ಹಸುಗೂಸು ಮೃತ್ಯು
ಶಂಕರನಾರಾಯಣ, ಆ.11: ಹುಟ್ಟಿದ ಮಗುವೊಂದು ಚಿಕಿತ್ಸೆ ಫಲಕಾರಿ ಯಾಗದೆ ಉಡುಪಿಯ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬೆಳ್ವೆ ಗ್ರಾಮದ ಗುಮ್ಮೊಲ ನಿವಾಸಿ ಗುಲಾಬಿ ನಾಯ್ಕ ಎಂಬವರ ಮಗಳು ಸರಸ್ವತಿ(22) ಆ.7ರಂದು ರಾತ್ರಿ 10:30ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಮಗುವಿನ ಬಾಯಿಯಿಂದ ರಕ್ತ ಬರುತ್ತಿದ್ದು, ಕೂಡಲೇ ಮಗುವನ್ನು ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ ಆ.10ರಂದು ಸಂಜೆ 6:15ರ ಸುಮಾರಿಗೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story