Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ4 Sept 2017 12:10 AM IST
share
ಓ ಮೆಣಸೇ..

ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸಹಿಸುವುದಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಉಳಿದೆಲ್ಲ ಹೆಸರಲ್ಲಿ ನಡೆಯುವ ಹಿಂಸೆ ಸಹಿಸುತ್ತೀರಿ ಎಂದಾಯಿತು.
 ---------------------

   
 ಮುಂದಿನ ಮಹಾಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಲು ಮಹಾಭಾರತ ಮಿತ್ರಕೂಟ ರಚಿಸಲಾಗುವುದು

- ಶರದ್ ಯಾದವ್, ಜೆಡಿಯು ಭಿನ್ನಮತೀಯ ನಾಯಕ

ಶಕುನಿ ಪಾತ್ರವನ್ನು ನಿರ್ವಹಿಸಲು ನಾಯಕರ ನಡುವೆ ಸ್ಪರ್ಧೆ ನಡೆಯುತ್ತಿದೆಯಂತೆ.

---------------------   
 ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಸಾಕಾರಗೊಳ್ಳಲಿದೆ

- ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಅಧ್ಯಕ್ಷ

ಬಿಜೆಪಿಯ ವರಿಷ್ಠರೀಗ ಯಡಿಯೂರಪ್ಪ ಮುಕ್ತ ಬಿಜೆಪಿಯ ಕನಸು ಕಾಣುತ್ತಿದ್ದಾರೆ.

---------------------
ಯಾವುದೇ ಕ್ಷೇತ್ರದ ಶಿಖರದಲ್ಲಿ ಕುಳಿತವರು ಸಮಾಜ ಮುಜುಗರ, ಅವಮಾನ ಪಡುವಂತಹ ಕೃತ್ಯಗಳನ್ನು ಮಾಡಬಾರದು

- ಬಾಬಾ ರಾಮ್‌ದೇವ್, ಯೋಗ ಗುರು

ತಮ್ಮಂಥವರು ಶಿಖರದಲ್ಲಿ ಕುಳಿತಿರುವುದೇ ಸಮಾಜದ ಪಾಲಿಗೆ ಮುಜುಗರ, ಅವಮಾನ.

---------------------
ಆರೋಗ್ಯವಂತ ದೇಹ ದೇಗುಲವಿದ್ದಂತೆ

- ಜೆ.ಆರ್.ಲೋಬೋ, ಶಾಸಕ

ಅದಕ್ಕೇ ದೇಗುಲದೊಳಗೆ ಬಡವರಿಗೆ, ದಲಿತರಿಗೆ ಮುಕ್ತ ಪ್ರವೇಶ ಇಲ್ಲದೇ ಇರುವುದು.

---------------------

ಈಗ ನಿಭಾಯಿಸುತ್ತಿರುವ ಖಾತೆಯಲ್ಲಿ ತೃಪ್ತಿಯಿದೆ
-ಡಿ.ಕೆ. ಶಿವಕುಮಾರ್, ಸಚಿವ

ತಮ್ಮ ಬ್ಯಾಂಕ್ ಖಾತೆಯ ಕುರಿತಂತೆ ವಿವರಗಳೇ?
 ---------------------
ಕಾಂಗ್ರೆಸ್‌ನವರು ಎಷ್ಟು ದಲಿತ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ?

-ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ಇನ್ನೊಬ್ಬರ ಮನೆ ಹೆಣ್ಣು ಮಕ್ಕಳನ್ನು ಕಾಂಗ್ರೆಸ್ ಕುತ್ತಿಗೆಗೆ ಕಟ್ಟಲು ನಾಚಿಕೆಯಾಗುವುದಿಲ್ಲವೇ ನಿಮಗೆ?
 ---------------------
ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ

-ಎಂ.ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

ಅವರಿಗೆ ಪ್ರೋತ್ಸಾಹ ನೀಡುವ ಯೋಗ್ಯ ನಾಯಕರ ಕೊರತೆಯಷ್ಟೇ ಇದೆ.

---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ತಮಗೆ ಸಹಾಯ ಮಾಡಿದವರನ್ನೆೆಲ್ಲ ದೂರ ತಳ್ಳುತ್ತಿದ್ದಾರೆ
 -ಎಚ್.ವಿಶ್ವನಾಥ್, ಮಾಜಿ ಸಂಸದ

ಬಹುಶಃ ನೀವೀಗ ಅವರಿಂದ ಪ್ರತಿ ಸಹಾಯ ಬಯಸಿರಬೇಕು.

--------------------- 
ರಾಹುಲ್ ಗಾಂಧಿ ದಲಿತ ಹೆಣ್ಣು ಮಗಳನ್ನು ಮದುವೆಯಾಗಲಿ
- ಗೋವಿಂದ ಕಾರಜೋಳ, ಮಾಜಿ ಸಚಿವ

ಮದುವೆಯಾದ ಹೆಣ್ಣು ಮಗಳನ್ನು ನಡುನೀರಿನಲ್ಲಿ ಬಿಡುವುದಕ್ಕಿಂತ, ಮದುವೆಯಾಗದೇ ಇರುವುದೇ ವಾಸಿ.

---------------------
ರಾಹುಲ್ ಪ್ರಭಾವಿಯಾಗಲು ಸಮಯಬೇಕು
- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಸಮಯ ಸಾಧಕರೇ ತುಂಬಿಕೊಂಡಿರುವಾಗ, ಸಮಯವೆಲ್ಲಿ ಸಿಗಬೇಕು?
 ---------------------
ಐಟಿ ದಾಳಿಯಿಂದ ನಮ್ಮ ಆತ್ಮ ಸ್ಥೈರ್ಯ ಕುಸಿದಿಲ್ಲ

- ಡಿ.ಕೆ.ಶಿವಕುಮಾರ್, ಸಚಿವ

ಸಿದ್ದರಾಮಯ್ಯರ ಆತ್ಮಸ್ಥೈರ್ಯ ಹೆಚ್ಚಿದೆಯಂತೆ.

---------------------
ಹಿಂದೂ ಭಯೋತ್ಪಾದನೆ ಪದಕ್ಕೆ ನನ್ನ ತೀವ್ರ ಆಕ್ಷೇಪ ಇದೆ

- ರಾಜೀವ್ ಮಹರ್ಷಿ, ಕೇಂದ್ರ ಗೃಹ ಕಾರ್ಯದರ್ಶಿ

ಕೇಸರಿ ಭಯೋತ್ಪಾದನೆ ಎನ್ನುವುದೇ ಅತ್ಯುತ್ತಮ.
 ---------------------
ಪಂಚಕುಲಾ ಹಿಂಸಾಚಾರಕ್ಕೆ ತೀರ್ಪು ಪ್ರಕಟಿಸಿದ ಜಡ್ಜ್ ಕಾರಣ

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಹಲವು ಜಡ್ಜ್‌ಗಳು ನೀಡಿರುವ ತಪ್ಪು ತೀರ್ಪಿನ ಕಾರಣದಿಂದಲೇ ನೀವೀಗ ದಿಲ್ಲಿಯಲ್ಲಿ ಕುರಿತು ಈ ರೀತಿ ಮಾತನಾಡಲು ಸಾಧ್ಯವಾಗಿರುವುದು.

---------------------
ಬಿಜೆಪಿ ಪಾಲಿಗೆ ಕಾರ್ಯಕರ್ತರೇ ರಿಯಲ್ ಸ್ಟಾರ್‌ಗಳು

- ಸಿ.ಟಿ ರವಿ, ಶಾಸಕ

ರಿಯಲ್ ಎಸ್ಟೇಟ್ ಸ್ಟಾರ್‌ಗಳಿರಬೇಕು.

---------------------
ನಾಡಿನ ಭಾಷೆ , ಧ್ವಜದ ಬಗ್ಗೆ ಸರಕಾರವು ಜನತೆಯಲ್ಲಿ ಗೊಂದಲ ಮೂಡಿಸುತ್ತಿದೆ

-ಶೋಭಾ ಕರಂದ್ಲಾಜೆ, ಸಂಸದೆ

ಭಾಷೆ, ಧ್ವಜದ ಬಗ್ಗೆ ನಿಮಗೇ ಗೊಂದಲವಿರುವಂತಿದೆ.

---------------------
ಜೀವವಿರುವವರೆಗೆ ಸಿದ್ದರಾಮಯ್ಯರ ದುಷ್ಟ ಸರಕಾರದ ಎದುರು ಭಿಕ್ಷೆ ಬೇಡುವುದಿಲ್ಲ

- ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ

ರೋಲ್‌ಕಾಲ್ ಮಾಡಿಯೇ ಬದುಕುತ್ತೇನೆ ಎಂದು ನಿರ್ಧರಿಸಿದಂತಿದೆ.

---------------------
ದೇವೇಗೌಡರು ಬದುಕಿರುವವರೆಗೆ ಮಾತ್ರ ನಾನು ರಾಜಕೀಯ ಮಾಡುತ್ತೇನೆ, ಬಳಿಕ ಮನೆಯಲ್ಲೇ ಕೂರುತ್ತೇನೆ

- ಎಚ್.ಡಿ.ರೇವಣ್ಣ, ಮಾಜಿ ಸಚಿವ

ಕುಮಾರಸ್ವಾಮಿಯ ಮೇಲೆ ಭರವಸೆಯಿಲ್ಲ ಎಂದಾಯಿತು.

---------------------
ನನ್ನ ಬಣ್ಣ ಕೇಸರಿಯಲ್ಲ

- ಕಮಲ್ ಹಾಸನ್, ಚಿತ್ರ ನಟ

ಆಗಾಗ ಬಣ್ಣ ಬದಲಿಸುವುದು ಒಳ್ಳೆಯ ರಾಜಕೀಯ ಅಲ್ಲ.

---------------------
ನೋಟು ಅಮಾನ್ಯ ಸ್ವತಂತ್ರ ಭಾರತದ ಅತಿದೊಡ್ಡ ಹಗರಣ

- ಸಂಜಯ್ ಸಿಂಗ್, ಆಪ್ ನಾಯಕ
  ಭಾರತ ಸ್ವತಂತ್ರಗೊಂಡದ್ದೇ ಒಂದು ಬೃಹತ್ ಹಗರಣ ಎಂದು ಹೇಳುತ್ತಿದ್ದಾರೆ ಬಿಜೆಪಿ ನಾಯಕರು.
 --------------------

ಜಿಲ್ಲೆಯಲ್ಲಿ ಧಾರ್ಮಿಕ ಭಾವನೆ ಜಾಗೃತಗೊಂಡಿದೆ

- ಪ್ರಮೋದ್ ಮಧ್ವ್ವರಾಜ್, ಸಚಿವ

ಪೊಲೀಸರಿಗೆ ಗಲಭೆ ನಡೆಯ ಬಹುದಾದ ಸೂಚನೆ ನೀಡುತ್ತಿದ್ದೀರಿ ಎಂದುಕೊಳ್ಳುತ್ತಿದ್ದೇವೆ.

share
ಪಿ.ಎ.ರೈ
ಪಿ.ಎ.ರೈ
Next Story
X