Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಇಂದ್ರಸಭಾ- ಪ್ರೇಮದ ಹಂಬಲಿಕೆ

ಇಂದ್ರಸಭಾ- ಪ್ರೇಮದ ಹಂಬಲಿಕೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ17 Aug 2017 7:16 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಇಂದ್ರಸಭಾ- ಪ್ರೇಮದ ಹಂಬಲಿಕೆ

 ಸೈಯದ್ ಆಗಾ ಹಸನ್ ಅಮಾನತ್ ಲಖನವಿ ಉರ್ದು ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರು. ಕ್ರಿ. ಶ. 1815ರಂದು ಲಖನೋದಲ್ಲಿ ಇವರು ಹುಟ್ಟಿದರು. ಹದಿಹರೆಯದಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಈ ಲೇಖಕ ಯೌವನದ ಬಹುಭಾಗವನ್ನು ಅತ್ಯಂತ ನೋವಿನಿಂದ ಕಳೆಯಬೇಕಾಯಿತು. ಮಾತನಾಡುವ ಶಕ್ತಿಯನ್ನೂ ಇವರು ಕಳೆದುಕೊಂಡಿದ್ದರು. ಬದುಕಿನ ಬಹುಮುಖ್ಯ ಭಾಗವನ್ನು ಮನೆಯೊಳಗೇ ಕಳೆಯಬೇಕಾದ ಸ್ಥಿತಿ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ, ಮನೆಯೊಳಗಿನ ಸಾಹಿತ್ಯಕ ವಾತಾವರಣ ಅವರನ್ನು ಕೈ ಹಿಡಿದು ನಡೆಸಿತು. ಓದು ಅವರ ಸಂಗಾತಿಯಾಯಿತು. ಉರ್ದು, ಹಿಂದಿ, ಫಾರಸಿ, ಸಂಸ್ಕೃತ ಭಾಷೆಗಳ ಅಧ್ಯಯನ ಮಾಡಿದರು. ಎಲ್ಲ ಧರ್ಮಶಾಸ್ತ್ರಗಳನ್ನೂ ತನ್ನದಾಗಿಸಿಕೊಂಡರು.

ಆದರೆ ಬರವಣಿಗೆಗೆ ಪೂರಕವಾದ ದೈಹಿಕ ಶಕ್ತಿ ಅವರಿಗಿರಲಿಲ್ಲ. ವಿಶೇಷವೆಂದರೆ ಅವರೆಲ್ಲ ಅಸಹಾಯಕತೆಯಿಂದ ಹೊರಬಂದ ಏಕೈಕ ಕೃತಿ ‘ಇಂದ್ರಸಭಾ’ ಎಂಬ ಉರ್ದು ನಾಟಕ. ನಲವತ್ತಮೂರು ವರ್ಷ ಬದುಕಿದ್ದ ಅವರು ಈ ಏಕೈಕ ನಾಟಕದಿಂದಲೇ ಜನಮಾನಸದಲ್ಲಿ ಉಳಿದು ಬಿಟ್ಟರು.‘ಇಂದ್ರಸಭಾ’ ಉರ್ದು ಭಾಷೆಯ ಮೊತ್ತ ಮೊದಲ ಗೀತ ನಾಟಕ ಕೃತಿ ಎಂದೂ ಹೆಸರಾಯಿತು. ಲೇಖಕ ಸಯ್ಯದ್ ಆಗಾ ಹಸನ್ ಅವರು ಅಂದಿನ ಅವಧ್ ದೊರೆ ವಾಜೀದ್ ಅಲಿ ಶಾಹನ ಅಪೇಕ್ಷೆಯ ಮೇರೆಗೆ ಬರೆದುಕೊಟ್ಟರು ಎಂಬ ಪ್ರತೀತಿಯೂ ಇದೆ. ಶುದ್ಧ ಉರ್ದು ಭಾಷೆಯಲ್ಲಿರುವ ಈ ಕೃತಿಯಲ್ಲಿ ಕೆಲವಡೆ ಅವಧ್ ಹಾಗೂ ಲಕ್ನೋವಿನ ಸ್ಥಳೀಯ ಹಿಂದಿ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಕುವೆಂಪು ಭಾಷಾ ಪ್ರಾಧಿಕಾರ ಇವರ ವತಿಯಿಂದ ಹಮ್ಮಿಕೊಳ್ಳಲಾದ ಭಾರತೀಯ ಭಾಷಾ ನಾಟಕ ಮಾಲಿಕೆಯ ಭಾಗವಾಗಿ ಈ ಕೃತಿಯನ್ನು ಉರ್ದುವಿನಿಂದ ಕನ್ನಡಕ್ಕೆ ಇಳಿಸಲಾಗಿದೆ.

ಲೇಖಕರಾದ ಬೋಡೆ ರಿಯಾಝ್ ಅಹಮದ್, ಚಿದಾನಂದ ಸಾಲಿ, ವಿಕ್ರಮ ವಿಸಾಜಿ ಅವರು ಜೊತೆಗೆ ಈ ನಾಟಕವನ್ನು ಕನ್ನಡಕ್ಕಿಳಿಸಿದ್ದಾರೆ. ಈ ನಾಟಕವು ಉರ್ದು ಭಾಷೆಯ ವಿಭಿನ್ನ ಕಾವ್ಯ ಪ್ರಕಾರಗಳಾದ ಗಝಲ್, ನಜ್ಮ್, ನಸ್ರ್, ಮಸ್ನವಿ ಮತ್ತು ಹಿಂದಿ ಭಾಷೆಯ ಠುಮ್ರಿ, ಛಂದ್, ಗೀತ್ ಮೊದಲಾದ ರೂಪಗಳಲ್ಲಿದೆ. ನಾಟಕದ ವಸ್ತು ಪ್ರೇಮ. ಪ್ರೇಮಕ್ಕಾಗಿ ಹಂಬಲಿಸುವ, ಚಟಪಡಿಸುವ, ದುರಂತ ತಂದುಕೊಳ್ಳುವ ಮತ್ತು ಕೊನೆಯಲ್ಲಿ ಸುಖಾಂತ್ಯ ಕಾಣುವ ನಾಟಕವಿದು. ದೇವಲೋಕದ ಅಪ್ಸರೆ ಮತ್ತು ಭೂಲೋಕದ ನರಮನುಷ್ಯನ ನಡುವಿನ ಪ್ರೇಮ ತಿಕ್ಕಾಟದ ಕಥಾನಕವಿದು. ಹಿಂದೂ-ಮುಸ್ಲಿಮ್ ಪಾತ್ರಗಳೆರಡೂ ತಮ್ಮ ಧಾರ್ಮಿಕ ಆವರಣ ಕಳೆದುಕೊಂಡು ಅಪ್ಪಟ ಪ್ರೇಮಭಾಷೆಯಲ್ಲಿ ಮಿಲನಗೊಳ್ಳುವ ವಿಶಿಷ್ಟ ಕುತೂಹಲಕಾರಿ ಕಥನವನ್ನು ಈ ನಾಟಕ ಹೊಂದಿದೆ. ಕೃತಿಯ ಮುಖಬೆಲೆ 50 ರೂಪಾಯಿ. ಆಸಕ್ತರು 080- 23183311-12 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X