ಮೂಡುಬಿದಿರೆಯಲ್ಲಿ 'ಸಮೃದ್ಧಿ' ಯೂತ್ ಕ್ಲಬ್ ಉದ್ಘಾಟನೆ
ಮೂಡುಬಿದಿರೆ, ಆ. 29: ಮೂಡುಬಿದಿರೆಯ ಪೊಣ್ಣೆಚ್ಚಾರಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 'ಸಮೃದ್ಧಿ' ಯೂತ್ ಕ್ಲಬ್ಬನ್ನು ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉದ್ಘಾಟಿಸಿದರು.
ಸ್ಥಾಪಕ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ರೋಟರಿ ಕ್ಲಬ್ನ ಪುರಂದರ ದೇವಾಡಿಗ ಹಾಗೂ ಸಿಐಟಿಯು ಮುಖಂಡ ಯಾದವ ಶೆಟ್ಟಿ, ಲಕ್ಷ್ಮಣ್ ಅವರು ನೂನ ಕ್ಲಬ್ಗೆ ಶುಭ ಹಾರೈಸಿದರು. ಉಪಾಧ್ಯಕ್ಷ ಸುಜಿತ್ ಎಂ.ಎನ್, ಖಜಾಂಜಿ ಶ್ರವಣ್ ಉಪಸ್ಥಿತರಿದ್ದರು.
ಯೂತ್ ಕ್ಲಬ್ನ ವೀರೇಂದ್ರ ಸ್ವಾಗತಿಸಿದರು. ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು. ಸುಖೇಶ್ ಮುನಿರಾಜ ರೆಂಜಾಳ ಅವರನ್ನು ಪರಿಚಯಿಸಿದರು. ಸುನಿಲ್ ಕುಮಾರ್ ಹಾಗೂ ಕಾರ್ತಿಕ್ ಪದಾಧಿಕಾರಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಹರೀಶ್ ಎಂ.ಕೆ ವಂದಿಸಿದರು. ಸಮುದಾಯದ 30 ಯುವಕರನ್ನು ಈ ಸಮೃದ್ಧಿ ಯೂತ್ ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು.
Next Story