ಪ್ರಧಾನಿ ರಾಜಿನಾಮೆ ನೀಡಲಿ : ಜನಾರ್ದನ ಪೂಜಾರಿ
ಉತ್ತರ ಪ್ರದೇಶದಲ್ಲಿ 60ಕ್ಕೂ ಅಧಿಕ ಮಕ್ಕಳ ಸಾವು ಪ್ರಕರಣ
ಮಂಗಳೂರು.ಆ,12:ಉತ್ತರ ಪ್ರದೇಶದಲ್ಲಿ ಆಮ್ಲಜನಕದ ಕೊರತೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ.ಜನರಿಗೆ ಅಗತ್ಯವಾಗಿ ಬೇಕಾದ ಆಮ್ಲ ಜನಕವನ್ನೂ ತಾನು ಆಯ್ಕೆಯಾದ ಕ್ಷೇತ್ರದಲ್ಲಿ ಪೂರೈಸಲಾಗದ ಪ್ರಧಾನಿ ರಾಜಿನಾಮೆ ನೀಡುವುದು ಉತ್ತಮ ಎಂದು ರಾಹುಲ್ ಗಾಂಧಿ ಹೇಳಿಕೆಯನ್ನು ತಾನು ಬೆಂಬಲಿಸುವುದಾಗಿ ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲೂ ಬರಗಾಲದ ಪರಿಸ್ಥಿತಿ ಭೀಕರವಾಗಿದೆ.ಈ ಸಂದರ್ಭದಲ್ಲಿ ರೈತರ ಕಷ್ಟಗಳನ್ನು ಆಲಿಸಲು ರಾಜ್ಯದ ಮುಖ್ಯಮಂತ್ರಿ ಅವರ ಬಳಿ ತೆರಳಬೇಕಾಗಿತ್ತು.ರೈತರ ಬಳಿ ತೆರಳಲು ಬಿಡುವಿಲ್ಲದಿದ್ದರೆ ಮುಖ್ಯಮಂತ್ರಿಯೂ ರಾಜಿನಾಮೆ ನೀಡಿ ಮನೆಗೆ ಹೋಗಬೇಕು ಎಂದು ಜನಾರ್ದನ ಪೂಜಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story