Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಿಡುಗಡೆಯಾಯಿತು ಪುಷ್ಪಕ್ಕನ ಪುಸ್ತಕ‌

ಬಿಡುಗಡೆಯಾಯಿತು ಪುಷ್ಪಕ್ಕನ ಪುಸ್ತಕ‌

ಶಶಿಕರ ಪಾತೂರುಶಶಿಕರ ಪಾತೂರು16 Aug 2017 2:36 PM IST
share
ಬಿಡುಗಡೆಯಾಯಿತು ಪುಷ್ಪಕ್ಕನ ಪುಸ್ತಕ‌

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಕ್ಕ ಪುಷ್ಪಾ ನಾಗತಿಹಳ್ಳಿಯವರ ಮೂರನೆಯ ಪುಸ್ತಕ 'ಕಾದಿರುವಳು' ಲೋಕಾರ್ಪಣೆಯಾಯಿತು.

'ನನ್ನ ಎರಡು ಪುಸ್ತಕಗಳನ್ನು ಪ್ರಕಟಿಸಿ‌ ಪ್ರೋತ್ಸಾಹಿಸಿ 'ಕವಯತ್ರಿ' ಎಂದು ಕರೆಯುತ್ತಿದ್ದ ತಮ್ಮನೇ ನನಗೆ ಹೀಗೆ ಮತ್ತೊಂದು‌ ಪುಸ್ತಕ ಬರೆಯಲು ಸ್ಫೂರ್ತಿಯಾಗಿದ್ದಾನೆ' ಎಂದರು ಪುಷ್ಪಾ ನಾಗತಿಹಳ್ಳಿ. ಪುಸ್ತಕ ಮತ್ತು ಸಾಹಿತಿಯ ಬಗ್ಗೆ ಮಾತನಾಡಿದ ಪತ್ರಕರ್ತ, ಕಾದಂಬರಿಕಾರ ಜೋಗಿಯವರು ಸಮಕಾಲೀನ‌ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಈ‌ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಕಾರಂತ, ಲಂಕೇಶರಂಥ ಮಹಾನ್ ಪ್ರತಿಭೆಗಳು ಅವರ ಬರಹಗಳಿಂದ ನಮಗೆ ಹತ್ತಿರವಾಗಬಹುದು. ಆದರೆ ಹಾಗಂತ ಅವರ ಚಿಂತನೆಗಳನ್ನು ನಾವು ನಮ್ಮದೇ ಧೋರಣೆಯಲ್ಲಿ ಇರಬೇಕೆಂದು ಬಯಸುವುದು ಸರಿಯಲ್ಲ ಎಂದರು.

ಅದಕ್ಕೆ ಉದಾಹರಣೆಯಾಗಿ ಮೋಹನ್ ಆಳ್ವರ ವಿದ್ಯಾಸಂಸ್ಥೆಯ ಪರವಾಗಿ ನಿಂತುಕೊಂಡ ಸಾಹಿತಿ ವೈದೇಹಿಯನ್ನು ವಿರೋಧಿಸುತ್ತಿರುವವರ ಕುರಿತೂ ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಪ್ರೊಫೆಸರ್ ಕಮಲಾ ಹಂಪನಾ, ಕಾದಂಬರಿಯ ಒಳ ಹೂರಣಗಳನ್ನು ಬಿಚ್ಚಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ "ನನ್ನದೇ ಸಹೋದರಿಯಾದರೂ ನನ್ನ ಹಾಗೆಯೇ ಬರೆಯಬೇಕೆಂಬ ಚೌಕಟ್ಟಿಲ್ಲದೆ, ಪುಷ್ಪಕ್ಕ ಅವಳದೇ ರೀತಿಯಲ್ಲಿ ಬರೆದಿದ್ದಾಳೆ. ಅದುವೇ ಪುಸ್ತಕದ ವಿಶೇಷತೆಯೂ ಹೌದು. ಅವಳ ಪುಸ್ತಕವನ್ನು ನಾನೇ ಪ್ರಕಟಿಸುವುದಕ್ಕಿಂತಲೂ, ರವೀಂದ್ರನಾಥ ಸಿರಿವರ ತಮ್ಮ ‌ಪ್ರಕಾಶನದ ಮೂಲಕ ‌ಹೊರಗೆ ತರುತ್ತಿರುವುದು ಮತ್ತೊಂದು ಖುಷಿಯ ವಿಚಾರ" ಎಂದರು.

ಪುಷ್ಪಾ ನಾಗತಿಹಳ್ಳಿಯವರು ಮೊದಲ ‌ಪುಸ್ತಕವನ್ನು ತಮ್ಮ ತಾಯಿಗೆ ನೀಡುವ ಮೂಲಕ‌ ಲೋಕಾರ್ಪಣೆ ಮಾಡಿದರು.

ಪ್ರಮಾಣ ಪತ್ರ ವಿತರಣೆ

ಸಮಾರಂಭ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂಜೆ  ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಹಲವು ಕಾರಣಗಳಿಂದ ವಿಶಿಷ್ಟವಾದುದಾಗಿತ್ತು. ಮೂರು ದಶಕದ ಹಿಂದೆ ಅವರು ಒಂದು ಪುಸ್ತಕ ಬಿಡುಗಡೆಯೊಂದಿಗೆ ಶೋಭಾರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದಕ್ಕೆ ವೇದಿಕೆಯಾಗಿದ್ದ 'ಅಭಿವ್ಯಕ್ತಿ' ಸಾಂಸ್ಕೃತಿಕ ಸಂಘದ 32ನೆಯ ವಾರ್ಷಿಕೋತ್ಸವವೂ ಹೌದು. ಇದೇ ಸಂದರ್ಭದಲ್ಲಿ ಅವರು ಇತ್ತೀಚೆಗಷ್ಟೇ ತಮ್ಮ ಟೆಂಟ್ ಸಿನಿಮಾ ಶಾಲೆಯ ಮೂಲಕ‌ ನಡೆಸಿದ್ದ 'ಸಿನಿಮಾ ಸೃಷ್ಟಿಯ ಸಮಗ್ರ ತರಬೇತಿ' ಕಾರ್ಯಾಗಾರದಲ್ಲಿ‌ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಚಿತ್ರ ನಟಿ ಸುಮನ್ ನಗರ್ಕರ್ ಪ್ರಮಾಣ ಪತ್ರಗಳನ್ನು ವಿತರಿಸಿ, ಶುಭ ಹಾರೈಸಿದರು. ಹೆಣ್ಣುಮಕ್ಕಳು ಕೂಡ ಇಂಥ ಕಾರ್ಯಾಗಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಲೆಂದು ಅಭಿಪ್ರಾಯ ಪಟ್ಟರು. ಶಂಕರ್ ನಾಗ್ ನಿಂದ ರಕ್ಷಿತ್ ಶೆಟ್ಟಿಯ ವರೆಗೆ ತಮ್ಮದೇ ಆದ ತಂಡಕಟ್ಟಿಕೊಂಡು ಚಿತ್ರ ಮಾಡುವವರಿಗೆ ಸದಾ ಹೊಸತನದ ಪ್ರಯೋಗಗಳನ್ನು ಮಾಡಲು ಹೆಚ್ಚು ಅವಕಾಶವಿರುತ್ತದೆ ಎಂದು ಜೋಗಿಯವರು ಕಿವಿಮಾತು ಹೇಳಿದರು.

ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಇಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಲಾವಿದರಾದ ರಘು ಸಮರ್ಥ, ನಿರ್ದೇಶಕ ಮಂಜು ಸ್ವರಾಜ್, ಚಲನಚಿತ್ರ ಅಕಾಡೆಮಿಯ ಶಿವರಾಮ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X