Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು...

‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು ‘ಲಿಂಗೋದ್ಭವ’ ಪ್ರಶ್ನಿಸುವುದು ದ್ವಂದ್ವ: ಬಿ.ಪಿ.ಶಿವಮೂರ್ತಿ

ವಾರ್ತಾಭಾರತಿವಾರ್ತಾಭಾರತಿ3 Sept 2017 6:03 PM IST
share
‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು ‘ಲಿಂಗೋದ್ಭವ’ ಪ್ರಶ್ನಿಸುವುದು ದ್ವಂದ್ವ: ಬಿ.ಪಿ.ಶಿವಮೂರ್ತಿ

ಚಿಕ್ಕಮಗಳೂರು, ಸೆ.3: ವೀರಶೈವ-ಲಿಂಗಾಯತರೆಲ್ಲಾರೂ ಪಂಚಾಚಾರ್ಯರ ಒಂದಲ್ಲೊಂದು ಗೋತ್ರ-ಸೂತ್ರಕ್ಕೆ ಸೇರಿದವರೇ ಆಗಿರುತ್ತಾರೆ.  ‘ಲಿಂಗೈಕ್ಯ’ ಎಂಬುದನ್ನು ಒಪ್ಪುವವರು ‘ಲಿಂಗೋದ್ಭವ’ ಪ್ರಶ್ನಿಸುವುದು ದ್ವಂದ್ವ ಎಂದು ಆಧ್ಯಾತ್ಮ ಚಿಂತಕ ಬಿ.ಪಿ.ಶಿವಮೂರ್ತಿ ನುಡಿದರು.

ಜಂಗಮಬಳಗ ನಗರದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವ ಶಾಸ್ತ್ರಿ ಸಭಾಂಗಣದಲ್ಲಿ ಕೆ.ಎಂ.ಬಸವರಾಧ್ಯ ಸ್ಮರಣಾರ್ಥ ಆಯೋಜಿಸಿದ್ದ ಜಂಗಮ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೈತಿಕತೆ ಮತ್ತು ವೈಚಾರಿಕತೆ ನಾಣ್ಯದ ಎರಡುಮುಖ. ಕಲುಷಿತಗೊಂಡ ಮನಸ್ಸನ್ನು ಶುದ್ಧೀಕರಿಸಲು ಧರ್ಮಾಚರಣೆ ಅಗತ್ಯ. ದೇಹದ ಶುದ್ಧಿಗೆ ಸ್ನಾನದಂತೆ  ಮನಸ್ಸಿನ ಶುದ್ಧಿಗೆ ಭಗವಂತನ ನಾಮಸ್ಮರಣೆ ಅಗತ್ಯ. ಸಕಲ ಜೀವಾತ್ಮರಿಗೂ ಒಳಿತನ್ನೆ ಬಯಸಿದ ವೀರಶೈವ ಧರ್ಮವನ್ನು ಯುಗ ಯುಗಗಳಲ್ಲಿ ಅವತರಿಸಿದ ಪಂಚಾಚಾರ್ಯರು ಶಿವಸಿದ್ಧಾಂತದ ಮೂಲಕ ಸಾರಿದ್ದಾರೆ. ಲಿಂಗೋದ್ಭವರಾದ ಪಂಚ ಆಚಾರ್ಯರಿಗೆ ಪ್ರತ್ಯೇಕ ಗೋತ್ರ-ಸೂತ್ರಗಳಿದ್ದು ಪ್ರತಿಯೊಬ್ಬ ವೀರಶೈವರೂ ಇದರ ವ್ಯಾಪ್ತಿಗೆ ಬರುತ್ತಾರೆ. ಒಂದು ಧರ್ಮಕ್ಕೆ ನೈತಿಕ, ಸಾಂಪ್ರದಾಯಕ ಮತ್ತು ದಾರ್ಶನಿಕ ವಿಚಾರಗಳು ಅಗತ್ಯ ಎಂದು ಹೇಳಿದರು.

ವೀರಶೈವ ಲಿಂಗಾಯತ ಭಿನ್ನವಲ್ಲ.  ಒಂದು ಗ್ರಾಂಥಿಕ ಶಬ್ದವಾದರೆ ಮತ್ತೊಂದು ರೂಢಿನಾಮ.  ಅಲ್ಪಸಂಖ್ಯಾರ ಸೌಲಭ್ಯ ಪಡೆಯಲು ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ.  ಧಾರ್ಮಿಕ ಸಿದ್ಧಾಂತ ಒಂದೇ ಆಗಿದ್ದು,  ಆಚಾರ ಸಿದ್ಧಾಂತದಲ್ಲಿ ಮಾತ್ರ ಸ್ವಲ್ಪ ಭಿನ್ನತೆ ಕಾಣುತ್ತೇವೆ. ಬಸವಣ್ಣ ವೇದವಿರೋಧಿಗಳಲ್ಲ, ಅದರಲ್ಲಿರುವ ಹಿಂಸಾಮಯತೆಯನ್ನಷ್ಟೇ ವಿರೋಧಿಸಿದರು. ಶಿವಾಗಮಗಳಲ್ಲಿ ಉತ್ತರಭಾಗವನ್ನು ಬಸವಣ್ಣನವರು ಗೌರವದಿಂದ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.

“ಸಾರಿನೊಳಗಿದ್ದರೂ ಸೌಟಿಗೆ ಸಾರಿನ ರುಚಿ ಗೊತ್ತಿಲ್ಲ’ ಎನ್ನುವಂತೆ ಹಲವರಿಗೆ ಸತ್ಯಸಂಗತಿ ಅರಿವಾಗ ಬೇಕೆಂದರು. ವಚನಸಾಹಿತ್ಯ ಧರ್ಮ ಗ್ರಂಥವಾಗುವುದು ಕಷ್ಟ. ಏಕೆಂದರೆ ವಚನ ಸಾಹಿತ್ಯದಲ್ಲಿ ಹಲವರ ಅಭಿಪ್ರಾಯ-ಭಿನ್ನತೆ ಕಾಣುತ್ತಿರುವಾಗ ಇದು ಹೇಗೆ ಧರ್ಮ ಗ್ರಂಥವೆನಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿದರು.

ಅರ್ಚಕ ಇಂದಾವರದ ವೇ.ಮೂ.ಪುಪ್ಪಯ್ಯ ಶಿವಾಷ್ಟೋತ್ತರ ಶತನಾಮವಳಿಯನ್ನು ಪಠಿಸಿ ಮಾತನಾಡಿ ,‘ಓಂಕಾರ’ ಇರುವಲ್ಲಿ ‘ಅಹಂಕಾರ’ ಇರುವುದಿಲ್ಲ. ದೇವಸ್ತುತಿಯಿಂದ ಮನಸ್ಸಿನಲ್ಲಿ ಶಾಂತಿ-ನೆಮ್ಮದಿ ಮೂಡುತ್ತದೆ ಎಂದರು. 

ಶಿಕ್ಷಕ ಆಲೂರು ಪರಮೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸತ್ಸಂಗದಲ್ಲಿ ಅಪಾರ ಶಕ್ತಿ ಇದೆ.  ಸದ್ವಿಚಾರಗಳ ಮಂಥನದಿಂದ ಒಳ್ಳೆಯ ನಡೆ-ನುಡಿ-ಆಚರಣೆಗಳಿಗೆ ಪ್ರೇರಣೆಯಾಗುತ್ತದೆ ಎಂದು ವಿವರಿಸಿದರು.

ನಿವೃತ್ತ ಡಿಪ್ಯೂಟಿ ತಹಶೀಲ್ದಾರ್ ಚಂದ್ರಶೇಖರ್ ಪ್ರಾಸ್ತಾವಿಸಿದ್ದು, ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ರಂಗಕರ್ಮಿ ಆರ್.ಚಂದ್ರಶೇಖರ್ ನಿರೂಪಿಸಿ, ಶಿಕ್ಷಕಿ ಅಂಬಿಕಾ ಸದಾಶಿವ ವಂದಿಸಿದರು. ಸುಧಾಪರಮೇಶ್ ಪ್ರಾರ್ಥಿಸಿದ್ದು, ರೇಖಾಪ್ರಸನ್ನ ತಂಡ ರೇಣುಕಗೀತೆ ಹಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X