ಕಾಸರಗೋಡು: ನಗರ ಸಭಾ ಸ್ಟೇಡಿಯಂ ನಲ್ಲಿ ಸ್ವಾತಂತ್ರ್ಯೋತ್ಸವ
ಕಾಸರಗೋಡು, ಆ. 15: ಸ್ವಾತಂತ್ರ್ಯೋತ್ಸವದಂಗವಾಗಿ ಕಾಸರಗೋಡು ವಿದ್ಯಾನಗರ ನಗರ ಸಭಾ ಸ್ಟೇಡಿಯಂ ನಲ್ಲಿ ರಾಜ್ಯ ಕಂದಾಯ ಸಚಿವ ಇ .ಚಂದ್ರಶೇಖರನ್ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ಸಿಮೋನ್, ಶಾಸಕರಾದ ಪಿ. ಬಿ ಅಬ್ದುಲ್ ರಝಾಕ್, ಎನ್. ಎ ನೆಲ್ಲಿಕುನ್ನು, ಕೆ. ಕು೦ಞ ರಾಮನ್, ಎಂ. ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಪೊಲೀಸ್, ಅಬಕಾರಿ, ಎನ್ ಸಿ ಸಿ , ಸ್ಕೌಟ್- ಗೈಡ್ಸ್ ನಿಂದ ಪಥ ಸಂಚಲನ ನಡೆಯಿತು.
Next Story