Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತಾಯಿ ಕಣ್ಣಿನ ನೋಟ-ಕಾಲಜ್ಞಾನಿಯ ಬೆಡಗು

ತಾಯಿ ಕಣ್ಣಿನ ನೋಟ-ಕಾಲಜ್ಞಾನಿಯ ಬೆಡಗು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ31 Aug 2017 12:16 AM IST
share
ತಾಯಿ ಕಣ್ಣಿನ ನೋಟ-ಕಾಲಜ್ಞಾನಿಯ ಬೆಡಗು

ಕರ್ನಾಟಕ ಸಾಹಿತ್ಯ ಅಕಾಡಮಿ ಇವರು ಹೊರತಂದಿರುವ ‘ಸಣ್ಣ ಕತೆ-2015’ ಕೃತಿಯನ್ನು ವಿನಯಾ ಒಕ್ಕುಂದ ಸಂಪಾದಿಸಿದ್ದಾರೆ. 2015ರ ವರ್ಷದಲ್ಲಿ ಹೊರಬಂದಿರುವ ಬೇರೆ ಬೇರೆ ಸಂದರ್ಭದ ಸಣ್ಣ ಕತೆಗಳನ್ನು ಇಲ್ಲಿ ಒಟ್ಟು ಸೇರಿಸುವ ಪ್ರಯತ್ನ ನಡೆದಿದೆ. ವಿವಿಧ ಸಮುದಾಯ, ಸಂಸ್ಕೃತಿ, ರಾಜಕೀಯ ಸಂದರ್ಭಗಳನ್ನು, ಆಯಾ ಕಾಲಘಟ್ಟದ ತಲ್ಲಣಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಈ ಕತೆಗಳಲ್ಲಿ ನಾವು ಕಾಣಬಹುದಾಗಿದೆ. 20 ಪುಟಗಳ ಕತೆಗಳಿಂದ ಹಿಡಿದು ನಾಲ್ಕು ಸಾಲುಗಳಲ್ಲಿ ಮುಗಿಯುವ ಕತೆಗಳವರೆಗೆ ಬೇರೆ ಬೇರೆ ರೀತಿಯ ಓದಿನ ಅನುಭವವನ್ನು ಈ ಕೃತಿ ನಮಗೆ ನೀಡುತ್ತದೆ. ಸಂಪಾದಕಿ ಹೇಳುವಂತೆ, ಒಂದು ವರ್ಷದ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸಣ್ಣ ಕತೆಗಳ ಮರು ಓದು ಇದು. ತನ್ನ ದೇಶ ಕಾಲ ಸಂದರ್ಭಗಳ ನುಡಿ ರೂಪಕವಾಗಿದೆ ಈ ಕತೆಗಳು. ಸಾಹಿತ್ಯ ಮತ್ತು ಸಮಾಜದಲ್ಲಿ ಸಂಭವಿಸುತ್ತಿರುವ ಪಲ್ಲಟ ಪ್ರಕ್ರಿಯೆಯ ನಾಡಿ ಶೋಧ ನೆಯ ಗುಣ ಇವುಗಳಲ್ಲಿದೆ. ತಾಯಿ ಕಣ್ಣಿನ ನೋಟ ಮತ್ತು ಕಾಲಜ್ಞಾನಿಯ ನುಡಿ ಬೆಡಗು ಇಲ್ಲಿಯ ಯಶಸ್ವೀ ಕಥೆಗಳ ಲಕ್ಷಣವಾಗಿದೆ. ಇಲ್ಲಿಯ ಕಥೆಗಳ ಮುಖ್ಯಧಾರೆಯಿರುವುದು ಜಾಗತೀಕರಣದ ಮುಕ್ತ ಮಾರುಕಟ್ಟೆಯು ಜನಬದುಕನ್ನು ತಲ್ಲಣಗೊಳಿಸಿರುವ ಬಗೆಯನ್ನು ಅನ್ವೇಷಿಸಿಕೊಳ್ಳುವಲ್ಲಿ. ಜನ ಬದುಕಿನಲ್ಲಿ ಅನಗತ್ಯ ನೆಮ್ಮದಿ ಹಾಳುಗೆಡಹುವ ಜ್ಯೋತಿಷ್ಯ ವಾಸ್ತುಗಳಂತಹ ವೌಢ್ಯಗಳನ್ನು ಊರೆಂಬೋ ಊರಿನ ಸಾಮಾಜಿಕ ಆರ್ಥಿಕ ರಚನೆಗಳೇ ಬುಡಕಡಿದು ಬದುಕಿನ ತ್ರಾಣವೇ ಲೂಟಿಯಾಗಿರುವುದನ್ನು ಇಲ್ಲಿನ ಕಥೆಗಳು ಹೇಳುತ್ತವೆ.
   ಇಲ್ಲಿ ಸುಮಾರು 32 ಕಥೆಗಳಿವೆ. ಅನುಪಮಾ ಪ್ರಸಾದ್, ಸಿದ್ದನಗೌಡ ಪಾಟೀಲ, ಅಬ್ಬಾಸ್ ಮೇಲಿನ ಮನಿ, ಎಚ್. ನಾಗವೇಣಿ, ಉಮಾರಾವ್, ಟಿ. ಎಸ್. ಗೊರವರ, ಎಸ್. ಗಂಗಾಧರಯ್ಯ, ನಾಗರಾಜ ವಸ್ತಾರೆ, ವೈದೇಹಿ, ನಾ. ಡಿಸೋಜ, ಜೋಗಿ, ವಸುಧೇಂದ್ರ, ಫಕೀರ್ ಮಹಮದ್ ಕಟ್ಪಾಡಿ, ಬಿ. ಎಂ. ಬಶೀರ್, ಸುನಂದಾ ಪ್ರಕಾಶ ಕಡಮೆ ಹೀಗೆ ಹಲವು ಹಿರಿ ಕಿರಿಯ ಕಥೆಗಾರರ ಸಂಗಮ ಇದು. ಕಥೆ ಹೇಳುವ ರೀತಿಯಿಂದ ಹಿಡಿದು, ಕತೆಯ ವಸ್ತುವನ್ನು ಗ್ರಹಿಸುವ ರೀತಿಯವರೆಗೆ ವಿವಿಧ ಪ್ರಯೋಗಗಳನ್ನು ಇಲ್ಲಿ ಕಾಣಬಹುದು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕತೆಗಳು ಇವಾಗಿರುವುದರಿಂದ ಅವುಗಳಿಗೆ ತನ್ನದೇ ಮಿತಿಗಳೂ ಇವೆ ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಕತೆಗಳು ನಾಡಿನ ಕಥೆಗಾರರನ್ನು ಸಂಪೂರ್ಣ ಪ್ರತಿನಿಧಿಸುವುದಿಲ್ಲ. ಹಾಗೆಯೇ ವಸ್ತು ಆಯ್ಕೆಯ ಸಂದರ್ಭಗಳಲ್ಲೂ ಪತ್ರಿಕೆಗಳು ತಮ್ಮದೇ ಆದ ಕೆಲವು ಒಲವು, ನಿಲುವುಗಳನ್ನು ಇಟ್ಟುಕೊಂಡಿರುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿಯೂ ಕೆಲವು ಕತೆಗಾರರನ್ನು ಸಂಪರ್ಕಿಸಿ ಕತೆಗಳನ್ನು ಸಂಗ್ರಹಿಸುವ ಅಗತ್ಯವಿತ್ತು ಎನ್ನಿಸುತ್ತದೆ. 398 ಪುಟಗಳ ಕೃತಿಯ ಮುಖಬೆಲೆ 300 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X