ದ್ವಿತೀಯ ಏಕದಿನ : ಭಾರತದ ಗೆಲುವಿಗೆ 237 ರನ್ಗಳ ಸವಾಲು
ಮಿಂಚಿದ ಜಸ್ಪ್ರೀತ್ ಬುಮ್ರಾ 43ಕ್ಕೆ 4 ವಿಕೆಟ್
ಪಲ್ಲೆಕೆಲೆ, ಆ.24: ಶ್ರೀಲಂಕಾ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂದು ಭಾರತ ಗೆಲುವಿಗೆ 237 ರನ್ಗಳ ಸವಾಲು ಪಡೆದಿದೆ.
ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿದ್ದರು.
ಶ್ರೀಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 236 ರನ್ ಗಳಿಸಿದೆ.
ಶೀಲಂಕಾದ ಸಿರಿರ್ವರ್ಧನ 58 ರನ್ ಮತ್ತು ಚಾಮರಾ ಕೆಪುಗೆಡರಾ 40 ರನ್ ಕೊಡುಗೆಯ ನೆರವಿನಲ್ಲಿ ಶ್ರೀಲಂಕಾ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಲಂಕಾದ ವಿಕೆಟ್ ಕೀಪರ್ ದಿಕ್ವೆಲ್ಲಾ (31), ಗುಣತಿಲಕ (19), ಕುಶಾಲ್ ಮೆಂಡಿಸ್(19) ಎರಡಂಕೆಯ ಸ್ಕೋರ್ ಜಮೆ ಮಾಡಿದರು.
ಭಾರತದ ಜಸ್ಪ್ರೀತ್ ಬುಮ್ರಾ 43ಕ್ಕೆ 4, ಚಾಹಲ್ 43ಕ್ಕೆ 2, ಹಾರ್ದಿಕ್ ಪಾಂಡ್ಯ 24ಕ್ಕೆ 1 ಮತ್ತು ಅಕ್ಷರ್ ಪಟೇಲ್ 30ಕ್ಕೆ 1 ವಿಕೆಟ್ ಪಡೆದರು.
Next Story