ಬಜ್ಪೆ: ಪಿಎಫ್ಐನಿಂದ ರಕ್ತದಾನ ಶಿಬಿರ
ಮಂಗಳೂರು, ಆ. 21: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆವಲಯ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ 71ನೆ ಸ್ವಂತ್ರೋತ್ಸವದ ಅಂಗವಾಗಿ ರಕ್ತದಾನ ಶಿಬಿರವು ಬಜ್ಪೆ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಪಿಎಫ್ಐ ಬಜ್ಪೆ ವಲಯ ಅಧ್ಯಕ್ಷ ಹಸೈನಾರ್ ಅಧ್ಯಕ್ಷತೆ ವಹಿಸಿದ್ದು. ಎಸ್ಡಿಪಿಐ ಮುಲ್ಕಿ, ಮೂಡಬಿದಿರೆ ವಿಧಾನಸಭೆ ಕ್ಷೇತ್ರ ಅಧ್ಯಕ್ಷ ಜಮಾಲ್ ಜೋಕಟ್ಟೆ ಸಭೆಯನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಂ.ಜೆ.ಎಂ. ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಜಾವಳಿ, ಬಜ್ಪೆ ಗ್ರಾಮ ಪಂಚಾಯತ್ ಸದಸ್ಯ ನಝೀರ್, ಮೋಬ್ ಯೂತ್ ಅಧ್ಯಕ್ಷ ನಿಝಾಮ್, ಎ.ಜೆ.ಅಸ್ಪತ್ರೆಯ ಡಾ.ರಿತೇಶ್, ಅನ್ಸಾರ್ ಶಾಲೆಯ ಪ್ರಾಂಶುಪಾಲ ಜಯಶ್ರೀ ದೇವರಾಜ್ ಹಾಗೂ ಪಿಎಫ್ಐ ದ.ಕ. ಜಿಲ್ಲಾ ಮೆಡಿಕಲ್ ಉಸ್ತುವಾರಿ ಇಲ್ಯಾಸ್ ಬಜ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Next Story