ಆ.27: ವಿಜ್ಞಾನ ಅಣಕು ಪರೀಕ್ಷೆ
ಉಡುಪಿ, ಆ.16: ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆಯಡಿ ಮೂಲವಿಜ್ಞಾನದಲ್ಲಿ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಡೆಸಲಾಗುವ ಪರೀಕ್ಷೆಯ ಅಣಕು ಪರೀಕ್ಷೆಯು ಆ.27ರಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿ.
ಪ್ರಥಮ, ದ್ವಿತೀಯ ಪಿಯುಸಿ(ವಿಜ್ಞಾನ) ಹಾಗೂ ಪ್ರಥಮ ಪದವಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ ಪೂರ್ಣಪ್ರಜ್ಞ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಡಾ.ರಾಘವೇಂದ್ರ(9845949648), ಸುದರ್ಶನ ಶೆಟ್ಟಿ, ಮುಖ್ಯಸ್ಥರು ರಸಾಯನ ಶಾಸ್ತ್ರ ವಿಭಾಗ (9611562468), ರಾಕೇಶ್ ಉಪನ್ಯಾಸಕರು, ಗಣಿತ ವಿಭಾಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story