15ರಂದು ಸಹ್ಯಾದ್ರಿ ಸಂಚಯದಿಂದ ‘ನದಿವನ ರೋದನ’
ಮಂಗಳೂರು, ಆ.13: ಪಶ್ಚಿಮ ಘಟ್ಟದಲ್ಲಿ ಪರಿಸರ ವಿನಾಶಕ ಯೋಜನೆಗಳ ಮೂಲಕ ನದಿ ಮತ್ತು ಅರಣ್ಯದ ಸ್ವಾತಂತ್ರ ಹನನವಾಗುತ್ತಿದೆ ಎಂದು ಆರೋಪಿಸಿ ಸಹ್ಯಾದ್ರಿ ಸಂಚಯದ ವತಿಯಿಂದ ಆ. 15ರಂದು ನದಿ ವನ ರೋದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story