ಸೆ.3: ಎಮ್ಮೆ ಕೆರೆ ಮೈದಾನ ಉಳಿಸಲು ಹೋರಾಟ ಸಮಿತಿಯಿಂದ ಪ್ರತಿಭಟನಾ ಪ್ರದರ್ಶನ
ಮಂಗಳೂರು, ಸೆ. 2: ನಗರದ ಬಳಿ ಇರುವ ಎಮ್ಮೆಕೆರೆ ಮೈದಾನದಲ್ಲಿ ಈಜುಕೊಳ ನಿರ್ಮಿಸಲು ಹೊರಟಿರುವ ಕ್ರಮವನ್ನು ಹೋರಾಟ ಸಮಿತಿ ಖಂಡಿಸಿ ಸೆ. 3ರಂದು ಸಂಜೆ 4ಗಂಟೆಗೆ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡ ದಿನಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎಮ್ಮೆ ಕೆರೆಯ ಮೈದಾನದ ಬಳಿ ‘ಎಮ್ಮೆ ಕರೆ ’ಇದೆ ಅದರ ಅಭಿವೃದ್ಧಿ ಆಗಬೇಕು ಆದರೆ ಅದರ ಪಕ್ಕದಲ್ಲಿರುವ ಮೈದಾನದ ಅಭಿವೃದ್ಧಿಯೂ ಅಗಬೇಕಾಗಿದೆ. ಪ್ರಸಕ್ತ ಅಧಿಕಾರಿಗಳು ತಯಾರಿಸಿದ ನಕ್ಷೆಯಲ್ಲಿ ಎಮ್ಮೆ ಕರೆ ಮೈದಾನದಲ್ಲಿಯೇ ಈಜುಕೊಳ ನಿರ್ಮಿಸುವಂತೆ ಯೊಜನೆ ತಯಾರಿಸಿದ್ದಾರೆ ಇದು ಸರಿಯಲ್ಲ. ಈ ಯೋಜನೆಯನ್ನು ತಕ್ಷಣ ಬದಲಾಯಿಸಬೇಕು.ಇಲ್ಲವಾದಲ್ಲಿ ಇಲ್ಲಿನ ಜನರಿಗೆ ಸಾರ್ವಜನಿಕವಾಗಿ ಲಭ್ಯವಾಗಿರುವ ಏಕೈಕ ಆಟದ ಮೈದಾನವೂ ಇಲ್ಲವಾಗುತ್ತದೆ ಎಂದು ದಿನಕರ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಯೋಗಿಶ್ ಶೆಟ್ಟಿ ಜೆಪ್ಪು,ಗಣೇಶ್ ಕುಮಾರ್,ಎಮ್ಮೆಕೆರೆ ಸಲಾಂ,ಜ್ಯೂತಿಕಾ ಜೈನ್,ಹುಸೇನ್, ಗಿರಿಶ್,ಹುಸೇನ್,ಅವಿನಾಶ್ ಅಂಚನ್,ಪ್ರದೀಪ್ ,ಸಿರಾಜ್,ಪ್ರಶಾಂತ್ ಕಡಬ ಮೊದಲಾದವರು ಉಪಸ್ಥಿತರಿದ್ದರು.