ಎಕ್ಸಲೆಂಟ್ನಲ್ಲಿ ಐಐಟಿ ಓರಿಯಂಟೇಶನ್
ಮೂಡುಬಿದಿರೆ, ಆ.23: ‘ದೇಶದ ಉನ್ನತ ವಿದ್ಯಾಸಂಸ್ಥೆಗಳಾದ ಐ.ಐ.ಟಿ, ಎನ್.ಐ.ಐ.ಟಿಗಳಲ್ಲಿ ಪ್ರವೇಶಾತಿ ಪಡೆಯಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿದ್ದು, ಅದು ನನಸಾಗಬೇಕಾದಲ್ಲಿ ಪರಿಶ್ರಮ ಪಡಬೇಕಾಗಿದೆ ಎಂದು ಖ್ಯಾತ ಐಐಟಿ ತರಬೇತುದಾರ ಕಮ್ಮಾರ ಪವನ್ ಕುಮಾರ್ ಆಚಾರ್ಯ ಅವರು ಹೇಳಿದರು.
‘ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ನಡೆದ ಓರಿಯಂಟೆಶನ್’ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಐ.ಐ.ಟಿ ಪ್ರವೇಶಾತಿ ವಿವರಗಳನ್ನು ನೀಡಿದ ಅವರು ಪ್ರವೇಶ ಪರೀಕ್ಷಾ ಸಿದ್ಧತೆ, ಐ.ಐ.ಟಿ ಪದವೀಧರರಿಗಿರುವ ಅವಕಾಶಗಳ ಬಗೆಗೆ ವಿಸ್ತತ ವಿವರಗಳನ್ನೊದಗಿಸಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ಜೈನ್, ಕಾರ್ಯದರ್ಶಿ ರಶ್ಮಿತಾ, ಪ್ರಾಂಶುಪಾಲ ಸುರೇಶ್ ಬಾಬು, ಸಂಯೋಜಕ ದಯಾನಂದ ಅವರು ವೇದಿಕೆಯಲ್ಲಿ ಉಪಸ್ಧಿತರಿದ್ದರು.
ಜೀವಶಾಸ್ತ್ರ, ಉಪನ್ಯಾಸಕ ಲೋಹಿತ್ ಸ್ವಾಗತಿಸಿ, ಆಂಗ್ಲಭಾಷ ಉಪನ್ಯಾಸಕಿ ವರ್ಷಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story