ಆ.15: ಎಸ್ಕೆಎಸ್ಸೆಸ್ಸೆಫ್ನಿಂದ 'ಫ್ರೀಡಂ ಸ್ಕ್ವೇರ್'
ಮಂಗಳೂರು, ಆ.12: ‘ಒಂದಾಗಿ ಬಾಳೋಣ ಸೌಹಾರ್ದ ಕಾಯೋಣ’ ಎಂಬ ವಾಕ್ಯದಡಿ ಎಸ್ಕೆಎಸ್ಸೆಸ್ಸೆಫ್ನಿಂದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಆ.15ರಂದು ಸಂಜೆ 4:15ಕ್ಕೆ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮವು ವಲಯ ಕೇಂದ್ರಗಳಾದ ದ.ಕ.ಜಿಲ್ಲೆಯ ಅಡ್ಯಾರ್ ಕಣ್ಣೂರು, ಕೈಕಂಬ, ನೆಹರೂ ನಗರ, ಪಾಣೆಮಂಗಳೂರು, ಕಬಕ, ಕುಂಬ್ರ, ಉಪ್ಪಿನಂಗಡಿ, ಮರ್ದಾಳ, ಅರಂತೋಡು, ಬೆಳ್ತಂಗಡಿ, ತೋಡಾರು, ಸುರತ್ಕಲ್ ಹಾಗೂ ಕೊಡಗು, ಚಿಕ್ಕಮಗಳೂರು, ಹಾಸನ, ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗುರುಗಳು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.
Next Story