Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುರ್ಮೀತ್ ಸಿಂಗ್ ನ ಈ ' ಪ್ರೇಮಿ' ಶಿಷ್ಯ...

ಗುರ್ಮೀತ್ ಸಿಂಗ್ ನ ಈ ' ಪ್ರೇಮಿ' ಶಿಷ್ಯ ಎಚ್ಚರವಾಗಿ ನೋಡುವಾಗ ಈತನ ವೃಷಣಗಳೇ ಮಾಯವಾಗಿದ್ದವು!

ಸಂತಾನೋತ್ಪತ್ತಿ ಸಾಮರ್ಥ್ಯ ಹರಣ ಮಾಡುವ ಬಾಬಾ ಮಾಫಿಯಾದ ಬಲಿಪಶು

ವಾರ್ತಾಭಾರತಿವಾರ್ತಾಭಾರತಿ29 Aug 2017 9:52 PM IST
share
ಗುರ್ಮೀತ್ ಸಿಂಗ್ ನ ಈ  ಪ್ರೇಮಿ ಶಿಷ್ಯ ಎಚ್ಚರವಾಗಿ ನೋಡುವಾಗ ಈತನ ವೃಷಣಗಳೇ ಮಾಯವಾಗಿದ್ದವು!

ಹೊಸದಿಲ್ಲಿ, ಆ.29: ಮೆಡಿಕಲ್ ಕಂಪೌಂಡರ್ ಒಬ್ಬ ನೀಡಿದ ಪಾನೀಯ ಕುಡಿದು ಪ್ರಜ್ಞೆ ತಪ್ಪಿ ಬಿದ್ದ ಹಂಸರಾಜ್ ಚೌಹಾಣ್ ರನ್ನು ಡೇರಾ ಸಚ್ಚಾ ಸೌಧ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಗೆ ಸಾಗಿಸಲಾಗಿತ್ತು. 2 ದಿನಗಳ ನಂತರ ಎಚ್ಚರಗೊಂಡ ಚೌಹಾಣ್ ಒಂದು ಕ್ಷಣ ಹೌಹಾರಿದ್ದರು. ಕಾರಣ ಅವರ ವೃಷಣಗಳೇ ಮಾಯವಾಗಿದ್ದವು!.

ಇದು ನಡೆದದ್ದು 2000ದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ. ಆಗ ಚೌಹಾಣ್ ರಿಗೆ 19 ವರ್ಷ ವಯಸ್ಸಾಗಿತ್ತು.

“ಬಾಬಾ ಗುರ್ಮೀತ್ ಸಿಂಗ್ ಆಜ್ಞೆಯ ಮೇರೆಗೆ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ನಾನೂ ಒಬ್ಬ. ಬಾಬಾನ ಅಣತಿಯಂತೆ ಕೆಲಸ ಮಾಡುತ್ತಿದ್ದ ವೈದ್ಯರು ನನ್ನ ವೃಷಣಗಳನ್ನೇ ತೆಗೆದುಹಾಕಿದರು. ಆನಂತರ ನಾನು ಹಲವಾರು ಬಾರಿ ಹಾರ್ಮೋನು ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದರಿಂದಾಗಿ ನನ್ನ ಮುಖದ ಮೇಲಿನ ಕೂದಲುಗಳು ಉದುರಿ, ಹೆಣ್ಣಿನ ಲಕ್ಷಣಗಳು ಕಾಣಿಸಿಕೊಂಡವು” ಎನ್ನುತ್ತಾರೆ ಒಂದು ಕಾಲದಲ್ಲಿ ಬಾಬಾನ ಭಕ್ತನಾಗಿದ್ದ ಹಂಸರಾಜ್.

ಈ ಬಗ್ಗೆ ‘ದ ಕ್ವಿಂಟ್’ ಸ್ವತಃ ಚೌಹಾಣ್ ಅವರಿಂದಲೇ ಮಾಹಿತಿ ಕಲೆ ಹಾಕಿದ್ದು, ವೈದ್ಯಕೀಯ ದಾಖಲೆಗಳು ಸಹ ಅವರಿಗೆ ವೃಷಣಗಳಿಲ್ಲದಿರುವುದನ್ನು ಸಾಬೀತುಪಡಿಸಿದೆ. ಈ ಬಗ್ಗೆ ಗುರ್ಮೀತ್ ನ ದುಷ್ಕೃತ್ಯಗಳನ್ನು ಹೊರಹಾಕಲು ಚೌಹಾಣ್ ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಮೂವರು ವೈದ್ಯರು ಸಿದ್ಧಪಡಿಸಿದ ವರದಿ ಈ ಆಘಾತಕಾರಿ ವಿಷಯ ಸತ್ಯ ಎನ್ನುವುದನ್ನು ನಿರೂಪಿಸಿದೆ. 2014ರ ಡಿಸೆಂಬರ್ 23ರಂದು ನ್ಯಾಯಾಲಯವು ಚೌಹಾಣ್ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದಿತ್ತು.

1996ರ ಜನವರಿ 15ರಂದು ಹಂಸರಾಜ್ ಡೇರಾ ಸಚ್ಚಾ ಸೌಧಾ ಸೇರಿದ್ದರು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. “ನನಗೆ ಬರ್ಫಿಯ ತುಂಡೊಂದನ್ನು ನೀಡಲಾಗಿತ್ತು. ಬಾಬಾ ಆಶ್ರಮದಲ್ಲಿ ನಡೆಯುತ್ತಿದ್ದ ಸಾಮಾನ್ಯ ದೀಕ್ಷಾ ವಿಧಿ ಅದಾಗಿತ್ತು. ಧ್ವನಿವರ್ಧಕಗಳನ್ನು ಕಟ್ಟುವಂತಹ ಕೆಲಸಗಳನ್ನು ನನಗೆ ನೀಡಲಾಗಿತ್ತು. ತದನಂತರ ಗಿಟಾರ್ ನುಡಿಸುವುದು ಹಾಗು ಭಜನೆಗಳನ್ನು ಹಾಡುತ್ತಿದ್ದೆ. ಸಿರ್ಸಾ ಆಶ್ರಮದಲ್ಲಿರುವ ಬ್ರಹ್ಮಚಾರಿಗಳು ಮದುವೆಯಾಗುವುದನ್ನು ಹಾಗೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಬೇಕು ಎಂದು 2000ದಲ್ಲಿ ಬಾಬಾ ನಿರ್ಧರಿಸಿದ. ಡಾ.ಎಂ.ಪಿ. ಸಿಂಗ್, ಡಾ.ಪಂಕಜ್ ಗರ್ಗ್ ಗೆ ಭಕ್ತರ ಸಂತಾನಹರಣ ನಡೆಸುವ ಕೆಲಸ ವಹಿಸಲಾಯಿತು” ಎನ್ನುತ್ತಾರೆ ಹಂಸರಾಜ್ ಚೌಹಾಣ್,

ಆಶ್ರಮದಲ್ಲಿರುವವವರು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡದಂತೆ, ದಿನಪತ್ರಿಕೆಗಳನ್ನು ಓದದಂತೆ, ಕೆಲ ಕ್ಷಣಗಳ ಕಾಲ ಸಂಬಂಧಿಕರೊಡನೆ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿತ್ತು ಎನ್ನುತ್ತಾರೆ ಅವರು.

ಗುರ್ಮೀತ್ ಮಗಳು ಎಂದು ಗುರುತಿಸಲ್ಪಟ್ಟಿರುವ ಹನಿಪ್ರೀತ್ ಇಂಸಾನ್ ಹಾಗೂ ಬಾಬನ ನಡುವಿನ ಸಂಬಂಧ ‘ಪ್ರಶ್ನಾರ್ಹ’ ಎಂದು ಹೆಸರು ಹೇಳಿಲಿಚ್ಛಿಸದ ಡೇರಾ ಸಚ್ಚಾ ಸೌಧಾದ ಭಕ್ತರೊಬ್ಬರು ತಿಳಿಸಿದ್ದಾರೆ ಎಂದು ‘ದ ಕ್ವಿಂಟ್’ ವರದಿ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X