ಆಲದಪದವಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಮಂಗಳೂರು, ಆ.18: ಆಲದಪದವಿನ ಅಲ್ ಮಸ್ಜಿದುಲ್ ಬದ್ರಿಯಾದ ಆಶ್ರಯದಲ್ಲಿ 71ನೆ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಹಂಝ ಬಸ್ತಿಕೋಡಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಉಸ್ತಾದ್ ಅಬ್ದುಲ್ ರಹಿಮಾನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರನ್ನು ಸ್ಮರಿಸಿ, ದುಆ ನೆರವೇರಿಸಿದರು.
ಜಮಾಅತಿನ ಪದಾಧಿಕಾರಿಗಳು, ಹಿರಿಯರು, ಮಕ್ಕಳು ಈ ಸಂದರ್ಭ ಉಪಸ್ಥಿತರಿದ್ದರು.
ಕೊನೆಯಲ್ಲಿ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು.
Next Story