ಎಸ್ಕೆಎಸೆಸೆಫ್ನಿಂದ ‘ವಿಖಾಯ’ ಸಂಗಮ
ಮಂಗಳೂರು, ಆ. 24: ಎಸ್ಕೆಎಸೆಸೆಫ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ‘ವಿಖಾಯ’ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಅಮೆಮಾರ್ನ ಬದ್ರಿಯಾ ಮದ್ರಸದಲ್ಲಿ ನಡೆಯಿತು.
ಬದ್ರಿಯಾ ಮಸೀದಿ ಅಧ್ಯಕ್ಷ ಹಾಜಿ ಉಮರಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಮಸೀದಿಯ ಖತೀಬ್ ಅಬೂಸ್ವಾಲಿಹ್ ಸಭೆಯನ್ನು ಉದ್ಘಾಟಿಸಿದರು. ಬಂಟ್ವಾಳ ಸಂಚಾರಿ ಠಾಣೆಯ ಸಬ್ಇನ್ಸ್ಪೆಕ್ಟರ್ ಸಿ.ಚಂದ್ರಶೇಖರಯ್ಯ ಟ್ರಾಫಿಕ್ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಸಂಚಾರಿ ಹೋಂ ಕೇರ್ ಕುರಿತು ಯೆನೆಪೋಯ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಪ್ರಚೀತ್ ಅವರು ಮಯ್ಯಿತ್ ಪರಿಪಾಲನೆ ಬಗ್ಗೆ ಮಾಹಿತಿ ನೀಡಿದರು. ವಿಖಾಯ ಮೆಡಿಟೇಶನ್ ಕುರಿತು ಮೆಹ್ಬೂಬ್ ಫೈಝಿ ಮಲಪ್ಪುರಂ ವಿಷಯ ಮಂಡಿಸಿದರು.
ಸಭೆಯಲ್ಲಿ ಎಸ್ಕೆಎಸೆಸೆಫ್ ಜಿಲ್ಲಾ ಉಪಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ, ಶರೀಫ್ ಮೂಸ ಕುದುಪದವು, ಕಾರ್ಯದರ್ಶಿ ಸಿದ್ದೀಕ್ ಬಂಟ್ವಾಳ, ಎಸ್ಕೆಎಸೆಸೆಫ್ ಕುವೈತ್ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಇಕ್ಬಾಲ್ ಫೈಝಿ, ಫರಂಗಿಪೇಟೆ ಮಸೀದಿಯ ಖತೀಬ್ ಅಬ್ಬಾಸ್ ದಾರಿಮಿ, ಮಸೀದಿಯ ಉಪಾಧ್ಯಕ್ಷ ಎಫ್.ಎ.ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಎಸ್ಕೆಎಸೆಸೆಫ್ ಮಂಗಳೂರು ವಲಯ ಅಧ್ಯಕ್ಷ ಇಬ್ರಾಹೀಂ ಕೊಣಾಜೆ, ಬೆಳ್ತಂಗಡಿ ವಲಯ ಅಧ್ಯಕ್ಷ ಹನೀಫ್ ದೂಮಲಿಕೆ, ಮುಹಮ್ಮದ್ ಮುಸ್ಲಿಯಾರ್ ಕಡಬ, ಝಕರಿಯಯ ಮರ್ದಾಳ, ಅಶ್ರಫ್, ಆರಿಫ್ ಬಡಕಬೈಲ್, ಬಶೀರ್ ಮಜಲ್, ಮದ್ರಸ ಮುಖ್ಯೋಪಾಧ್ಯಾಯ ಮುಹಿಯುದ್ದೀನ್ ಅಲ್ ಹಸನಿ, ಅಬ್ದುಲ್ಲತೀಫ್ ದಾರಿಮಿ, ಮಕ್ಬೂಲ್ ಅಮ್ಮೆಮಾರ್, ಬದ್ರುದ್ದೀನ್, ಮುಕ್ತಾರ್, ಜಮಾಲುದ್ದೀನ್, ಇಬ್ರಾಹೀಂ, ರಿಯಾಝ್ ಫೈಝಿ, ಯಾಸಿರ್ ಅರಾಫತ್ ಕೌಸರಿ, ನಝೀರ್ ಅಝ್ಹರಿ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುರ್ರಶೀದ್ ರಹ್ಮಾನ್ ಸ್ವಾಗತಿಸಿದರು. ಜಿಲ್ಲಾ ವಿಖಾಯದ ಅಧ್ಯಕ್ಷ ಅಶ್ರಫ್ ಕಡಬ ಕಾರ್ಯಕ್ರಮ ನಿರೂಪಿಸಿದರು.