ಜುಗಾರಿ ಪ್ರಕರಣ: 17 ಮಂದಿ ಬಂಧನ
ಉಡುಪಿ, ಆ.29: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಸ್ಪೀಟ್ ಜುಗಾರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗ್ರಾಮದ ಮುಕ್ಕಾಣಿ ಶಾಲೆಯ ಬಳಿ ಆ.28ರಂದು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ ಶಿವಪುರ ಗ್ರಾಮದ ರಾಘವ(58), ಹರ್ಷ (39), ಬಾಲಕೃಷ್ಣ (24), ವಿಘ್ನೇಶ್(23), ನರಸಿಂಹ(38), ಮಂಜುನಾಥ (19), ಮಹೇಶ್(23), ಜಗದೀಶ(29) ಎಂಬವರನ್ನು ಪೊಲೀಸರು ಬಂಧಿಸಿ 9,150ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಜಂತ್ರ ಸರಕಾರಿ ಹಾಡಿಯಲ್ಲಿ ಆ.29ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಪೆರ್ವಾಜೆ ಯ ಸಂತೋಷ(28), ದುರ್ಗಾದ ಪ್ರಕಾಶ್(25), ಕರಿಯಕಲ್ಲುವಿನ ಸತೀಶ್ ಶೆಟ್ಟಿ(49), ಸುಂದರ ಸಾಲಿಯಾನ(64) ಎಂಬವರನ್ನು ಪೊಲೀಸರು ಬಂಧಿಸಿ 7800ರೂ. ನಗದು ವಶಪಡಿಸಿಕೊಂಡಿದ್ದಾರೆ.
ಮಟ್ಕಾ ಜುಗಾರಿ: ಅ.28ರಂದು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಬೆಟ್ಟು ಕಡಿಯಾಳಿ ನಿಲ್ದಾಣದಲ್ಲಿ ಚೇರ್ಕಾಡಿಯ ದಿವಾಕರ ಪೂಜಾರಿ(34), ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಲಕ್ಷ್ಮೀ ಬಾರ್ ಬಳಿ ಉಪ್ಪೂರು ಕುದ್ರುಬೆಟ್ಟುವಿನ ಕಮಾಲಾಕ್ಷ ಶೇರಿ ಗಾರ್(52) ಮತ್ತು ಅಮ್ಮುಂಜೆ ಬಸ್ ನಿಲ್ದಾಣದ ಬಳಿ ಕೊಳಲಗಿರಿಯ ಮೋಹನ(50) ಮತ್ತು ಆ.29ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಿಳಿಯಾರು ಗ್ರಾಮದ ಗುಳ್ಳಾಡಿ ಸಮೀಪ ಬೇಳೂರು ಗುಳ್ಳಾಡಿಯ ರಾಘ ವೇಂದ್ರ(39), ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಛೇರಿ ಬಳಿ ದೊಡ್ಡಣಗುಡ್ಡೆಯ ದಿನೇಶ್ ಪೂಜಾರಿ(30) ಎಂಬವರನ್ನು ಮಟ್ಕಾ ಜುಗಾರಿಗೆ ಸಂಬಂಧಿಸಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.