Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜಿಲ್ಲೆಯ ಯುವ ಕಲಾವಿದರು ರಚಿಸಿದ ಕೇರಳ...

ಜಿಲ್ಲೆಯ ಯುವ ಕಲಾವಿದರು ರಚಿಸಿದ ಕೇರಳ ಶೈಲಿಯ ಭಿತ್ತಿ ಚಿತ್ರಗಳ ಪ್ರದರ್ಶನ

ವಾರ್ತಾಭಾರತಿವಾರ್ತಾಭಾರತಿ12 Aug 2017 7:52 PM IST
share
ಜಿಲ್ಲೆಯ ಯುವ ಕಲಾವಿದರು ರಚಿಸಿದ ಕೇರಳ ಶೈಲಿಯ ಭಿತ್ತಿ ಚಿತ್ರಗಳ ಪ್ರದರ್ಶನ

ಚಿಕ್ಕಮಗಳೂರು, ಆ.12:  ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ಆ.14ರಿಂದ 24ರವರೆಗೆ10ದಿನಗಳ ಕಾಲ ಚಿತ್ರಕಲಾ ವಿದ್ಯಾರ್ಥಿಗಳಿಗೆ ಕೇರಳದ ಮ್ಯೂರಲ್ ವರ್ಣಚಿತ್ರ ರಚನಾ ಕಾರ್ಯಗಾರವನ್ನು ಶ್ರಿೀಮತಿ ಮಧುಶಿಲ್ಪನಿರ್ಧೇಶನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ತಿಳಿಸಿದ್ದಾರೆ.

ಅವರು ಶನಿವಾರ ಈ ಕುರಿತು ಹೇಳಿಕೆ ನೀಡಿದ್ದು, ಜಿಲ್ಲೆಯ 24 ಯುವ ಕಲಾವಿದರು ಭಾಗವಹಿಸಿ ಈ ಒಂದು ಶೈಲಿಯ ವೀಶೇಷತೆಗಳನ್ನು ಸಮೂಹವಾಗಿ ಅಬ್ಯಾಸ ಮಾಡಿ ಸಮೂಹವಾಗಿ ಚಿತ್ರರಚಿಸಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಕೃಷ್ಣ ಹಾಗೂ ರುಕ್ಮಿಣಿ, ಅನಂತ ಪದ್ಮನಾಭ, ಗಣಪತಿ, ಸರಸ್ವತಿ, ನಟರಾಜನ ದೂಡ್ಡ ಗಾತ್ರದ ಕಲಾಕೃತಿಗಳನ್ನು ವಿಕ್ಷಿಸಬಹುದಾಗಿದೆ. ಆ.14 ರಂದು ಈ ಬಿತ್ತಿ ಚಿತ್ರ ಸಾರ್ವಜನಿಕರಿಗೆ ವೀಕ್ಷಣೆಗೆ ಶಾಂತಿನಿಕೇತನ ಆರ್ಟ್ ಗ್ಯಾಲರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಉದ್ಗಾಟನೆಗೊಳ್ಳಲಿದೆ.

ಚಿತ್ರರಚನೆಗೆ ಪೂರ್ವದಲ್ಲಿ ರಚನಾ ಕ್ರಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.1 ಗೋಡೆಗಳನ್ನು ಚಿತ್ರರಚನೆ ಪೂರಕವಾಗುವಂತೆ ಪೆಸ್ಕೋ ಮಾಧರಿಯಲ್ಲಿ ಜಾಗವನ್ನು ಸಿದ್ದಪಡಿಸಿಕೂಳ್ಳುವುದು. 2 ರೇಖಾಚಿತ್ರ 3 ಬಣ್ಣಗಳ ಅನ್ವಯ 4 ಅಲಂಕಾರಿಕ ವಿವರಗಳನ್ನು ಸೇರಿಸುವುದು.ಕೇರಳದ ಭಿತ್ತಿಚಿತ್ರಗಳಲ್ಲಿ ಓಕರ್- ಹಳದಿ, ಬಿಳಿ, ನೀಲಿ, ಹಸಿರು ,ಶುದ್ಧ ಹಸಿರು,ಆಕಾಶ ನೀಲಿ ಕೆಂಪುಬಣ್ಣ ಪ್ರಮುಖವಾಗಿ ಕಂಡು ಬರುತ್ತದೆ. ಸಸ್ಯಜನ್ಯ ವರ್ಣಗಳು ಹಾಗೂ ಕನಿಜ ವರ್ಣದ್ರವ್ಯಗಳಿಂದ ಮತ್ತು ಕಚ್ಚಾ ರಾಸಾಯಿನಿಕಗಳಿಂದ ತಯಾರಿಲಾಗಿದೆ.

ಇವುಗಳಲ್ಲಿ ಬಿಳಿ ಬಣ್ಣವನ್ನು ಸುಣ್ಣದಿಂದ ಹೂರತೆಗೆಯಲಾಗಿದ್ದು, ಕಪ್ಪುದೀಪಗಳ ಇಂಗಾಲದ ಮಬ್ಬು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಖನಿಜಗಳಿಂದ ತಯಾರಿಸಲಾಗುತ್ತಿತ್ತು. ನೀಲಿಬಣ್ಣವನ್ನು ಸಸ್ಯಗಳಿಂದ ಪಡೆಯಲಾಗುತ್ತಿತ್ತು. ಗಾಡವಾದ ಕೆಂಪುಬಣ್ಣವನ್ನು ತಯಾರಿಸಲು ಲ್ಯಾಕ್ ರಸವನ್ನು ಸಹ ಬಳಸಲಾಗುತ್ತಿತ್ತು. ಪೈನ್ ರಾಳ ಮತ್ತು ತೈಲ ಮಿಶ್ರಣದಿಂದ ಲ್ಯಾಕರಿಂಗ್ ಲೇಪನವನ್ನು ಮಾಡಿ ಬಿತ್ತಿಚಿತ್ರಗಳು ಯಾವುದೆ ಮಳೆ ಗಾಳಿಗೆ ಹಾಳಗದಂತೆ ಸಂರಕ್ಷಿಸುತ್ತಿದ್ದರು.

ಇವುಗಳ ರಚನೆಯಲ್ಲಿ ಬಾಹ್ಯರೇಖೆಗಳನ್ನು ಕುಂಚ ಹಾಗೂ ಕ್ರಯಾನ್ ಗಳಿಂದ ಚಿತ್ರಿಸಿರುವುದನ್ನು ಕಾಣಬಹುದು.ಆಕೃತಿಗಳಲ್ಲಿ ಐದು ಪ್ರಮುಖ ನಿಲುವನ್ನು ಸೂಚಿಸುತ್ತದೆ. ಮುಂಬಾಗ,ಅರ್ಧಮುಂಬಾಗ,ಪರಾಕಾಷ್ಠೆ ಈ ತರದಲ್ಲಿ ಚಿತ್ರಗಳ ರಚನರಯಲ್ಲಿ ವಿಭಜಿಸಿರುವುದು ಕಂಡು ಬರುತ್ತದೆ ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X