ಅನಿಶ್ಚಿತತೆಯಲ್ಲಿ ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ
ಹವಾಮಾನ ವೈಪರೀತ್ಯ ಕಾರಣ
ಅರೆಶಿರೂರು(ಕೊಲ್ಲೂರು), ಆ.27: ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮಶಿಂೆ ಅವರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಭೇಟಿ ಇನ್ನೂ ಅನಿಶ್ಚಿತತೆಯಲ್ಲಿದೆ. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣವಾಗಿದೆ.
ಭಾರತ ಪ್ರವಾಸದಲ್ಲಿರುವ ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮಶಿಂೆ ಇಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ದರ್ಶನಕ್ಕಾಗಿ ಕೊಲ್ಲೂರಿಗೂ ಆಗಮಿಸಬೇಕಿತ್ತು. ಆದರೆ ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಪ್ರಸಕ್ತವಾಗಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರ ಕೊಲ್ಲೂರು ಭೇಟಿ ಇನ್ನೂ ಅನಿಶ್ಚತತೆಯಲ್ಲಿದೆ. ಈ ನಡುವೆ ಅರೆ ಶಿರೂರಿನ ಹೆಲಿಪ್ಯಾಡ್ನಲ್ಲಿ ಶ್ರೀಲಂಕಾದ ಅಧಿಕಾರಿಗಳ ತಂಡ ಉಡುಪಿ ಜಿಲ್ಲಾಡಳಿತವು ಲಂಕಾ ಪ್ರಧಾನಿಯ ಆಗಮನಕ್ಕೆ ಅಗತ್ಯವಿರುವ ಸಿದ್ಧತೆಯೊಂದಿಗೆ ಸಜ್ಜಾಗಿ ನಿಂತಿದೆ. ಹೆಲಿಪ್ಯಾಡಿನಲ್ಲಿ ನಿಂತಿರುವ ಮಳೆ ನೀರನ್ನು ಜಿಲ್ಲಾಡಳಿತವು ಗೋಣಿ ತಾಟು ಬಳಸಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಆದರೆ ಮಳೆ ಹಾಗೂ ಮೋಡ ಕವಿದ ವಾತಾವರಣ ಇನ್ನೂ ತಿಳಿಯಾಗಿಲ್ಲ.
ಅರೆ ಶಿರೂರಿನಲ್ಲಿ ವಾತಾವರಣ ತಿಳಿಗೊಂಡ ಬಳಿಕವಷ್ಟೇ ಕೊಲ್ಲೂರಿಗೆ ಆಗಮಿಸಲು ಬೆಂಗಳೂರಿನಲ್ಲಿ ಸಿದ್ಧವಾಗಿ ನಿಂತಿರುವ ಶ್ರೀಲಂಕಾ ಪ್ರಧಾನಿ ಹಾಗೂ ತಂಡಕ್ಕೆ ಗ್ರೀನ್ ಸಿಗಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಸಾಧ್ಯತೆ ತೀರಾ ಕಡಿಮೆ ಎಂದು ಶ್ರೀಲಂಕಾದ ಭದ್ರತಾ ಸಿಬ್ಬಂದಿ ‘ವಾರ್ತಾಭಾರತಿ’ ವೆಬ್ಸೆಟ್ಗೆ ತಿಳಿಸಿದ್ದಾರೆ.
ನಿಗದಿತ ಕಾರ್ಯಕ್ರಮದ ಪ್ರಕಾರ ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮಶಿಂೆ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಚಂಡಿಕಾ ಯಾಗದಲ್ಲಿ ಪೂರ್ಣಾಹುತಿ ನೀಡಲಿದ್ದಾರೆ.