ದನ ಸಾಗಾಟಕ್ಕೆ ತಡೆ: ಗೋರಕ್ಷಕರು, ಸಾಗಾಟಗಾರರ ವಿರುದ್ಧ ದೂರು
ಮೂಡುಬಿದಿರೆ, ಆ. 31: ಬಕ್ರೀದ್ ಖುರುಬಾನಿಗೆಂದು ಹಣ ಕೊಟ್ಟು ಖರೀದಿಸಿ ತಂದ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ತಡೆದು ಹಲ್ಲೆ ನಡೆಸಿದ ಪ್ರಕರಣವೊಂದು ಮೂಡುಬಿದಿರೆ ಸಮೀಪದ ಮೂಡುಮಾರ್ನಾಡು ಎಂಬಲ್ಲಿ ಸಂಭವಿಸಿದೆ.
ಪ್ರಕರಣ ಸಂಬಂಧ ಮೂಡುಮಾರ್ನಾಡು ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಸೇರಿದಂತೆ ಎರಡೂ ತಂಡಗಳ ಒಟ್ಟು 10 ಮಂದಿಯ ವಿರುದ್ಧ ದೂರು ದಾಖಲಾಗಿದೆ.
ದನ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಸೈಫ್, ಹಬೀಬುಲ್ಲಾ, ನೂಮಾನ್ ಶೈಖ್, ಅಬ್ದುಲ್ ಬಾಶಿ ಹಾಗೂ ಅದನ್ನು ಮಾರಾಟ ಮಾಡಿಸಿಕೊಟ್ಟ ಸಂಜೀವ ಹಾಗೂ ಶೇಖರ ಎಂಬವರು ತಮ್ಮ ಟಾಟಾ ಎಸಿ ವಾಹನದಲ್ಲಿ ಹೋಗುತ್ತಿದ್ದ ವೇಳೆ ಮೂಡುಮಾರ್ನಾಡು ಎಂಬಲ್ಲಿ ತಡೆಯೊಡ್ಡಿರುವ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಭಜರಂಗದಳ ಕಾರ್ಯಕರ್ತರಾದ ಶರತ್, ಸುಮಿತ್ ರಾಜ್, ಶ್ರೀನಾಥ್, ಯಶೋಧರಾ ಹಾಗೂ ಇನ್ನಿತರರ ವಿರುದ್ಧ ದಾಖಲಾಗಿದೆ.
Next Story