Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ28 Aug 2017 12:14 AM IST
share
ಓ ಮೆಣಸೇ..

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ -ಸಿ.ಎಂ.ಇಬ್ರಾಹೀಂ, ಮೇಲ್ಮನೆ ಕಾಂಗ್ರೆಸ್ ಅಭ್ಯರ್ಥಿ
ಬಾಂಡ್ ಪೇಪರ್‌ನಲ್ಲಿ ಹಾಗೆಂದು ಸಹಿ ಹಾಕಿದ ಬಳಿಕ ಸಿಕ್ಕಿದ ಹುದ್ದೆ ಇದು.

---------------------
ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದ್ದು ಅಂದಿನ ಮುಖ್ಯಮಂತ್ರಿ ಸದಾನಂದಗೌಡ -ವಿ.ಎಸ್.ಉಗ್ರಪ್ಪ, ವಿ.ಪ.ಸದಸ್ಯ
 ಆಗ ಸದಾನಂದ ಗೌಡರು ಯಡಿಯೂರಪ್ಪರ ವಿರೋಧ ಪಕ್ಷದಲ್ಲಿದ್ದರು.
---------------------
  ನಮ್ಮ ಆದ್ಯತೆ ಶಾಂತಿ, ಯುದ್ಧವಲ್ಲ -ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಚೀನಾ ವಿಷಯದಲ್ಲಿ ಮಾತ್ರ, ಅಲ್ಲವೇ?
---------------------
  ರಾಜ್ಯ ರಾಜಕೀಯ ಸ್ಥಿತಿಯ ನಾಡಿಮಿಡಿತ ನನಗೆ ಚೆನ್ನಾಗಿ ಗೊತ್ತು - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ಯಾವುದಾದರೂ ಮಠದ ಅಂಗದಲ್ಲಿ ನಾಡಿ ಶಾಸ್ತ್ರ ನೋಡುತ್ತಾ ಉಳಿದ ಬದುಕನ್ನು ಕಳೆಯಬಾರದೇ?
---------------------
  ಮುಂದಿನ ದಿನಗಳಲ್ಲಿ ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರಕಾರ ಎಲ್ಲ ಬೆಂಬಲವನ್ನು ನೀಡಲಿದೆ -ನರೇಂದ್ರ ಮೋದಿ, ಪ್ರಧಾನಿ
 ಬಹುಶಃ ಎಡಿಎಂಕೆ ನಿಮಗೆ ನೀಡುವ ಬೆಂಬಲ ಅವಲಂಬಿಸಿ ನಿಮ್ಮ ಬೆಂಬಲ.

---------------------
  ಸಿದ್ದರಾಮಯ್ಯ ಅವರದ್ದು ಹಗರಣ ರಹಿತ ಸರಕಾರ -ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
  ಮಕ್ಕಳು ಹೊಸ ಹಗರಣದಲ್ಲೇನಾದರೂ ಸಿಕ್ಕಿ ಹಾಕಿಕೊಂಡಿದ್ದಾರೆಯೇ?
---------------------
  ಗೋಮಾಂಸ ತಿನ್ನುವುದು ನಮ್ಮ ಹಕ್ಕು ಎನ್ನುವವರು ಮೊದಲು ಸಂವಿಧಾನ ಓದಬೇಕು -ವಜೂಭಾಯಿ ವಾಲಾ, ರಾಜ್ಯಪಾಲ
  ಯಾಕೆ, ಅದರಲ್ಲಿ ನಾವು ತಿನ್ನುವ ಆಹಾರದ ಮೆನು ವಿವರಗಳಿವೆಯೇ?
---------------------
  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಐಪಿ ಸಂಸ್ಕೃತಿಗೆ ಜಾಗವಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಏನಿದ್ದರೂ, ಅತ್ಯಾಚಾರಿ ಸಂಸ್ಕೃತಿಗಷ್ಟೇ ಜಾಗ.

---------------------
  ಬಿಜೆಪಿಯವರು ‘ಇಂದಿರಾ ಕ್ಯಾಂಟೀನ್’ ಅಹಾರದಲ್ಲಿ ಏನಾದರೂ ಮಿಶ್ರಣ ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  ಅದಕ್ಕೆ ಮೊದಲೇ ನಿರೀಕ್ಷಣಾ ಜಾಮೀನು.
---------------------
  ಬಹುತೇಕ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯ ನಮಗೇ ತಿಳಿದಿರುವುದಿಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
 ತಿಳಿದಿದ್ದರೆ ನೀವು ಜನರ ನಡುವೆ ಇರುತ್ತಲೂ ಇರಲಿಲ್ಲ.

---------------------
  ನಾನೀಗ ಆರೋಪ ಮುಕ್ತ , ಧೈರ್ಯದಿಂದ ಟಿಕೆಟ್ ಕೇಳ್ತೀನಿ -ಹರತಾಳು ಹಾಲಪ್ಪ, ಮಾಜಿ ಸಚಿವ
 ಹಾಳಪ್ಪ ಮತ್ತೆ ಹಾಲಪ್ಪ ಆಗುವುದು ಕಷ್ಟ.

---------------------
  ಜನರ ಬಳಿ ಹೋಗಿ ಅವರ ನೋವನ್ನು ಆಲಿಸುವುದೇ ನನ್ನ ಸದ್ಯದ ಗುರಿ - ಶಂಕರಸಿನ್ಹಾ ವೇಲಾ, ಗುಜರಾತ್ ಮಾಜಿ ಮುಖ್ಯಮಂತ್ರಿ
ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಾದ ನಿಮ್ಮ ನೋವನ್ನು ಆಲಿಸುವವರೇ ಇಲ್ಲವಲ್ಲ.

---------------------
  ಸಿ.ಎಂ.ಸಿದ್ದರಾಮಯ್ಯ ಎಷ್ಟು ಢೋಂಗಿ ಎಂಬುದು ನನಗೆ ಗೊತ್ತು - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಎಷ್ಟಿದ್ದರೂ ನಿಮ್ಮ ತಂದೆಯ ಗರಡಿಯಲ್ಲಿ ಪಳಗಿದವರಲ್ಲವೇ?
---------------------
  ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ಅದು ಅಮೆರಿಕದ ಅನುದಾನದಿಂದ ಸೃಷ್ಟಿಯಾದ ಸ್ವರ್ಗ.

---------------------
  ಸಿದ್ದರಾಮಯ್ಯ ಮುಖ್ಯಮಂತ್ರಿಯಲ್ಲ ‘ಮುಕ್ಕುವ ಮಂತ್ರಿ’ -ನಳಿನ್ ಕುಮಾರ್ ಕಟೀಲು, ಸಂಸದ
 ಮಣ್ಣು ಮುಕ್ಕುವ ಭಯದಿಂದ ಬಿಜೆಪಿ ನಾಯಕರು ನೀಡುವ ಹೇಳಿಕೆಗಳು.

---------------------
ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ಐಟಿ ದಾಳಿ ಮಾಡಿದಾಗ ಏನೂ ಸಿಕ್ಕಿಲ್ಲ -ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ದಾಳಿ ಮಾಡಿದವರ ಜೊತೆ ನೀವೂ ಮಾರುವೇಷದಲ್ಲಿ ಹೋಗಿದ್ದಿರೇ?
---------------------
  ನಾನು ಒಬ್ಬ ಅಪ್ಪಟ ಸಂಶೋಧಕ - ಡಾ.ಚಿದಾನಂದ ಮೂರ್ತಿ, ಸಂಶೋಧಕ
 ವಿದ್ವಾಂಸರಾಗಲು ಹೊರಟು ವಿಧ್ವಂಸ ಮಾಡಿದವರೆಂಬ ಹೆಗ್ಗಳಿಕೆ ನಿಮ್ಮದು.

---------------------
  ರಾಜ್ಯದ ಬದಲಾವಣೆಯ ಪರ್ವ ಕರಾವಳಿಯಿಂದಲೇ ಆರಂಭವಾಗಲಿ -ಪ್ರತಾಪ್ ಸಿಂಹ, ಸಂಸದ
ಬೆಂಕಿ ಹಚ್ಚಿ ಬದಲಾವಣೆ ಮಾಡಲು ಹೊರಟರೆ, ಆ ಬೆಂಕಿಗೆ ನೀವೇ ಬಲಿಯಾಗುತ್ತೀರಿ.

---------------------
ಸಿ ಫೋರ್ ಸಮೀಕ್ಷೆ ಕಾಂಗ್ರೆಸ್ ಪ್ರಾಯೋಜಿತ ನಾಟಕ ಮಂಡಳಿ -ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ
 ಸ್ವತಃ ಅಮಿತ್ ಶಾ ಅವರೇ ಸಮೀಕ್ಷೆ ನಡೆಸಿದಾಗ, ಬಿಜೆಪಿಯ ಸ್ಥಾನಗಳು ಇನ್ನಷ್ಟು ಕೆಳಮಟ್ಟಕ್ಕಿಳಿಯಿತಂತೆ.

---------------------
  ಖಾಸಗಿತನದ ಹಕ್ಕು ಮೂಲಭೂತ ಹಕ್ಕಾದರೂ ಅದು ಪರಿಪೂರ್ಣವಲ್ಲ -ಅರುಣ್ ಜೇಟ್ಲಿ, ಕೇಂದ್ರ ಸಚಿವ
 ಮೊದಲು ಸುಪ್ರೀಂಕೋರ್ಟ್‌ನ ನ್ಯಾಯ ನೀಡುವ ಹಕ್ಕು ಎಷ್ಟು ಪರಿಪೂರ್ಣ ಎನ್ನುವುದನ್ನು ಹೇಳಿ.

---------------------
  ಬಿಎಸ್‌ವೈ, ಶೆಟ್ಟರ್ ಲಿಂಗಾಯತರೇ ಅಲ್ಲ, ಮನುವಾದಿಗಳು - ಬಸವರಾಜ ರಾಯರೆಡ್ಡಿ, ಸಚಿವ
ಅವಕಾಶವಾದಿಗಳು ಎಂದರೆ ಚೆನ್ನ.

---------------------
  ದೇವರ ಮನಸ್ಸು ಮತ್ತು ಮಗುವಿನ ಮುಗ್ಧತೆ ಇದ್ದರೆ ಸಮಾಜದಲ್ಲಿ ಎಂದಿಗೂ ಸಂಘರ್ಷ ಉಂಟಾಗುವುದಿಲ್ಲ -ರಮಾನಾಥ ರೈ, ಸಚಿವ
ಹಾಗಾದರೆ ಹೆಬ್ಬೆಟ್ಟು ಚೀಪುತ್ತಾ, ಅಂಬೆಗಾಲಿಕ್ಕಿಕೊಂಡು ಪ್ರಭಾಕರ ಭಟ್ಟರ ಮುಂದೆ ಓಡಾಡಿ. ಕಲ್ಲಡ್ಕದಲ್ಲಿ ಶಾಂತಿ ನೆಲೆಸಲಿ 

share
ಪಿ.ಎ.ರೈ
ಪಿ.ಎ.ರೈ
Next Story
X