Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಣೆಯಾಗಿದ್ದ ಭಟ್ಕಳದ ವೃದ್ಧೆ ಕೊನೆಗೂ...

ಕಾಣೆಯಾಗಿದ್ದ ಭಟ್ಕಳದ ವೃದ್ಧೆ ಕೊನೆಗೂ ಮಂಗಳೂರಿನಲ್ಲಿ ಪತ್ತೆ

ಬಹುಮಾನ ಹಸ್ತಾಂತರ

ವಾರ್ತಾಭಾರತಿವಾರ್ತಾಭಾರತಿ23 Aug 2017 8:56 PM IST
share
ಕಾಣೆಯಾಗಿದ್ದ ಭಟ್ಕಳದ ವೃದ್ಧೆ ಕೊನೆಗೂ ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಆ.23: ಭಟ್ಕಳದ ಮಗ್ದೂಮ್ ಎಂಬಲ್ಲಿಂದ ಜೂ. 23ರಿಂದ ಕಾಣೆಯಾಗಿದ್ದ ಝುಲೇಖಾ (60) ಎಂಬವರು ಬುಧವಾರ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಇದರೊಂದಿಗೆ ಕಳೆದ 3 ತಿಂಗಳಿನಿಂದ ಆತಂಕಗೊಂಡಿದ್ದ ಮನೆ ಮಂದಿ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಧ್ಯಮ ವರ್ಗ ಕುಟುಂಬದ ಝುಲೇಖಾ ಮೂಗಿಯಾಗಿದ್ದು, ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಕಳೆದ ರಮಝಾನ್‌ನಲ್ಲಿ ಈದುಲ್ ಫಿತ್ರ್‌ಗಾಗಿ ಹೆಮ್ಮಾಡಿಯಲ್ಲಿರುವ ತಮ್ಮ ಮೊಮ್ಮಕ್ಕಳಿಗೆ ನೀಡಲೆಂದು ಹೊಸ ಬಟ್ಟೆಬರೆಯೊಂದಿಗೆ ಮನೆಯಿಂದ ಜೂ. 23ರಂದು ಹೊರಟಿದ್ದರು. ಆ ಬಳಿಕ ಇವರು ಹೆಮ್ಮಾಡಿಗೂ ತಲುಪದೆ ಮನೆಗೂ ಮರಳದೆ ಕಾಣೆಯಾಗಿದ್ದರು.

ಝುಲೇಖಾರ ಕುಟುಂಬಸ್ಥರು ಮಂಗಳೂರಿನ ಜನಸಂದಣಿ ಪ್ರದೇಶ, ಮಸೀದಿ, ರೈಲು ನಿಲ್ದಾಣದಲ್ಲಿ ಫ್ಲೆಕ್ಸ್ ಹಿಡಿದು ನಿಂತು ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸತೊಡಗಿದ್ದರು. ಅಲ್ಲದೆ ಝುಲೇಖಾ ಹಾಗೂ ಅವರ ಸಹೋದರಿಯ ಮಕ್ಕಳು ಮಂಗಳೂರಿನಲ್ಲಿ ತಿಂಗಳ ಕಾಲ ಹುಡುಕಾಡಿದ್ದರು.

ಬುಧವಾರ ಮಧ್ಯಾಹ್ನ ಸುಮಾರು 1:15ರ ವೇಳೆಗೆ ಝುಲೇಖಾ ರೈಲು ನಿಲ್ದಾಣದಲ್ಲಿದ್ದುದನ್ನು ಕಂಡ ಹೋಮ್‌ಗಾರ್ಡ್ಸ್ ಕುದ್ರೋಳಿಯ ರಾಜಶ್ರೀ ತಕ್ಷಣ ಝುಲೇಖಾರ ಸಹೋದರಿಯ ಪುತ್ರ ಸೈಯದ್ ಅಬ್ರಾರ್‌ಗೆ ಮಾಹಿತಿ ನೀಡಿದರಲ್ಲದೆ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸಂಜೆಯ ವೇಳೆಗೆ ಪೊಲೀಸರು ಝುಲೇಖಾರನ್ನು ಮನೆ ಮಂದಿಗೆ ಒಪ್ಪಿಸಿದ್ದಾರೆ.

*ಝುಲೇಖಾರಿಗೆ ಬಾಯಿ ಬರುವುದಿಲ್ಲ, ಮಾತು ಕೇಳುವುದಿಲ್ಲ. ಮನೆ ಮಂದಿ ಮೂಕಭಾಷೆಯಲ್ಲೇ ಮಾತನಾಡಿದಾಗ, ನಾನು ಎಲ್ಲೂ ಹೋಗಿಲ್ಲ. ಇಲ್ಲೇ ತಿರುಗಾಡುತ್ತಿದ್ದೆ. ಮಲಗುತ್ತಿದ್ದೆ. ಊಟ ಮಾಡದೆ ಕೆಲವು ದಿನ ಆಯಿತು ಎನ್ನುತ್ತಾ ಕುಟುಂಬಸ್ಥರನ್ನು ಕಂಡ ಸಂತಸದಲ್ಲಿ ಅಪ್ಪಿ ಹಿಡಿದರು.

*ಝುಲೇಖಾ ನಾಪತ್ತೆಯಾದ ಒಂದೆರಡು ದಿನಗಳಲ್ಲಿ ನನಗೆ ಕಾಣಲು ಸಿಕ್ಕಿದ್ದರು. ಅವರನ್ನು ಹಿಡಿಯುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಇಂದು ಮಧ್ಯಾಹ್ನ ನಾನು ಕರ್ತವ್ಯದಲ್ಲಿದ್ದಾಗ ಝುಲೇಖಾರನ್ನು ಕಂಡೆ. ಇವರ ನಾಪತ್ತೆಯ ಸುದ್ದಿಯೂ ನನಗೆ ತಿಳಿದಿತ್ತು. ಅದರಂತೆ ನಾನು ಅವರನ್ನು ವಿಚಾರಿಸಿದಾಗ ಸ್ಪಷ್ಟ ಉತ್ತರ ನೀಡಲಿಲ್ಲ. ಅಲ್ಲದೆ, ವಾಟ್ಸ್‌ಆ್ಯಪ್‌ನಲ್ಲಿ ಅವರ ಫೋಟೊ ತೆಗೆದು ಸಂಬಂಧಿ ಅಬ್ರಾರ್‌ಗೆ ಕಳುಹಿಸಿದೆ. ಅಲ್ಲದೆ ವೀಡಿಯೊ ಮೂಲಕ ಮಾತನಾಡಿಸಿದೆ. ಝುಲೇಖಾರನ್ನು ಗುರುತಿಸಿದ ಅಬ್ರಾರ್ ನಾವು ಬರುವವರೆಗೆ ವಶದಲ್ಲಿಟ್ಟುಕೊಳ್ಳಿ ಎಂದು ಸೂಚಿಸಿದರು. ಅದರಂತೆ ನಾನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ಹೋಮ್‌ಗಾರ್ಡ್ಸ್ ರಾಜಶ್ರೀ ಹೇಳಿದರು.

*ನಮ್ಮ ಕುಟುಂಬದ ಹಿರಿಯ ಮಹಿಳೆ ಸಿಕ್ಕಿದ್ದು ನಮಗೆ ತುಂಬಾ ಸಂತಸವಾಗಿದೆ. ಅವರು ಮರಳಿ ನಮ್ಮನ್ನು ಸೇರುವ ವಿಶ್ವಾಸವೇ ಇರಲಿಲ್ಲ. ಆದರೆ ಅದಿಂದು ಕೈಗೂಡಿದೆ ಎಂದು ಕುಟುಂಬಸ್ಥರಾದ ಅಬ್ರಾರ್ ಮತ್ತು ಅಬ್ದುಲ್ ರವೂಫ್ ಹೇಳಿದರು.

*ಬಹುಮಾನ ಹಸ್ತಾಂತರ: ಈ ಸಂದರ್ಭ ಕುಟುಂಬಸ್ಥರು ಹೋಮ್‌ಗಾರ್ಡ್ಸ್ ರಾಜಶ್ರೀಗೆ 10 ಸಾವಿರ ರೂ. ಬಹುಮಾನ ಹಸ್ತಾಂತರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X