Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ವಾರ್ತಾಭಾರತಿವಾರ್ತಾಭಾರತಿ14 Aug 2017 12:18 AM IST
share
ಓ ಮೆಣಸೇ..


  ಹಿಂಸೆಯಿಂದ ನಮ್ಮ ಸಿದ್ಧಾಂತ ದಮನ ಮಾಡಲು ಸಾಧ್ಯವಿಲ್ಲ -ಅರುಣ್ ಜೇಟ್ಲಿ, ಕೇಂದ್ರ ಸಚಿವ
ಎಷ್ಟಾದರೂ ಹಿಂಸೆಯಿಂದಲೇ ಹುಟ್ಟಿದ ಸಿದ್ಧಾಂತವಲ್ಲವೇ?
--------------------
ಚೀನಾ ವಸ್ತು ಬಹಿಷ್ಕರಿಸಿ -ಶೋಭಾ ಕರಂದ್ಲಾಜೆ, ಸಂಸದೆ
 ವಲ್ಲಭಬಾಯಿ ಪಟೇಲ್‌ರ ಬೃಹತ್ ಪ್ರತಿಮೆಯನ್ನೂ ಬಹಿಷ್ಕರಿಸಬೇಕಾಗುತ್ತದೆ.

---------------------

  ಆಂಗ್ಲ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಮಾತೃ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚು ಚುರುಕು -ಜೆ.ಆರ್.ಲೋಬೋ, ಶಾಸಕ
 
ಅದಕ್ಕೇ ಇರಬೇಕು, ಸರಕಾರಿ ಶಾಲೆಗಳಿಗೆ ನೀವು ಚುರುಕು ಮುಟ್ಟಿಸುತ್ತಿರುವುದು.

---------------------
 
ನನ್ನ ರಾಜಕಾರಣಕ್ಕೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
  ಅದರ ಋಣ ತೀರಿಸುವುದಕ್ಕಾಗಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯೇ?
---------------------
  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಡಿಜಿಟಲ್ ಯೋಧರ ಅಗತ್ಯವಿದೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಚೀನಾದಿಂದ ತರಿಸುವುದಕ್ಕೆ ಒಪ್ಪಂದವಾಗಿದೆಯಂತೆ.
---------------------
ಮನೆಯಲ್ಲಿ ಪೂಜೆ ಇತ್ತು ಹಾಗಾಗಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ -ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
 
ನನ್ನ ಅಧಃಪತನಕ್ಕೆ ನಡೆಸಿದ ವಿಶೇಷ ಪೂಜೆ ಅದು ಎಂದು ಯಡಿಯೂರಪ್ಪ ಆರೋಪಿಸಿದರಂತೆ.

---------------------
 
ಎಐಎಡಿಎಂಕೆಯ 2 ಬಣಗಳು ವಿಲೀನವಾಗುವುದನ್ನು ನೋಡಲು ನಾನು ಕಾಯುತ್ತಿದ್ದೇನೆ -ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
 
ಜಯಲಲಿತಾ ಅವರೊಂದಿಗೇ ವಿಲೀನವಾಗುವ ಕ್ಷಣಗಳಿಗಾಗಿಯೂ ಕೆಲವರು ಕಾಯುತ್ತಿದ್ದಾರೆ.

---------------------
 
ಭಾರತ ಬದಲಾಗಿರುವುದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಕೂಡಾ ಬದಲಾಗಬೇಕು -ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ
  ತಾವಂತೂ ಬದಲಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ.
------------------------------------------
ಇನ್ನು ಮುಂದೆ 35 ಸಾವಿರಕ್ಕೆ ಒಂದು ಲೋಡ್ ಮಲೇಶ್ಯಾ ಮರಳು ಸಿಗಲಿದೆ -ಟಿ.ಬಿ.ಜಯಚಂದ್ರ, ಸಚಿವ
 
ರಾಜ್ಯದ ಮನೆಗಳನ್ನೆಲ್ಲ ಇನ್ನು ಮುಂದೆ ಮೇಡ್ ಇನ್ ಮಲೇಶ್ಯಾ ಎಂದು ಕರೆಯಲು ಅಡ್ಡಿಯಿಲ್ಲ.

---------------------
 
ಸಾಹಿತಿಗಳಲ್ಲಿ ಎಡ-ಬಲ ಪಂಥಗಳಿಲ್ಲ -ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
ಭೈರಪ್ಪ ಮತ್ತು ಭೈರಪ್ಪ ವಿರೋಧಿ ಪಂಥಗಳಷ್ಟೇ ಸದ್ಯಕ್ಕಿರೋದು ಅಂತೀರಾ?
---------------------
 
ಪ್ರತಿಯೊಬ್ಬರಿಗೂ ಸಂಸ್ಕೃತ ಭಾಷೆಯ ಅರಿವು ಬಂದರೆ, ಭಾರತೀಯ ಸಂಸ್ಕೃತಿಯ ವಿರುದ್ಧ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇಂಗ್ಲಿಷ್ ಅರಿವು ಬಂದರೆ ತಮ್ಮ ಸಂಸ್ಕೃತಿಯ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಭಯವೇ?
---------------------
  ಹೆರಿಗೆ ಸಂಕಟ ಏನೆಂಬುದು ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು (ಐಟಿ ದಾಳಿ ಬಗ್ಗೆ) -ಡಿ.ಕೆ.ಶಿವಕುಮಾರ್, ಸಚಿವ
 
ಗುಜರಾತ್‌ನಲ್ಲಿ ನಡೆದಿರುವ ನಿಮ್ಮ ಹೆರಿಗೆ ಗಜಪ್ರಸವ ಬಿಡಿ.

--------------------
 
ಕನಸುಗಳನ್ನು ನೀವು ಎಂದಿಗೂ ಬಿಟ್ಟು ಕೊಡಬೇಡಿ -ಬಾಬಾ ರಾಮ್‌ದೇವ್, ಯೋಗಗುರು
  ಅದು ನಿಮ್ಮ ಹೊಸ ಉತ್ಪನ್ನದ ಹೆಸರೇ?
---------------------
 
ಉ.ಪ್ರ.ದಲ್ಲಿ ಈಗ ಯಾರನ್ನೂ ಯಾರೂ ಕೇಳದಂತಹ ಸ್ಥಿತಿ ನಿರ್ಮಾಣವಾಗಿದೆ -ಅಖಿಲೇಶ್ ಯಾದವ್, ಉ.ಪ್ರ.ಮಾಜಿ ಮುಖ್ಯಮಂತ್ರಿ
  ತಂದೆಯನ್ನು ಮಗ, ಮಗನನ್ನು ತಂದೆ ಕೇಳದಂತಹ ಸ್ಥಿತಿ ನಿರ್ಮಾಣವಾದ ಮೇಲೆ ಇನ್ನೇನು?
---------------------

ಚುನಾವಣೆಗಳು ವೈಯಕ್ತಿಕ ಹಾಗೂ ರಾಜಕೀಯ ದ್ವೇಷಕ್ಕೆ ಬಲಿಯಾಗುತ್ತಿರುವುದು ಅಪಾಯಕಾರಿ -ಅಹ್ಮದ್ ಪಟೇಲ್, ರಾಜ್ಯಸಭಾ ಸದಸ್ಯ
  ದ್ವೇಷಕ್ಕೆ ಜನಸಾಮಾನ್ಯರು ಬಲಿಯಾದರೆ ಪರವಾಗಿಲ್ಲವೇ?
---------------------

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನಾನು ಮಾತನಾಡಲ್ಲ -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ಪ್ರತ್ಯೇಕ ಒಕ್ಕಲಿಗರ ಧರ್ಮವನ್ನೇನಾದರೂ ಸ್ಥಾಪಿಸುವ ಯೋಜನೆಯಿದೆಯೇ?
---------------------
 
ಮುಸ್ಲಿಮರಲ್ಲಿ ಅಭದ್ರತೆ ಭಾವನೆ ಮೂಡಿದೆ -ಹಾಮಿದ್ ಅನ್ಸಾರಿ, ಮಾಜಿ ಉಪರಾಷ್ಟ್ರಪತಿ
  ನೀವು ಉಪರಾಷ್ಟ್ರಪತಿ ಸ್ಥಾನ ತ್ಯಜಿಸುವುದರಿಂದಾಗಿಯೇ?
---------------------
 
2022ರ ವೇಳೆಗೆ ಹೊಸ ಭಾರತಕ್ಕೆ ಪಣ ತೊಡಬೇಕು -ನರೇಂದ್ರ ಮೋದಿ, ಪ್ರಧಾನಿ
  ಅಂದರೆ ಹಳೆ ಭಾರತವನ್ನು ಸರ್ವನಾಶ ಮಾಡಿಯೇ ಸಿದ್ಧ ಎಂದು ನಿರ್ಧರಿಸಿದ್ದೀರಿ ಎಂದಾಯಿತು.
---------------------
 
ಭಾರತ ವಿಶ್ವಗುರು ಆಗಬೇಕು ಎಂದು ಆರೆಸ್ಸೆಸ್ ಬಯಸುತ್ತದೆ-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆದರೆ ವಿಶ್ವವೂ ಬಯಸಬೇಕಲ್ಲವೇ?
---------------------
  ಮುಸ್ಲಿಮರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಜಮ್ಮು- ಕಾಶ್ಮೀರದಲ್ಲಿ ಹಲವಾರು ವೈವಿಧ್ಯತೆಗಳಿವೆ. - ಮಹಬೂಬ ಮುಫ್ತಿ, 
 
ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಇನ್ನೂ ಉಳಿದಿವೆಯೇ ಎಂದು ಬಿಜೆಪಿ ಅಚ್ಚರಿಪಡುತ್ತಿದೆಯಂತೆ.

---------------------
 
ಶೇ.50 ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರು -ಪ್ರಮೋದ್ ಮುತಾಲಿಕ್, 
  ಶ್ರೀ ರಾಮ ಸೇನೆ ಅಧ್ಯಕ್ಷ ಅಂದರೆ ಉಳಿದ ಶೇ.50 ಮಂದಿ ಪ್ರಾಮಾಣಿಕರು ಎಂದು ಬಿಜೆಪಿಗೆ ನಿಮ್ಮ ಪ್ರಮಾಣಪತ್ರವೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X