Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕಲಬುರ್ಗಿ ಹತ್ಯೆಯ ಆನಂತರದ ಬರಹಗಳು

ಕಲಬುರ್ಗಿ ಹತ್ಯೆಯ ಆನಂತರದ ಬರಹಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ13 Aug 2017 11:36 PM IST
share
ಕಲಬುರ್ಗಿ ಹತ್ಯೆಯ ಆನಂತರದ ಬರಹಗಳು

‘‘ಅರಿವಿನ ನೆಲೆಗಳು’’ ಪ್ರೊ. ರಾಜೇಂದ್ರ ಚೆನ್ನಿಯವರ ಲೇಖನಗಳ ಸಂಗ್ರಹಗಳು. ಈ ಕೃತಿಯಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಚೆನ್ನಿ ಅವರು ಬರೆದ ಲೇಖನಗಳಿವೆ. ಕಳೆದ ಒಂದೆರಡು ವರ್ಷ ಎಂದರೆ, ಎಂ. ಎಂ. ಕಲಬುರ್ಗಿಯವರು ತೀರಿ ಹೋದ ಆನಂತರದ ದಿನಗಳಲ್ಲಿ ಹೊರಬಂದ ಲೇಖನಗಳು ಇವು. ಆದುದರಿಂದಲೇ, ಚೆನ್ನಿಯವರು ಸಾಹಿತ್ಯ, ಸಂಸ್ಕೃತಿ ಎಂದು ಮುಟ್ಟಲು ಹೊರಟ ವಸ್ತುಗಳೆಲ್ಲ ರಾಜಕೀಯ ಚರ್ಚೆಯಾಗಿಯೂ ರೂಪ ಪಡೆಯುತ್ತದೆ. ವರ್ತಮಾನದಲ್ಲಿ ಸಂಸ್ಕೃತಿ, ಸಾಹಿತ್ಯವನ್ನು ಹೇಗೆ ರಾಜಕೀಯ ಸುತ್ತಿಕೊಂಡಿದೆ ಎನ್ನುವುದನ್ನು ಹೇಳುತ್ತದೆ. ಇಲ್ಲಿರುವ ಬಹುಪಾಲು ಲೇಖನಗಳು ಸಮಾಜ, ಸಂಸ್ಕೃತಿ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟವುಗಳು. ಒಂದೆರಡು ಸಾಹಿತ್ಯದ ಕುರಿತಂತೆಯೂ ಇದೆ. ಕಾಕತಾಳೀಯವಾಗಿ ಇಲ್ಲಿನ ಲೇಖನಗಳು ತೆರೆದುಕೊಳ್ಳುವುದೇ ಕಲಬುರ್ಗಿಯನ್ನು ನೆನೆಯುವ ಮೂಲಕ. ‘ಕೆಟ್ಟಿತ್ತು ಕಲ್ಯಾಣ: ಕಲಬುರ್ಗಿಯವರ ಹತ್ಯೆ’ ಕರ್ನಾಟಕದ ಚರಿತ್ರೆಯಲ್ಲಿ ಒಂದು ದೊಡ್ಡ ತಿರುವಿನ ದ್ಯೋತಕ ಎಂದು ಚೆನ್ನಿ ಅಭಿಪ್ರಾಯಪಡುತ್ತಾರೆ. ವರ್ತಮಾನ ಹೇಗೆ ಹಿಂಸೆಯನ್ನು ಸಮರ್ಥಿಸುವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ಕಲಬುರ್ಗಿಯ ಹತ್ಯೆಯನ್ನು ರೂಪಕವಾಗಿಟ್ಟುಕೊಂಡು ಚೆನ್ನಿ ಚರ್ಚಿಸುತ್ತಾರೆ. ಕಲಬುರ್ಗಿಯವರ ಹತ್ಯೆಯು ಹಠಾತ್ತನೆ ನಡೆದ ಒಂದು ಘಟನೆಯಲ್ಲ, ಅದು ಸದ್ಯದ ಚರಿತ್ರೆಯ ಒಂದು ಬೆಳವಣಿಗೆಯ ಫಲವಾಗಿದೆ ಎಂದು ಚೆನ್ನಿ ಗ್ರಹಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೃತಿಗಳನ್ನು, ಕೃತಿಕಾರರನ್ನು ಹಿಂಸೆಗೆ ಒಳಪಡಿಸುತ್ತಿರುವ ಸಂಘಟನೆಗಳು ಏನನ್ನೂ ಓದದ, ಸಾಹಿತ್ಯವನ್ನು ಕೇಳಿಯೂ ಅರಿಯದ, ಧರ್ಮದ ಪಾವಿತ್ರತೆಯ ಪರಿಚಯವೂ ಇಲ್ಲದ ಕ್ರಿಮಿನಲ್ ಸ್ವಭಾವದ ವ್ಯಕ್ತಿಗಳ ಸಂಘಟನೆಗಳಾಗಿವೆ. ಇವುಗಳನ್ನು ಸರಕಾರಗಳು ನಿಷೇಧಿಸದಿದ್ದರೆ ಕನ್ನಡ ಸಂಸ್ಕೃತಿಯು ವೈಚಾರಿಕತೆಯ ತನ್ನ ಪರಂಪರೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡುತ್ತಾರೆ. ‘ಸಮಕಾಲೀನ ದಲಿತ ಸಾಹಿತ್ಯ’ ಬರಹದಲ್ಲಿ ಭಾರತೀಯ ಹಾಗೂ ಪ್ರಾದೇಶಿಕ ಭಾಷೆಗಳ ದಲಿತ ಸಾಹಿತ್ಯ ಮತ್ತು ವಿಮರ್ಶೆಯ ಅನುಸಂಧಾನ ದಲ್ಲಿ ದಲಿತ ಸಾಹಿತ್ಯ ಮೀಮಾಂಸೆಯ ಅನನ್ಯ ಮಾರ್ಗವನ್ನು ಅವರು ಶೋಧಿಸಿದ್ದಾರೆ. ‘ಸಂಸ್ಕೃತಿಗಳು ಯಾವುದು ಪ್ರಧಾನ ಯಾವುದು ಅಧೀನ’ ಲೇಖನ ದಲ್ಲಿ ಸಂಸ್ಕೃತಿ ಸಂಬಂಧ ಕನ್ನಡದಲ್ಲಿ ನಡೆದ ಅಧ್ಯಯನದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಸೆಕ್ಯುಲರ್ ವಾದವನ್ನು ಕುರಿತಂತೆ ಎರಡು ಮಹತ್ವದ ಲೇಖನಗಳಲ್ಲಿ ಪಶ್ಚಿಮ ಮತ್ತು ಪೂರ್ವಗಳಲ್ಲಿ ಸೆಕ್ಯುಲರ್‌ವಾದ ಬೆಳೆದು ಬಂದ ಬಗೆ, ಚಾರಿತ್ರಿಕವಾಗಿ ಪಡೆದ ವಿಭಿನ್ನ ಅರ್ಥ ಸಾಧ್ಯತೆಗಳು, ಅವುಗಳ ಹಿಂದಿನ ಚಾರಿತ್ರಿಕ ಒತ್ತಡಗಳನ್ನು ಕುರಿತಾದ ವಿದ್ವತ್ಪೂರ್ಣ ವಿಶ್ಲೇಷಣೆ ಇದೆ. ಹಾಗೆಯೇ ಈ ಕೃತಿಯಲ್ಲಿ ಹಲವು ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದ ಲೇಖನಗಳಿವೆ. ಪ್ರಾದೇಶಿಕ, ಭಾರತೀಯ, ಇತರ ಭಾಷೆಗಳ ಹಾಗೂ ಜಾಗತಿಕ ಸಾಹಿತ್ಯ ಸಂವೇದನೆ ಚಿಂತನೆ ಸಂದರ್ಭಗಳ ಮುಖಾಮುಖಿಯಲ್ಲಿ ವಿಶ್ಲೇಷಣೆಗಳು ನಡೆಯುತ್ತವೆ. ಕಲಬುರ್ಗಿ, ರಾಜ್‌ಕುಮಾರ್, ಶೇಕ್ಸ್ ಪಿಯರ್, ಕನಕದಾಸ ಹೀಗೆ ಹಲವು ವ್ಯಕ್ತಿತ್ವಗಳ ಮೂಲಕ, ಸಾಂಸ್ಕೃತಿಕ ಸಾಮಾಜಿಕ ಬಿಕ್ಕಟ್ಟುಗಳನ್ನು ಅವರ ಬರಹಗಳು ಚರ್ಚಿಸುತ್ತವೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 140 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X