ಉಳ್ಳಾಲ ಸೈಯದ್ ಮದನಿ ಸೋಶಿಯಲ್ ಫ್ರೆಂಡ್ಸ್ಗೆ ಚಾಲನೆ

ಮಂಗಳೂರು, ಆ.6: ಸರಕಾರದಿಂದ ಬರುವ ಸವಲತ್ತು ಕಟ್ಟಕಡೆಯ ಜನರಿಗೂ ತಲುಪಿಸುವ ಜೊತೆ ಕೆಡುಕುಮುಕ್ತ ಸಮಾಜ ನಿರ್ಮಾಣದಲ್ಲಿ ಸಂಘಟನೆ ತೊಡಗಿಸಿಕೊಂಡು ಜನಮನ್ನಣೆ ಗಳಿಸಲು ಮುಂದಾಗಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಸೈಯದ್ ಮದನಿ ಸೋಶಿಯಲ್ ಫ್ರೆಂಡ್ಸ್ (ಎಸ್ಎಂಎಸ್ಎಫ್) ಸಂಘಟನೆಗೆ ದರ್ಗಾ ವಠಾರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದ ಯುವಕರನ್ನು ಧಾರ್ಮಿಕತೆಯತ್ತ ಸೆಳೆಯುವ ಮೂಲಕ ಮಾದಕ ವಸ್ತುಗಳ ದಾಸರಾಗಿ ದುಷ್ಕೃತ್ಯ ಮಾಡುವುದನ್ನು ತಡೆಯುವುದು ಆವಶ್ಯಕತೆಯಾಗಿದೆ. ಉಳ್ಳಾಲ ಭಾಗದಲ್ಲಿ ಹಿಂದೆ ಇದ್ದಂತಹ ಪರಿಸ್ಥಿತಿ ಇಂದು ಬದಲಾಗಿದೆ ಎನ್ನುವುದು ಪೊಲೀಸರ ವರದಿ ಹೇಳುತ್ತಿದೆ. ಈ ಭಾಗದಲ್ಲಿ ನಿರ್ಮಾಣವಾಗಿರುವ ಉತ್ತಮ ವಾತಾವರಣ ಎಲ್ಲೆಡೆ ನಿರ್ಮಿಸಲು ಸಂಘಟನೆಯ ಸದಸ್ಯರು ಕಾರ್ಯಾಚರಿಸಬೇಕು ಎಂದು ಅಬ್ದುಲ್ ರಶೀದ್ ಸಲಹೆ ನೀಡಿದರು.
ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಸಖಾಫಿ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಬಾವ ಮುಹಮ್ಮದ್, ಯು.ಕೆ.ಇಸ್ಮಾಯಿಲ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸದಸ್ಯ ಖಾಸಿಂ ಕೋಡಿ, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್.ಮುಹಮ್ಮದ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಕೋಶಾಧಿಕಾರಿ ಹಮೀದ್ ಕಲ್ಲಾಪು, ಸದಸ್ಯ ಅಯೂಬ್ ಯು.ಪಿ, ಅಕ್ಕರೆಕೆರೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅಬೂಬಕ್ಕರ್, ಕುಂಞಿ ಅಹ್ಮದ್, ಅಬೂಬಕ್ಕರ್ ಹೈದರಾಲಿ ರಸ್ತೆ, ಹಮೀದ್ ಅಲೇಕಳ, ಹಮೀದ್ ಕೋಡಿ, ಚೆಯಿಮೋನು, ಆಲಿಮೋನು, ಇಬ್ರಾಹಿಂ ಉಳ್ಳಾಲಬೈಲ್, ಜಮಾಲ್ ಬಾರ್ಲಿ, ಅಬ್ಬಾಸ್ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕರ ನೇಮಕ: ದರ್ಗಾ ಅಧೀನಕ್ಕೊಳಪಡುವ ಐದು ಮೊಹಲ್ಲಾಗಳಿಗೆ ಸಂಚಾಲಕರನ್ನು ನೇಮಿಸಲಾಯಿತು. ಕಲ್ಲಾಪುವಿಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೋಟೆಪುರಕ್ಕೆ ಸ್ವದಕತ್ತುಲ್ಲಾ, ಅಲೇಕಳಕ್ಕೆ ಇಬ್ರಾಹಿಂ, ಮುಕಚ್ಚೇರಿಗೆ ಖಾಲಿದ್ ಉಳ್ಳಾಲಬೈಲ್ ಹಾಗೂ ಮೇಲಂಗಡಿಗೆ ಕೌನ್ಸಿಲರ್ ಪೊಡಿಮೋನು ನೇಮಕಗೊಂಡರು.







