಶು ಗುಪ್ತ

ವಾರ್ತಾಭಾರತಿವಾರ್ತಾಭಾರತಿ5 Aug 2017 10:00 PM IST
share
ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್ ನಿಷಿದ್ಧ ವಸ್ತು: ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಅಂಶು ಗುಪ್ತ

ಮಣಿಪಾಲ, ಆ.5: ಸಮಾಜದಲ್ಲಿ ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್ ನಿಷಿದ್ಧ ವಸ್ತುವಾಗಿದ್ದು, ಅವರು ಈಗಲೂ ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬದಲು ಬಟ್ಟೆ ಹಾಗೂ ಇತರ ಅಸುರಕ್ಷಿತ ವಸ್ತುಗಳನ್ನು ಬಳಸುತ್ತಾರೆ ಎಂದು ಕಳೆದ ವರ್ಷ ಪ್ರತಿಷ್ಠಿತ ಮ್ಯಾಗ್ಸಸ್ಸೆ ಪ್ರಶಸ್ತಿ ಪಡೆದ, ಸರಕಾರೇತರ ಸಂಸ್ಥೆ (ಎನ್‌ಜಿಒ) ‘ಗೂಂಜ್’ನ ಸ್ಥಾಪಕ ಆಂಶು ಗುಪ್ತ ಹೇಳಿದ್ದಾರೆ.

 ಮಣಿಪಾಲದಲ್ಲಿ ಮಣಿಪಾಲ ವಿವಿ ವತಿಯಿಂದ ಆಯೋಜಿಸಲಾಗಿರುವ ಯುವಜನತೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಮತ್ತೊಬ್ಬ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಉಡುಪಿ ಜಿಲ್ಲೆ ಮೂಲದ ಡಾ.ಹರೀಶ್ ಹಂದೆ ಅವರೊಂದಿಗೆ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.

ವೈದ್ಯಕೀಯ ಕಾರಣಗಳಿಗಾಗಿ ಸ್ಯಾನಿಟರ್ ಪ್ಯಾಡ್‌ಗಳು ಮಹಿಳೆಯರಿಗೆ ಕಡ್ಡಾಯವಾಗಿರಬೇಕಿತ್ತು. ಅದರ ಮೂಲಕ ಅವರು ಮುಟ್ಟಿನ ಸಂದರ್ಭದಲ್ಲಿ ಬಾಧಿಸುವ ಹಲವು ಬಗೆಯ ರೋಗಗಳಿಂದ ಪಾರಾಗಲು ಸಾಧ್ಯವಿದೆ. ಆದರೆ ನಮ್ಮ ಸಮಾಜದ ಮಹಿಳೆಯರು ಸುರಕ್ಷಿತ ಪ್ಯಾಡ್‌ಗಳನ್ನು ಬಳಸುವುದನ್ನು ನಿರ್ಬಂಧಿಸುತ್ತಿವೆ ಎಂದವರು ಹೇಳಿದರು.

1998ರಲ್ಲಿ ತಾವು ಸ್ಥಾಪಿಸಿದ ‘ಗೂಂಜ್’ ಸಂಸ್ಥೆ ಹಳೆ ಬಟ್ಟೆಯನ್ನು ನಗರವಾಸಿಗಳಿಂದ ಸಂಗ್ರಹಿಸಿ, ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಗ್ರಾಮೀಣ ಪ್ರದೇಶಗಳ ಅವುಗಳ ಅಗತ್ಯವಿರುವ ಜನತೆಗೆ ನೀಡುವ ಕೆಲಸ ಮಾಡುತ್ತಿತ್ತು. ಇಂದು ಬಟ್ಟೆಗಳಲ್ಲದೇ ಜನರಿಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ನಾವು ಪಡೆದು ಅದನ್ನು ಅಗತ್ಯವುಳ್ಳವರಿಗೆ ವಿತರಿಸುವ ಬಲುದೊಡ್ಡ ಜಾಲವನ್ನು ಹೊಂದಿದ್ದೇವೆ ಎಂದು ಆಂಶು ಗುಪ್ತ ತಿಳಿಸಿದರು.

ನಗರವಾಸಿಗಳ ಹೆಚ್ಚುವರಿ ವಸ್ತುಗಳನ್ನು ನಾವು ಅಭಿವೃದ್ಧಿ ಸಂಪನ್ಮೂಲವಾಗಿ ಪರಿವರ್ತಿಸಿ, ಗ್ರಾಮೀಣ ಪ್ರದೇಶಗಳಲ್ಲಿರುವ ಜನರ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನಾವು ಬಳಸಿಕೊಳ್ಳುತಿದ್ದೇವೆ. ಆದರೆ ನಾವು ಇದನ್ನು ಗ್ರಾಮೀಣ ಜನತೆಗೆ ‘ದಾನ’ವಾಗಿ ನೀಡಿ ಅವರ ‘ಘನತೆ (ಡಿಗ್ನಿಟಿ)’ಗೆ ಭಂಗ ತಾರದೇ, ಅವರಿಂದ ಅವರ ಊರಿನದೇ ಆದ ಯಾವುದಾದರೂ ಅಬಿವೃದ್ಧಿ ಕಾರ್ಯದಲ್ಲಿ ದುಡಿಸಿಕೊಂಡು ಅದಕ್ಕೆ ‘ರಿವಾರ್ಡ್’ ಆಗಿ ಈ ವಸ್ತುಗಳನ್ನು ನೀಡುತ್ತೇವೆ ಎಂದವರು ವಿವರಿಸಿದರು.
ವಾರ್ಷಿಕವಾಗಿ ನಾವಿಂದು ಸುಮಾರು 3000 ಟನ್ ವಿವಿಧ ವಸ್ತುಗಳನ್ನು ಹೀಗೆ ನಗರ ಪ್ರದೇಶಗಳಿಂದ ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಗ್ರಾಮೀಣ ಪ್ರದೇಶದ ಸಮುದಾಯಗಳಿಗೆ ಸಮಾನಾಂತರ ಕರೆನ್ಸಿಯಾಗಿ ನೀಡಿ, ಸ್ಥಳೀಯ ಮೂಲಭೂತ ಸೌಕರ್ಯ, ಶಿಕ್ಷಣದ ಅಗತ್ಯತೆಗಳನ್ನು ಪೂರೈಸುತಿದ್ದೇವೆ. ಇದಕ್ಕಾಗಿ ಅವರ ‘ಘನತೆ’ಗೆ ಯಾವುದೇ ಚ್ಯುತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದವರು ನುಡಿದರು.

ನಮ್ಮಲ್ಲಿ ಹಳೆಯ ಬಟ್ಟೆ, ಪಾತ್ರೆ, ಹಾಗೂ ಇತರ ವಸ್ತುಗಳನ್ನು ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಸುನಾಮಿ, ನೆರೆ ಹಾವಳಿಯ ಸಂದರ್ಭದಲ್ಲಿ ಸಂತ್ರಸ್ಥರಿಗೆ ವಿತರಿಸುವ ವಸ್ತುವಾಗಿ ನಾವು ಪರಿಗಣಿಸುತ್ತೇವೆ. ಆದರೆ ‘ಗೂಂಜ್’ ಇಂಥ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಹಳ್ಳಿಗಳಲ್ಲಿ ಅಗತ್ಯವಿರುವ ರಸ್ತೆಗಳ ನಿರ್ಮಾಣ, ದುರಸ್ಥಿ, ಕೆರೆಗಳ ಹೂಳೆತ್ತುವಿಕೆ, ಬಾವಿಗಳ ಮರುಪೂರಣ, ಮರಗಳ ಕಾಲುಸೇತುವೆ ನಿರ್ಮಾಣ, ಬೆತ್ತದಿಂದ ಸೇತುವೆಗಳ ನಿರ್ಮಾಣ, ಹಳ್ಳಿಗಳ ಸ್ವಚ್ಛತೆಗೆ ನಾವು ಬಳಸಿಕೊಳ್ಳುತ್ತೇವೆ. ಈ ಮೂಲಕ ಜನರ ಮೂಲಭೂತ ಅಗತ್ಯತೆಗಳನ್ನು ನಾವು ಸಾಧ್ಯವಿದ್ಧಷ್ಟು ಮಟ್ಟಿಗೆ ಪೂರೈಸುತ್ತೇವೆ ಎಂದರು.

1998ರಲ್ಲಿ ಗೂಂಜ್ ಸ್ಥಾಪನೆಗೊಂಡಾಗ ಕೇವಲ 67 ಯುನಿಟ್ ಬಟ್ಟೆ ಸಂಗ್ರಹವಾಗಿತ್ತು. ಇಂದು ವಾರ್ಷಿಕವಾಗಿ 3000 ಟನ್ ವಿವಿಧ ವಸ್ತುಗಳು ಸಂಗ್ರಹವಾಗುತ್ತಿದೆ. ವಾರ್ಷಿಕ 17-18 ಕೋಟಿ ರೂ.ಬಜೆಟ್ ನಮ್ಮದಾಗಿದೆ. ನಾವು ಸಂಗ್ರಹಿಸುವ ವಸ್ತುಗಳಲ್ಲಿ ಶೇ.30ರಿಂದ 40ರಷ್ಟು ಮರು ಬಳಕೆಗೆ ಯೋಗ್ಯವಲ್ಲ. ನಗರದ ಜನರು ಬಳಕೆಗೆ ಯೋಗ್ಯವಲ್ಲದ, ಸಾಧ್ಯವಿಲ್ಲದ ವಸ್ತುಗಳನ್ನು ‘ದಾನ’ವೆಂದು ನೀಡುತ್ತಾರೆ. ನಾವು ಅವುಗಳನ್ನು ಎಸೆಯಬೇಕಾಗುತ್ತದೆ.

 ನಮ್ಮ ಕುಟುಂಬ ‘ರಿವಾರ್ಡ್’ಗಳ ಮೂಲಕ ನಾವು ಒಂದು ಲಕ್ಷ ಚದರ ಮೀ.ನ ಕಾಶ್ಮೀರದ ದಾಲ್‌ಲೇಕ್‌ನ್ನು ಸ್ವಚ್ಚಗೊ ಳಿಸಿದ್ದೇವೆ. ವಿವಿದೆಡೆಗಳಲ್ಲಿ 100ರಷ್ಟು ಕೆರೆಗಳನ್ನು ಸಹ ಪುನರುಜ್ಜೀವನಗೊಳಿಸಿದ್ದೇವೆ. ಇಂದು ನಾವು 16-17 ರಾಜ್ಯಗಳಲ್ಲಿ 22 ಕೇಂದ್ರಗಳನ್ನು ಹೊಂದಿದ್ದೇವೆ. ಕರ್ನಾಟಕದಲ್ಲೂ ನಾವು ಕಾರ್ಯನಿರ್ವಹಿಸುತಿದ್ದು, ಅದನ್ನು ವಿಸ್ತರಿಸುವ ಯೋಜನೆ ರೂಪಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಹರೀಶ್ ಹಂದೆ ಹಾಗೂ ಸೆಲ್ಕೋದ ಸಿಓಓ ಮೋಹನ್ ಹೆಗಡೆ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X