Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಾಗೂರು ಒಡೆಯರಮಠದಲ್ಲಿ ಶತಮಾನದ...

ನಾಗೂರು ಒಡೆಯರಮಠದಲ್ಲಿ ಶತಮಾನದ ಸ್ಮೃತಿಹಬ್ಬ; ಶತಾಯುಷಿ ಡಾ.ಸದಾನಂದರಿಂದ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ29 Aug 2017 10:22 PM IST
share
ನಾಗೂರು ಒಡೆಯರಮಠದಲ್ಲಿ ಶತಮಾನದ ಸ್ಮೃತಿಹಬ್ಬ; ಶತಾಯುಷಿ ಡಾ.ಸದಾನಂದರಿಂದ ಉದ್ಘಾಟನೆ

ಭಟ್ಕಳ, ಆ. 29: ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಬವುಳಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ನಡೆದ ಉಳ್ಳೂರು ಮೂಕಾಂಬಿಕೆ ಅಮ್ಮ (ಮೂಕಜ್ಜಿ), ಮೊಗೇರಿ ಗೋಪಾಕೃಷ್ಣ ಅಡಿಗ, ಬಿ. ಎಚ್. ಶ್ರೀಧರ ಅವರ ಶತಮಾನದ ಸ್ಮೃತಿಹಬ್ಬವನ್ನು ಶತಾಯುಷಿ ವೈದ್ಯ ಡಾ. ಸದಾನಂದ ಹೊಸ್ಕೋಟೆ ಉದ್ಘಾಟಿಸಿದರು.

ನಂತರ ನಡೆದ ವಿವಿಧ ಗೋಷ್ಟಿಗಳಲ್ಲಿ ಮಾತನಾಡಿದ ಕವಿ, ಲೇಖಕ ಡಾ. ವಸಂತಕುಮಾರ ಪೆರ್ಲ ನವೋದಯ ಕಾಲದಲ್ಲಿ ಕನ್ನಡ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಒಡೆದು ಕಟ್ಟುವ ಪ್ರಕ್ರಿಯೆಯ ಮೂಲಕ ಅದನ್ನು ನವ್ಯದತ್ತ ಹೊರಳಿಸಿದರು. ರೂಪಕ, ಪ್ರತಿಮೆಗಳನ್ನು ತಮ್ಮ ಭಾಷೆಯಾಗಿಸಿಕೊಂಡು ಕನ್ನಡದಲ್ಲಿ ಹೊಸ ಪರಂಪರೆಯನ್ನು ಹುಟ್ಟುಹಾಕಿ ಬೆಳೆಸುವ ಮೂಲಕ ನವಮಾರ್ಗ ಪ್ರವರ್ತಕರೆನಿಸಿದರು ಎಂದು ಹೇಳಿದರು.

ಅವರು ಶತಮಾನದ ಸ್ಮತ ಹಬ್ಬದಲ್ಲಿ ಅಡಿಗತ್ವದ ನಡೆ-ನುಡಿ ಕುರಿತು ಮಾತನಾಡುತ್ತಿದ್ದರು. ಅಡಿಗರು ತಾವು ಬರೆದ ಕೇವಲ 260 ಕವನಗಳ ಮೂಲಕ ಸಮಕಾಲೀನ ಕವಿಗಳನ್ನು ಗಾಢವಾಗಿ ಪ್ರಭಾವಿಸಿದರು. ಮುಂದಿನ ಒಂದು ತಲೆಮಾರಿನ ಕವಿಗಳು ಅಡಿಗತ್ವದ ಪ್ರಭಾವದಿಂದ ಹೊರಬರಲಾಗಲಿಲ್ಲ. ಅವರ ಕಾವ್ಯದ ವಿಶ್ಲೇಷಣೆ, ವಿಮರ್ಶೆ ನಡೆದಷ್ಟು ಇನ್ನಾರದೂ ಆಗಿಲ್ಲ. ಅವರ ಕಾವ್ಯೇತರ ಕೃತಿಗಳೂ ಮಹತ್ವ ಪಡೆದಿವೆ. ಅವರ ಕೃತಿಗಳಲ್ಲಿ ಪ್ರಬುದ್ಧ ರಾಜಕೀಯ ಚಿಂತನೆ, ಸಾಮಾಜಿಕ ವಿಶ್ಲೇಷಣೆ, ಅಧ್ಯಾತ್ಮಿಕ ನೋಟಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಅಡಿಗರ ಸಾಹಿತ್ಯದ ಕುರಿತು ಮಾತನಾಡಿದ ಸಾಗರದ ಉಪನ್ಯಾಸಕ ವಿ. ಗಣೇಶ ಅವರು ಅಡಿಗರನ್ನು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ ಎಂದು ಬಣ್ಣಿಸಿ, ಅವರು ತಮ್ಮ ಕಾವ್ಯದ ಮೂಲಕ ಜೀವಂತವಾಗಿದ್ದಾರೆ ಎಂದರು.

’ಹಾಡಿ, ಮಾತಾಡಿ ಮೂಕಜ್ಜಿ’ ಬಗೆಗೆ ಮಾತನಾಡಿದ ಸಂಶೋಧಕ ಡಾ. ಕನರಾಡಿ ವಾದಿರಾಜ ಭಟ್ ಅನಕ್ಷರಸ್ಥೆಯಾಗಿದ್ದ ಉಳ್ಳೂರು ಮೂಕಾಂಬಿಕೆ ಅಮ್ಮ ನಿಂತಲ್ಲಿ, ಕುಳಿತಲ್ಲಿ ಕಟ್ಟಿ ಹಾಡಿದ ಆಶುಕವನಗಳ ವಿಷಯ ವೈವಿಧ್ಯ, ಭಾಷಾ ಪ್ರೌಢಿಮೆ, ಪ್ರಗತಿಪರ ನಿಲುವು ಅಕ್ಷರ ಲೋಕದ ಅಚ್ಚರಿ. ಅವರ ಹಾಡುಗಳಲ್ಲಿ ಕೆಡುಕಿಗೆ ಪ್ರತಿರೋಧವಿತ್ತು. ಅವು ಮೌಖಿಕ ಸಾಹಿ್ಯದ ಉತ್ಕೃಷ್ಟ ಮಾದರಿ ಎಂದರು.

ಲೇಖಕ ಡಾ. ಶ್ರೀಧರ ಬಳಗಾರ ಮತ್ತು ಭುವನೇಶ್ವರಿ ಹೆಗಡೆ ’ಪ್ರಚಂಡ ಶ್ರೀಧರರು’ ಕುರಿತು ವಿಷಯ ಮಂಡಿಸಿ ಬಿ. ಎಚ್. ಶ್ರೀಧರರ ವ್ಯಕ್ತಿತ್ವ, ಪಾಂಡಿತ್ಯ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅವರು ರಚಿಸಿದ ಕೃತಿಗಳ ಮೇಲೆ ಬೆಳಕು ಚೆಲ್ಲಿದರು. ತಮ್ಮ ನಿಲುವುಗಳ ವಿಚಾರದಲ್ಲಿ ಸಂವಾದ ಮತ್ತು ರಾಜಿಗೊಪ್ಪದ ಪ್ರಖರ ಪ್ರಜ್ಞೆಯಿಂದ ಅವರು ಪರಂಪರೆಯ ಕಾವಲುಗಾರನ ಕೆಲಸ ನಿರ್ವಹಿಸಿದರು ಎಂದರು.

ಯು. ರಮೇಶ ವೈದ್ಯ ಸ್ವಾಗತಿಸಿದರು. ಯು. ಸುಬ್ರಹ್ಮಣ್ಯ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಐತಾಳ್ ನಿರೂಪಿಸಿದರು.
ನಂತರ ನಡೆದ ಮುಕ್ತಾಯ ಸಮಾರಂಭದಲ್ಲಿ ಲೇಖಕಿ ವೈದೇಹಿ, ಡಾ. ಎಚ್. ಶಾಂತಾರಾಮ, ಜಯರಾಮ ಅಡಿಗ ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X