Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಾಗಡಿ ಸೀಮೆಯ ಇತಿಹಾಸ-ಸಂಸ್ಕೃತಿ

ಮಾಗಡಿ ಸೀಮೆಯ ಇತಿಹಾಸ-ಸಂಸ್ಕೃತಿ

ನಾನು ಓದಿದ ಪುಸ್ತಕ

ಡಾ.ಎಂ. ಷಡಕ್ಷರಾರಾಧ್ಯಡಾ.ಎಂ. ಷಡಕ್ಷರಾರಾಧ್ಯ2 Sept 2017 8:58 PM IST
share
ಮಾಗಡಿ ಸೀಮೆಯ ಇತಿಹಾಸ-ಸಂಸ್ಕೃತಿ

ಇತ್ತೀಚಿನ ತಲೆಮಾರಿನ ವಿದ್ವಾಂಸರು ಸ್ಥಳೀಯ ನಾಯಕತ್ವ ಆರ್ಥಿಕ ನೆಲೆಗಟ್ಟು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳಲ್ಲಿನ ವಿಚಾರಗಳನ್ನು ಎಚ್ಚರಿಕೆಯಿಂದ ಗಮನಿಸಿ ಜನಜೀವನದ ಎಲ್ಲಾ ಮಗ್ಗುಲುಗಳನ್ನು ಅಧ್ಯಯನ ವ್ಯಾಪ್ತಿಗೆ ಒಳಪಡಿಸುತ್ತಿರುವುದು ಸಂತೋಷದ ಸಂಗತಿ. ಇಂತಹ ಅಧ್ಯಯನಗಳ ಆಸಕ್ತಿಯಿಂದ ಮಾತ್ರ ಚರಿತ್ರೆ ವಸ್ತುನಿಷ್ಠವಾಗಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಇಂತಹ ಸಮಗ್ರ ದೃಷ್ಟಿಕೋನ ಮಾನವ ಜನಾಂಗಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಪ್ರಸ್ತುತ ಒತ್ತಡವೂ ಹೌದು. ಇಂತಹ ಜಾಡಿನಲ್ಲಿ ನಡೆದ ಅಧ್ಯಯನ ಅರ್ಥಪೂರ್ಣವೂ, ಪರಿಪೂರ್ಣವೂ, ನ್ಯಾಯ ಸಮ್ಮತವೂ ಎನಿಸುತ್ತದೆ.

ನಿತ್ಯಪರಿವರ್ತನಾಶೀಲ ಸಮಾಜದಲ್ಲಿ ಜನ ಸಾಮಾನ್ಯರ ಬದುಕನ್ನು ಕಡೆಗಣಿಸುವುದಾದರೆ ಚರಿತ್ರೆ ವಸ್ತುನಿಷ್ಠವಾಗಿರಲು ಸಾಧ್ಯವೇ? ಮಹತ್ವಪೂರ್ಣವಾದ ಕುತೂಹಲಕಾರಿ ಅಂಶಗಳು ದಾಖಲಾಗದಿದ್ದರೆ ನಾಗರಿಕತೆಯ ಸಮಗ್ರ ಚಿತ್ರಣವೆಲ್ಲಿ ದೊರೆಯುತ್ತದೆ. ಚರಿತ್ರೆಯ ಪರಿಪೂರ್ಣ ಅಧ್ಯಯನಕ್ಕೆ ಸಮಜಶಾಸ್ತ್ರ ಮತ್ತು ಮಾನವ ಶಾಸ್ತ್ರೀಯ ದೃಷ್ಟಿಕೋನ ಆವಶ್ಯಕ. ಹೀಗೆ ಅಂತರ ಶಿಸ್ತೀಯ ಅಧ್ಯಯನಕ್ಕೊಳಪಟ್ಟಿರುವ ಪ್ರಸ್ತುತ ಕೃತಿ ಒಂದು ಕಾಲಘಟ್ಟದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಜಾನಪದ, ಕಾನೂನು ಕಟ್ಟಳೆಗಳನ್ನು ಪರಿಚಯಿಸುತ್ತಾ ಇವುಗಳಿಂದ ಅರಳಿ, ರೂಪುಗೊಂಡ ಒಟ್ಟಾರೆ ಬದುಕನ್ನು ಪ್ರತಿಬಿಂಬಿಸುವ ಹೊಸತನ ಇಲ್ಲಿದೆ.

ಈ ದೃಷ್ಟಿಯಿಂದ ಡಾ. ಮುನಿರಾಜಪ್ಪ ಇವರ ಮಾಗಡಿಸೀಮೆ ಇತಿಹಾಸ ಸಂಸ್ಕೃತಿ ಎಂಬ ಸಂಶೋಧನಾ ಕೃತಿ ಮಹತ್ವವೆನಿಸುತ್ತದೆ. ಮಾಗಡಿ ಸೀಮೆಯಾದ್ಯಂತ ಸುತ್ತಾಡಿ ಕ್ಷೇತ್ರಾಧ್ಯಯನ ಮತ್ತು ಶಾಸನಾಧಾರಗಳಿಂದ ರಚನೆಯಾಗಿರುವುದು ಮತ್ತೊಂದು ವೈಶಿಷ್ಟ್ಯ. ಮಾಗಡಿ ಸೀಮೆಯ ಜನತೆಗೆ, ಚರಿತ್ರೆಯ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಕುರಿತ ಸಂಶೋಧಕರಿಗೆ ಹೆಚ್ಚು ಪ್ರಯೋಜನಕಾರಿ. ಮಾಗಡಿ ಸೀಮೆಯ ಚರಿತ್ರೆಯೊಂದಿಗೆ ಸುತ್ತಮುತ್ತಲಿನ ಕುಣಿಗಲ್, ನೆಲಮಂಗಲ, ರಾಮನಗರ ಮತ್ತು ಬೆಂಗಳೂರಿನ ಚರಿತ್ರೆ, ಸಂಸ್ಕೃತಿ ಮೇಲೂ ಬೆಳಕು ಚೆಲ್ಲುವ ಈ ಕೃತಿ ಮುಂದಿನ ಸಂಶೋಧನೆಗೆ ದಿಕ್ಸೂಚಿಯಂತಿದೆ. ಬೌದ್ಧ, ಜೈನ, ಶೈವ, ವೈಷ್ಣವ ಧರ್ಮಗಳ ಚಟುವಟಿಕೆಗಳು, ಧರ್ಮ ಮತ್ತು ಜಾತಿ ಸಂಘರ್ಷ ಹಾಗೂ ಸಮನ್ವಯದ ಮಹತ್ವ ಶಾಸನಾಧಾರಗಳಿಂದ ವಿಶ್ಲೇಷಣೆಗೊಳಪಟ್ಟಿವೆ. ರಾಜ್ಯಾಡಳಿತದ ಮೇಲಿನ ಜಾತಿಧರ್ಮಗಳ ಹಿಡಿತದ ಐತಿಹಾಸಿಕ ಅಧ್ಯಯನ, ಸಂಶೋಧನೆಯನ್ನು ಸಾರ್ಥಕಪಡಿಸಿದೆ. ಇವರಿಂದ ಇಂತಹ ಕೃತಿಗಳು ಇನ್ನಷ್ಟು ಬರಲಿ ಎಂದು ಆಶಿಸಿ ಹಾರೈಸೋಣ.

share
ಡಾ.ಎಂ. ಷಡಕ್ಷರಾರಾಧ್ಯ
ಡಾ.ಎಂ. ಷಡಕ್ಷರಾರಾಧ್ಯ
Next Story
X