ಇರ್ವತ್ತೂರು: ಕಾರ್ಮಿಕ ಮಹಿಳೆ ನೇಣಿಗೆ ಶರಣು
ಬಂಟ್ವಾಳ, ಆ. 14: ಇರ್ವತ್ತೂರು ಜೆಲ್ಲಿ ಕ್ವಾರೆ ಬಾಡಿಗೆ ಬಿಡಾರದಲ್ಲಿ ಕಳೆದ ಹಲವು ಸಮಯದಿಂದ ವಾಸವಾಗಿದ್ದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ.
ಮೃತರನ್ನು ಇಲ್ಲಿನ ಕೂಲಿ ಕಾರ್ಮಿಕ ಕುಮಾರ ಎಂಬವರ ಪತ್ನಿ ಪಂಕಜ (30) ಎಂದು ಗುರುತಿಸಲಾಗಿದೆ.
ಮೂಲತಃ ಹುಣಸೂರು ತಾಲೂಕಿನ ಸಿರಿಯೂರು ನಿವಾಸಿಯಾಗಿರುವ ಈಕೆಯ ಸಹೋದರ ಈಚೆಗಷ್ಟೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು ಎನ್ನಲಾಗಿದೆ. ಇದೇ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story