Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶಾಲಾ ಬಾಲಕಿ ಜೆಲು ಸೇರಿದ್ದು!

ಶಾಲಾ ಬಾಲಕಿ ಜೆಲು ಸೇರಿದ್ದು!

-ನಝೀರ್ ಮುಂಡಗೋಡ-ನಝೀರ್ ಮುಂಡಗೋಡ14 Aug 2017 11:51 PM IST
share
ಶಾಲಾ ಬಾಲಕಿ ಜೆಲು ಸೇರಿದ್ದು!

ಲೀಲಾಬಾಯಿ ಫಕೀರಪ್ಪ ಇಂಗಳಕಿ! ಮುಂಡಗೋಡು ಗ್ರಾಮದ ಹೆಮ್ಮೆ ಈಕೆ. ದೇಶದ ಸ್ವಾತಂತ್ರಕ್ಕಾಗಿ ತನ್ನ 15ನೆ ವರ್ಷದಲ್ಲಿ ಜೈಲಿಗೆ ಹೋದ ಖ್ಯಾತಿಯನ್ನು ತಮ್ಮದಾಗಿಸಿಕೊಂಡವರು. ಸದ್ಯಕ್ಕೆ ಮುಂಡಗೋಡ ಪಟ್ಟಣದ ನಂದೀಶ್ವರ ನಗರದಲ್ಲಿ ವಾಸಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕದಡಿ ಗ್ರಾಮದ ಯಮನಪ್ಪ ಹಾಗೂ ಚಂದವ್ವ ಕದಡಿ ದಂಪತಿಯ ಪುತ್ರಿ ಈಕೆ. 6-2-1927 ರಲ್ಲಿ ಹುಟ್ಟಿದರು. ಗದಗ ಜಿಲ್ಲೆಯ ಕದಡಿ ಯವರಾದ ಇವರು ಶಾಲಾ ಕಲಿಯು ತ್ತಿದ್ದ ವೇಳೆಯೇ ಸ್ವಾತಂತ್ರದ ಕನಸನ್ನು ಕಾಣುತ್ತಿದ್ದರು. ಹುಬ್ಬಳ್ಳಿ ಕೆ.ಎಂ.ಸಿ. ಹತ್ತಿರವಿರುವ ಆಶ್ರಮ ಶಾಲೆಯಲ್ಲಿ ತಮ್ಮ ಏಳನೆ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆಯಲ್ಲಿ ಸ್ವಾಂತಂತ್ರ ಹೋರಾಟಕ್ಕೆ ಇಳಿದವರು. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಹಳ್ಳಿಕೇರಿ ಗುದ್ಲೇಪ್ಪ, ಮಹದೇವ ಮೈಲಾರಿ, ಕಲ್ಗೂದರಿ, ಸ್ವಾತಂತ್ರ ಹೋರಾಟಕ್ಕಿಳಿಯಲು ಸ್ಫೂರ್ತಿಯಾದರು.

1942 ರ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ ಆಶ್ರಮ ಶಾಲೆಯ 15 ಹೆಣ್ಣುಮಕ್ಕಳ(ಲೀಲಾಬಾಯಿ ಸಹಿತ)ನ್ನು ಬ್ರಿಟಿಷರು ಬಂಧಿಸಿ, ಹುಬ್ಬಳ್ಳಿಯಲ್ಲಿ 4-5 ದಿನ ಹಾಗೂ ಧಾರವಾಡದಲ್ಲಿ 8-10 ದಿನ ಪೊಲೀಸ್ ಠಾಣೆಯಲ್ಲಿ ಇಟ್ಟು ನಂತರ ಬೆಳಗಾಂವ ಹಿಂಡಲಾಗ ಜೈಲಿಗೆ ಕಳುಹಿಸಿದರು. ಸುಮಾರು 3 ತಿಂಗಳ ಹಿಂಡಲಾಗ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ನಂತರ ಇವರನ್ನು ಬಿಡುಗಡೆ ಮಾಡಲಾಯಿತು. ಆಗ ಲೀಲಾಬಾಯಿಯವರಿಗೆ ಕೇವಲ 15 ವರ್ಷ. ಬಿಡುಗಡೆ ಹೊಂದಿದ ನಂತರ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು

ದಾಂಪತ್ಯ: 1947ರಲ್ಲಿ ಭಾರತದ ಏರ್‌ಫೋರ್ಸ್‌ನ ಉದ್ಯೋಗಿಯಾಗಿರುವ ಕುಂದಗೋಳ ತಾಲೂಕಿನ ಇಂಗಳಕಿ ಗ್ರಾಮದ ಫಕೀರಪ್ಪ ಇಂಗಳಕಿ ಜತೆ ಬಳಿಕ ಮದುವೆಯಾಯಿತು. ಮದುವೆ ನಂತರ ಪತಿ ಜತೆ ದಿಲ್ಲಿ, ಕಾನಪೂರ ಮುಂತಾದ ಕಡೆ ವಾಸ ಮಾಡಬೇಕಾಯಿತು. ಇವರ ಓರ್ವ ಪುತ್ರಿ ಮಲೇಶ್ಯಾದಲ್ಲಿದ್ದರೆ, ಮಗ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿ ಮನೆಯಲ್ಲಿದ್ದಾರೆ.

ಪತಿ ಫಕೀರಪ್ಪಇಂಗಳಕಿ ಏರ್‌ಫೋರ್ಸ್‌ನಿಂದ ನಿವೃತ್ತಿ ಹೊಂದಿದ ನಂತರ 1975ರಲ್ಲಿ ಮುಂಡಗೋಡ ತಾಲೂಕಿನ ಬಾಚಣಿಕಿ ಗ್ರಾಮದಲ್ಲಿ ಬಂದು ಇಲ್ಲಿಯ ನಿವಾಸಿಗಳಾಗಿದ್ದರು. ಬಾಚಣಿಕೆ ಗ್ರಾಮದಲ್ಲಿ ತಮ್ಮ ಸ್ವಂತ ದುಡಿಮೆಯಿಂದ ತೆಗೆದುಕೊಂಡ ಹೊಲಗದ್ದೆಯಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 1983 ರಲ್ಲಿ ಇವರು ಮೃತಪಟ್ಟರು.

ಲೀಲಾವತಿ ಅವರು ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿ ಬಂದನಂತರ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸನ್ಮಾನಿಸಲಾಗಿತ್ತು. ‘‘ಜೈಲಿನಲ್ಲಿದ್ದಾಗ ಮಣಿಬೇನ್ ಪಟೇಲ್, ಉತ್ತರಭಾರತದ ಸಹರಾಬಾಯಿ, ಮೃದಲಾ ನಮ್ಮ ಶೆಲ್ಲಿನ ಪಕ್ಕದಲ್ಲಿಯೇ ಇದ್ದರು, ನಮ್ಮ ಜತೆ ಮಾತನಾಡುತ್ತಿದ್ದರು’’ ಎಂದು ಇವರು ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ವೀರನಗೌಡ ಪಾಟೀಲ ನಾಗಮ್ಮ ಪಾಟೀಲ ಮಾಗಡಿ ಇವರ ಪರಿಚಯವೂ ಜೈಲಿನಲ್ಲೇ ಆಯಿತು.

share
-ನಝೀರ್ ಮುಂಡಗೋಡ
-ನಝೀರ್ ಮುಂಡಗೋಡ
Next Story
X